ಅಪ್ಪ-ಮಗನ ವಿರುದ್ಧ ಯತ್ನಾಳ್ ಗೌಡ್ರಿಗೆ ಏಕಿಂಥಾ ದ್ವೇಷ?: ಬಿಜೆಪಿಯಲ್ಲಿ ಧಗಧಗಿಸುತ್ತಿರುವ ಸೇಡಿನ ಕಥೆ

ಅಪ್ಪ-ಮಗನ ವಿರುದ್ಧ ಯತ್ನಾಳ್ ಗೌಡ್ರಿಗೆ ಏಕಿಂಥಾ ದ್ವೇಷ?: ಬಿಜೆಪಿಯಲ್ಲಿ ಧಗಧಗಿಸುತ್ತಿರುವ ಸೇಡಿನ ಕಥೆ

Published : Dec 05, 2024, 11:58 AM ISTUpdated : Dec 05, 2024, 12:00 PM IST

ಬಿಜೆಪಿ ಬಣಬಡಿದಾಟದ ಚೆಂಡು ಸದ್ಯ ಹೈಕಮಾಂಡ್ ಅಂಗಳಕ್ಕೆ ಬಂದು ನಿಂತಿದೆ. ಯತ್ನಾಳ್ ಅವರೇ ಬನ್ನಿ.. ನಮ್ಮ ಪ್ರಶ್ನೆಗೆ ಉತ್ತರಿಸಿ ಎಂದು ಶಿಸ್ತು ಪಾಲನಾ ಸಮಿತಿ ಕೊಟ್ಟಿದ್ದ ನೊಟೀಸ್ಗೆ ಯತ್ನಾಳ್ ಉತ್ತರಿಸಿದ್ದಾರೆ. ಆರು ಪುಟಗಳ ಉತ್ತರ ಕೊಟ್ಟಿದ್ದು, ಆ ಉತ್ತರದಿಂದ ಭಿನ್ನಮತದದ ಬೆಂಕಿ ಆರುತ್ತಾ ಅಥವಾ ಮತ್ತೆ ಧಗಧಗಿಸುತ್ತಾ ಅನ್ನೋ ಆತಂಕ ಪಕ್ಷದೊಳಗೆ ಮನೆ ಮಾಡಿದೆ.

ಬೆಂಗಳೂರು(ಡಿ.05):  ನಿನಗೆ ನಾನು.. ನನಗೆ ನೀನು ಅಂತಿದ್ದೋರು.. ನಾನಾ ನೀನಾ ಅಂತಿದ್ದಾರೆ.  ಶಿಕಾರಿ ವೀರನ ಆಗಿನ ಆಪ್ತ..ಈಗಿನ ಆಜನ್ಮ ವೈರಿ..ಬಿಎಸ್ವೈ ಕುರ್ಚಿ ರಕ್ಷಣೆಗೆ ನಿಂತಿದ್ದ ಕಟ್ಟಪ್ಪ ತಿರುಗಿ ಬಿದ್ದದ್ದೇಕೆ..? ಅಪ್ಪನ ಮಗನ ವಿರುದ್ಧ ಯತ್ನಾಳ್ಗೆ ಯಾಕಿಂಥಾ ದ್ವೇಷ..? ಗಳಸ್ಯ-ಕಂಠಸ್ಯ ಸ್ನೇಹದಲ್ಲಿ ಸೇಡಿನ ಕಿಡಿ ಧಗಧಗಿಸಿದ್ದೇಕೆ..? ಇದು ಕಮಲ ಕೋಟೆಗೆ ಹೊತ್ತಿಕೊಂಡಿರುವ ಬಣ ಬಡಿದಾಟದ ಬೆಂಕಿಯ ಮೂಲದ ಚರಿತ್ರೆ, ಇದೇ ಇವತ್ತಿನ ಸುವರ್ಣ ಸ್ಪೆಷಲ್ ಸ್ನೇಹ ಸೇಡು ಜ್ವಾಲಾಗ್ನಿ.

ಸದ್ಯ ರಾಜ್ಯ ಬಿಜೆಪಿಯ ಅಂತರ್ಯುದ್ಧ ದೆಹಲಿ ಅಂಗಳಕ್ಕೆ ತಲುಪಿದೆ. ಶಿಸ್ತು ಪಾಲನಾ ಸಮಿತಿ ಕೊಟ್ಟಿದ್ದ ನೊಟೀಸ್‌ಗೆ ಯತ್ನಾಳ್ ಉತ್ತರಿಸಿದ್ದಾರೆ. ಹಾಗಿದ್ರೆ ಇಲ್ಲಿಗೆ ಈ ಅಂರ್ತಯುದ್ಧ ಅಂತ್ಯವಾಗುತ್ತಾ..? ಅಥವಾ ಮತ್ತಷ್ಟು ಸ್ಟೋಟವಾಗುತ್ತಾ ಅಂತ ನೋಡೋಣ. 

ವಿಶ್ವದಾದ್ಯಂತ 12 ಸಾವಿರ ಸ್ಕ್ರೀನ್​ಗಳಲ್ಲಿ ಪುಷ್ಪ ರಿಲೀಸ್; ಮೊದಲ ದಿನವೇ 300 ಕೋಟಿ ಮುಟ್ಟುತ್ತಾ?

ಬಿಜೆಪಿ ಬಣಬಡಿದಾಟದ ಚೆಂಡು ಸದ್ಯ ಹೈಕಮಾಂಡ್ ಅಂಗಳಕ್ಕೆ ಬಂದು ನಿಂತಿದೆ. ಯತ್ನಾಳ್ ಅವರೇ ಬನ್ನಿ.. ನಮ್ಮ ಪ್ರಶ್ನೆಗೆ ಉತ್ತರಿಸಿ ಎಂದು ಶಿಸ್ತು ಪಾಲನಾ ಸಮಿತಿ ಕೊಟ್ಟಿದ್ದ ನೊಟೀಸ್ಗೆ ಯತ್ನಾಳ್ ಉತ್ತರಿಸಿದ್ದಾರೆ. ಆರು ಪುಟಗಳ ಉತ್ತರ ಕೊಟ್ಟಿದ್ದು, ಆ ಉತ್ತರದಿಂದ ಭಿನ್ನಮತದದ ಬೆಂಕಿ ಆರುತ್ತಾ ಅಥವಾ ಮತ್ತೆ ಧಗಧಗಿಸುತ್ತಾ ಅನ್ನೋ ಆತಂಕ ಪಕ್ಷದೊಳಗೆ ಮನೆ ಮಾಡಿದೆ. ನಮಗೆ ಯತ್ನಾಳ್ ಬಣವೂ ಬೇಡ.. ವಿಜಯೇಂದ್ರ ಬಣವೂ ಬೇಡ..ಇಬ್ಬರು ಮಾಡ್ತಿರೋದು ತಪ್ಪು ಎನ್ನುವ ತಟಸ್ಥ ಗುಂಪೊಂದು ಈಗ ಬಿಜೆಪಿಯೊಳಗೇನು ರೂಪುಗೊಂಡಿದೆ. ಆ ಬಗ್ಗೆ ಡೀಟೈಲ್ ಆಗಿ ತೋರಿಸ್ತೀವಿ. 

ಒಂದು ಕಡೆ ಯತ್ನಾಳ್ ಬಣ.. ಇನ್ನೊಂದು ಕಡೆ ವಿಜಯೇಂದ್ರ ಸೇನೆ.. ಈ ಮಧ್ಯೆ ತಟಸ್ಥರಾಗಿ ಇದ್ದವರು, ಬಣಬಡಿದಾಟವನ್ನ ಖಂಡಿಸೋಕೆ ಶುರು ಮಾಡಿದ್ದಾರೆ. ಈ ಮೂಲಕ ರಾಜ್ಯ ಬಿಜೆಪಿ ಮನೆಯೊಂದು ಮೂರು ಬಾಗಿಲಾಗಿದೆ.
ರಾಜ್ಯ ಬಿಜೆಪಿಯ ಅಂತರ್ಯುದ್ಧ ಸದ್ಯ ದೆಹಲಿ ಅಂಗಳವನ್ನ ತಲುಪಿದೆ. ಹೈಕಮಾಂಡ್‌ನ ಮುಂದಿನ ನಿರ್ಧಾರ ಏನಾಗಿರುತ್ತೆ ಅನ್ನೋ ಕುತೂಹಲ, ಕಮಲ ಕೋಟೆಯೊಳಗೆ ಕೋಲಾಹಲ ಸೃಷ್ಟಿಸಿದೆ. 

19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
19:26ನಾಟಿ ಕೋಳಿ ಊಟ ಹೊಟ್ಟೆಗೆ ಬೀಳ್ತಿದ್ದಂತೆ, ರಾಜಕೀಯ ಶಾಶ್ವತವಲ್ಲ ಎಂದ ಸಿದ್ದಣ್ಣ; ಆದ್ರೆ ಅಸಲಿಯತ್ತೇ ಬೇರೆ?
20:42ಕುರ್ಚಿ ಆಟದಲ್ಲಿ ಆಟಗಾರರೇ ಅಂಪೈರ್​ಗಳು; ಸಿದ್ದು ಆಟ, ಡಿಕೆ ಹಠ; ಹೈಕಮಾಂಡ್‌ಗೆ ಸಿಂಹಾಸನ ಸಂಕಟ!
23:14ಡಿ.ಕೆ.ಶಿವಕುಮಾರ್‌ಗೆ ಇದ್ಯಾ ರಾಜಯೋಗ? ನೇರಾನೇರ ಕುರ್ಚಿ ಕಾಳಗಕ್ಕೆ ಇಳಿದದ್ದು ಅದೇ ಕಾರಣಕ್ಕಾ?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
21:10ಮಹಾಕ್ರಾಂತಿ ಮಹಾ ಮುಹೂರ್ತ ಫಿಕ್ಸ್: ಪದತ್ಯಾಗನಾ? ಪಟ್ಟಾಭಿಷೇಕನಾ? ದೆಹಲಿಯಲ್ಲಿ ಕ್ಲೈಮ್ಯಾಕ್ಸ್..!
21:28ಹೊಸ ಆಟ ಆರಂಭಿಸಿದ್ರಾ ಡಿಕೆ ಬ್ರದರ್ಸ್? ಸಿಎಂ ಸಿಂಹಾಸನಕ್ಕಾಗಿ ರಾಜಕೀಯ ರಣರಂಗ!
22:40ಕುರ್ಚಿ ಕಿತ್ತಾಟ: 'ಜೋಡೆತ್ತು'ಗಳ ಜಲ್ಲಿಕಟ್ಟು, ಡಿಕೆಶಿ-ಸತೀಶ್ ಜಾರಕಿಹೊಳಿ ಮಧ್ಯರಾತ್ರಿ ರಹಸ್ಯ ರಿವೀಲ್!
21:17ಸಿಎಂ ಸಿಂಹಾಸನ ಸಮರ: 'ಕೊಟ್ಟ ಮಾತು ಉಳಿಸಿಕೊಳ್ಳಿ'! ಅಧ್ಯಕ್ಷ ಖರ್ಗೆಗೆ ಡಿಕೆಶಿ 'ಆತ್ಮಸಾಕ್ಷಿ' ಅಸ್ತ್ರ!
22:55Karnataka Politics: ಉಭಯ ಸಂಕಟದಲ್ಲಿ ಸಿಲುಕಿದ ಕಾಂಗ್ರೆಸ್ ಹೈಕಮಾಂಡ್! ಹೇಗಿವೆ ಸಿದ್ದು-ಡಿಕೆ ಪಟ್ಟುಗಳು?
Read more