Party Rounds: ಕಾಂಗ್ರೆಸ್‌ನಲ್ಲಿ ಮತ್ತೆ ಅಸಮಾಧಾನ ಸ್ಫೋಟ..!

Aug 2, 2023, 10:15 PM IST

ಬೆಂಗಳೂರು(ಆ.02):  ಕಾಂಗ್ರೆಸ್‌ ಶಾಸಕರೊಬ್ಬರು ತಮ್ಮ ಭಾಷಣದ ಮೂಲಕ ಸುದ್ದಿಯಾಗಿದ್ದಾರೆ. ಮಂತ್ರಿಗಿರಿ ಸಿಗದಿದ್ದಕ್ಕೆ ಕೊಪ್ಪಳ ಜಿಲ್ಲೆಯ ಯಲಬುರ್ಗಾ ಶಾಸಕ ಬಸವರಾಜ ರಾಯರೆಡ್ಡಿ ಅವರು ತಮ್ಮ ಅಸಮಾಧಾನವನ್ನ ಹೊರಹಾಕಿದ್ದಾರೆ. ಬಿ.ಕೆ. ಹರಿಪ್ರಸಾದ್‌, ಬಿ.ಆರ್‌. ಪಾಟೀಲ್‌ ಬಳಿಕ ಇದೀಗ ರಾಯರೆಡ್ಡಿ ಅವರೂ ಕೂಡ ತಮ್ಮ ಅಸಮಾಧಾನವನ್ನ ಹೊರಹಾಕಿದ್ದಾರೆ. ದೆಹಲಿಯಲ್ಲಿ ಒಗ್ಗಟ್ಟಿನ ಸಭೆ ನಡೆಯುತ್ತಿದ್ದರೆ ಇತ್ತ ಕರ್ನಾಟಕದಲ್ಲಿ ಅಸಮಾಧಾನ ಮತ್ತೆ ಸ್ಫೋಟವಾಗಿದೆ. ಈ ಮೂಲಕ ಮಂತ್ರಿಗಿರಿ ಸಿಗದಿದ್ದಕ್ಕೆ ಬಸವರಾಜ ರಾಯರೆಡ್ಡಿ ಬಂಡೆದ್ರಾ ಎಂಬ ಪ್ರಶ್ನೆಗಳು ಇದೀಗ ಉದ್ಭವವಾಗಿವೆ. 

News 360°: ಮಣಿಪುರ ಹಿಂಸಾಚಾರಕ್ಕೆ ಧರ್ಮ ಸಂಘರ್ಷ ಕಾರಣನಾ?