ಕೇಸರಿ ಶಾಲಿಗೂ, ಹಿಜಾಬ್​ಗೂ ನಮ್ಮ ವಿರೋಧವಿದೆ ಎಂದ ಸಚಿವ ಅಶೋಕ್

Feb 5, 2022, 6:33 PM IST

ಬೆಂಗಳೂರು, (ಫೆ.05): ಹಿಜಾಬ್ ಧರಿಸುವ ವಿಚಾರ ಕರ್ನಾಟಕದಲ್ಲಿ ದೊಡ್ಡ ವಿವಾದ ಸೃಷ್ಟಿಯಾಗಿದ್ದು, ಈ ಬಗ್ಗೆ ಪರ-ವಿರೋಧ ಚರ್ಚೆಗಳು ಶುರುವಾಗಿವೆ.

Hijab Row ಹಿಜಾಬ್ ವಿಚಾರದಲ್ಲಿ ತಟಸ್ಥ ನಿಲುವು ತಾಳಿದ ಶ್ರೀರಾಮುಲು, ಅಲ್ಪಸಂಖ್ಯಾತ ಮತಗಳಿಗೆ ಹೆದರಿದ್ರಾ?

ಇನ್ನು ಈ ಬಗ್ಗೆ ಕಂದಾಯ ಸಚಿವ ಆರ್ ಅಶೋಕ್ ಪ್ರತಿಕ್ರಿಯಿಸಿದ್ದು, ಹಿಜಾಬ್ ಧರಿಸಿ ಕಾಲೇಜಿಗೆ ಬಂದರೂ ತಪ್ಪು ಮತ್ತು ಶಾಲು ಹೊದ್ದು ಬಂದರೂ ತಪ್ಪೇ, ಕೇಸರಿ ಶಾಲಿಗೂ ನಮ್ಮ ವಿರೋಧ ಇರುವಂತೆ ಹಿಜಾಬ್​ಗೂ ವಿರೋಧವಿದೆ ಎಂದರು.