ಸಿಗದ ಸಚಿವ ಸ್ಥಾನ: ಸಿಎಂ ವಿರುದ್ಧವೇ ನೋವು ತೋಡಿಕೊಂಡ ರೇಣುಕಾಚಾರ್ಯ

Jan 14, 2021, 3:23 PM IST

ಬೆಂಗಳೂರು(ಜ.14): ಸಚಿವ ಸ್ಥಾನ ಸಿಗದ ಅತೃಪ್ತ ಶಾಸಕರು ಸಭೆ ಸೇರಲಿದ್ದಾರೆ ಎಂದು ಹೇಳಲಾಗುತ್ತಿದೆ. ಹೌದು,  ಕೆಲವೇ ದಿನಗಳಲ್ಲಿ ಅತೃಪ್ತ ಶಾಸಕರು ಸಭೆ ಸೇರಲಿದ್ದಾರೆ. ಸಂಪುಟ ವಿಸ್ತರಣೆಯಾಗಿದ್ದು ಹಲವರ ಕೆಣ್ಣು ಕೆಂಪಾಗಿಸಿದೆ. ನಾವು ಪಕ್ಷ ಬಿಡಲ್ಲ ಅದ್ರೆ ಅತೃಪ್ತರ ಶಾಸಕರ ಜತೆ ಸಭೆ ಮಾಡುತ್ತೇನೆ ಎಂದು ಹೇಳುವ ಮೂಲಕ ಸಿಎಂ ವಿರುದ್ಧವೇ  ಶಾಸಕ ಎಂ.ಪಿ. ರೇಣುಕಾಚಾರ್ಯ ತಮ್ಮ ನೋವು ತೋಡಿಕೊಂಡಿದ್ದಾರೆ. 

ಮುನಿರತ್ನಗೆ ಖೆಡ್ಡಾ ತೋಡಿದ್ದು ಯಾರು? ಮಂತ್ರಿಪಟ್ಟ ತಪ್ಪಲು ಕಾರಣವೇನು?

ಇನ್ನು ಸಚಿವ ಸ್ಥಾನ ಸಿಗದಿದ್ದಕ್ಕೆ ಶಾಸಕ ಅಭಯ್‌ ಪಾಟೀಲ್‌ ಕೂಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬಹಳಷ್ಟು ಶಾಸಕರು ನನ್ನ ಜತೆ ಮಾತನಾಡಿದ್ದಾರೆ. ಜ. 17 ರಂದು ಪಕ್ಷದ ವರಿಷ್ಠರ ಗಮನಕ್ಕೆ ತರುತ್ತೇವೆ ಎಂದು ಹೇಳಿದ್ದಾರೆ.