ಟಿಕೆಟ್ ಸಿಗದಿದ್ರೂ ಬಿಜೆಪಿ ಬಿಟ್ಟೋಗಲ್ಲ ಅಂತ ಆಣೆ ಪ್ರಮಾಣ ಮಾಡಿಸಿದ ಮುನಿರತ್ನ: ವಿಡಿಯೋ ವೈರಲ್‌

ಟಿಕೆಟ್ ಸಿಗದಿದ್ರೂ ಬಿಜೆಪಿ ಬಿಟ್ಟೋಗಲ್ಲ ಅಂತ ಆಣೆ ಪ್ರಮಾಣ ಮಾಡಿಸಿದ ಮುನಿರತ್ನ: ವಿಡಿಯೋ ವೈರಲ್‌

Published : Jan 27, 2023, 02:18 PM IST

ಕೋಲಾರ ಹೊರವಲಯದ ಖಾಸಗಿ ರೆಸಾರ್ಟ್‌ನಲ್ಲಿ ಆಣೆ ಪ್ರಮಾಣ ನಡೆದಿದೆ. ಎಲ್ಲರ ಕೈ ಮುಂದಿಟ್ಟು ಆಣೆ ಪ್ರಮಾಣ ಭೋದಿಸಿರುವ ಸಚಿವ ಮುನಿರತ್ನ ವಿಡಿಯೋ ಸಖತ್ ವೈರಲ್ ಆಗುತ್ತಿದೆ. 

ಕೋಲಾರ(ಜ.27):  ಟಿಕೆಟ್ ಕೈ ತಪ್ಪಿದ್ರೂ ಬಿಜೆಪಿ ಪಕ್ಷ ಬಿಟ್ಟೋಗಲ್ಲ ಅಂತ ಸಚಿವ ಮುನಿರತ್ನ ಆಣೆ ಪ್ರಮಾಣ ಮಾಡಿಸಿದ್ದಾರೆ. ಹೌದು, ಕೋಲಾರ ಜಿಲ್ಲೆಯ ಬಂಗಾರಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಟಿಕೆಟ್ ಆಕಾಂಕ್ಷಿಗಳ ಪಟ್ಟಿ ಪೈಪೋಟಿ ಹೆಚ್ಚಾಗಿದೆ. ಬಂಗಾರಪೇಟೆ ತಾಲೂಕು BJP ಟಿಕೆಟ್‌ಗಾಗಿ ಮಾಜಿ ಶಾಸಕರಾದ ಎಂ. ನಾರಾಯಣಸ್ವಾಮಿ, ವೆಂಕಟಮುನಿಯಪ್ಪ ಹಾಗೂ ಬಿ.ವಿ ಮಹೇಶ್, ವಿ ಶೇಷು, ಅಮರೇಶ್ ಸೇರಿದಂತೆ 6 ಮಂದಿ ಲಾಭಿ ನಡೆಸುತ್ತಿದ್ದಾರೆ.  

ಒಂದು ಕಾಲದ ಗುರು-ಶಿಷ್ಯರು.. ಬದ್ಧವೈರಿಗಳಾಗಿದ್ದು ಯಾಕೆ?: ಏನಿದು ‘ಹಳೇ ದ್ವೇಷ, ಹೊಸ ಲೆಕ್ಕಾಚಾರ’?

ಎಂ. ನಾರಾಯಣಸ್ವಾಮಿಗೆ ಟಿಕೆಟ್ ಕೈ ತಪ್ಪಿದ್ರೆ ಜೆಡಿಎಸ್‌ಗೆ ಬೆಂಬಲ ನೀಡುವ ಭೀತಿ ಎದುರಾಗಿದೆ. 2018 ರಲ್ಲಿ ಟಿಕೆಟ್ ಕೈ ತಪ್ಪಿದ್ದಕ್ಕೆ ಎಂ. ನಾರಾಯಣಸ್ವಾಮಿ ಬಿಜೆಪಿ ಬಿಟ್ಟು ಜೆಡಿಎಸ್‌ ಪಕ್ಷ ಸೇರ್ಪಡೆಯಾಗಿದ್ದರು. ಕಳೆದ MLC ಚುನಾವಣೆಯಲ್ಲಿ ಬಿಜೆಪಿಗೆ ಮತ್ತೆ ವಾಪಾಸ್ ಆಗಿದ್ದರು. ಪಕ್ಷಾಂತರ ಭೀತಿ ಹಿನ್ನಲೆ ಏನೇ ಬೆಳವಣಿಗೆ ಆದರೂ  ಕೋಲಾರಮ್ಮ ದೇವಿ ಆಣೆ ಪಕ್ಷಕ್ಕೆ ದ್ರೋಹ ಮಾಡಲ್ಲ ಎಂದು ಮುನಿರತ್ನ ಆಣೆ ಮಾಡಿಸಿದ್ದಾರೆ. ಮುನಿರತ್ನ ಆಣೆ ಪ್ರಮಾಣ ಮಾಡಿಸಿರುವ ವಿಡಿಯೋ ಭಾರೀ ವೈರಲ್ ಆಗಿದೆ. ಆಣೆ ಪ್ರಮಾಣದಲ್ಲಿ ಸಚಿವ ಮುನಿರತ್ನ, ಸಂಸದ ಮುನಿಸ್ವಾಮಿ, ವರ್ತೂರು ಪ್ರಕಾಶ್, ಎಂ ನಾರಾಯಣಸ್ವಾಮಿ, ವೆಂಕಟಮುನಿಯಪ್ಪ. ಬಿ.ವಿ ಮಹೇಶ್, ಸಂಪಂಗಿ, ಮಂಜುನಾಥ್ ಹಾಗು ಹಲವರು ಭಾಗಿಯಾಗಿದ್ದರು. ಕೋಲಾರ ಹೊರವಲಯದ ಖಾಸಗಿ ರೆಸಾರ್ಟ್‌ನಲ್ಲಿ ಆಣೆ ಪ್ರಮಾಣ ನಡೆದಿದೆ. ಎಲ್ಲರ ಕೈ ಮುಂದಿಟ್ಟು ಆಣೆ ಪ್ರಮಾಣ ಭೋದಿಸಿರುವ ಸಚಿವ ಮುನಿರತ್ನ ವಿಡಿಯೋ ಸಖತ್ ವೈರಲ್ ಆಗುತ್ತಿದೆ. 
 

18:13ಸಿದ್ದು ಸೇನೆಯಲ್ಲಿ ಬಿರುಕು: ಅಹಿಂದ ಅರಸೊತ್ತಿಗೆ, ಸಾಹುಕಾರ್​ಗೆ ಸಿಗುತ್ತಾ ಪ್ರಚಂಡ ಪವರ್?
19:47ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
20:50ಸಿಂಹಾಸನ ಸಂಗ್ರಾಮದಲ್ಲಿ ಡಿಕೆ ಶಿವಕುಮಾರ್ 'ಸ್ನೇಹವ್ಯೂಹ': ಸಿದ್ದು ಸಿಪಾಯಿಗಳನ್ನೇ ಸೆಳೆಯುವ ಬಂಡೆಯ ಹೊಸ ದಾಳ!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
19:26ನಾಟಿ ಕೋಳಿ ಊಟ ಹೊಟ್ಟೆಗೆ ಬೀಳ್ತಿದ್ದಂತೆ, ರಾಜಕೀಯ ಶಾಶ್ವತವಲ್ಲ ಎಂದ ಸಿದ್ದಣ್ಣ; ಆದ್ರೆ ಅಸಲಿಯತ್ತೇ ಬೇರೆ?
20:42ಕುರ್ಚಿ ಆಟದಲ್ಲಿ ಆಟಗಾರರೇ ಅಂಪೈರ್​ಗಳು; ಸಿದ್ದು ಆಟ, ಡಿಕೆ ಹಠ; ಹೈಕಮಾಂಡ್‌ಗೆ ಸಿಂಹಾಸನ ಸಂಕಟ!
23:14ಡಿ.ಕೆ.ಶಿವಕುಮಾರ್‌ಗೆ ಇದ್ಯಾ ರಾಜಯೋಗ? ನೇರಾನೇರ ಕುರ್ಚಿ ಕಾಳಗಕ್ಕೆ ಇಳಿದದ್ದು ಅದೇ ಕಾರಣಕ್ಕಾ?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
21:10ಮಹಾಕ್ರಾಂತಿ ಮಹಾ ಮುಹೂರ್ತ ಫಿಕ್ಸ್: ಪದತ್ಯಾಗನಾ? ಪಟ್ಟಾಭಿಷೇಕನಾ? ದೆಹಲಿಯಲ್ಲಿ ಕ್ಲೈಮ್ಯಾಕ್ಸ್..!
21:28ಹೊಸ ಆಟ ಆರಂಭಿಸಿದ್ರಾ ಡಿಕೆ ಬ್ರದರ್ಸ್? ಸಿಎಂ ಸಿಂಹಾಸನಕ್ಕಾಗಿ ರಾಜಕೀಯ ರಣರಂಗ!
Read more