ಚಾಲುಕ್ಯರ ನಾಡಲ್ಲಿ ಚಾಣಕ್ಯ: ನಿರಾಣಿ ಸಂಸ್ಥೆಗಳನ್ನು ಹಾಡಿಹೊಗಳಿದ ಅಮಿತ್ ಶಾ

Jan 17, 2021, 2:48 PM IST

ಬಾಗಲಕೋಟೆ, (ಜ.17): ಬಾಗಲಕೋಟೆ ಜಿಲ್ಲೆಯಲ್ಲಿ ದೇಶದಲ್ಲಿ ಅತೀ ದೊಡ್ಡ ಎಥೆನಾಲ್ ಉತ್ಪಾದನೆಗೆ ಸಚಿವ ಮುರುಗೇಶ ನಿರಾಣಿಯವರ ನಿರಾಣಿ ಸಮೂಹ ಸಂಸ್ಥೆ ಮುಂದಾಗಿದ್ದು, ಇದರ ಜೊತೆಗೆ ನಿರಾಣಿ ಅವರ ವಿವಿಧ ಉದ್ಯಮಗಳ ಹಲವು ಘಟಕಗಳಿಗೆ ಬಿಜೆಪಿ ಚಾಣಾಕ್ಯ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಭಾನುವಾರ ಚಾಲನೆ ನೀಡಿದರು.

ನೂತನ ಸಚಿವರ ಕರಾಮತ್ತು, ಶಾ ಗೋ ಬ್ಯಾಕ್ ಅಭಿಯಾನ ಹಿಂಪಡೆದ ರೈತರು‌

ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಕೆರಕಲಮಟ್ಟಿಯಲ್ಲಿ ನಿರಾಣಿ ಸಂಸ್ಥೆಯ ಸಕ್ಕರೆ ಕಾರ್ಖಾನೆಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಅಮಿತ್ ಶಾ ಅವರು, ನಿರಾಣಿ ಸಂಸ್ಥೆಗಳನ್ನು ಹಾಡಿಹೊಗಳಿದರು.