ಎಲ್ಲಿಂದ ಶುರುವಾಯ್ತು ರಾಮುಲು-ರೆಡ್ಡಿ ಅಂತಃಕಲಹ?: 40 ವರ್ಷಗಳ ಸ್ನೇಹ.. 4 ತಿಂಗಳಿಗೇ ಹಳಸಿತಾ?

ಎಲ್ಲಿಂದ ಶುರುವಾಯ್ತು ರಾಮುಲು-ರೆಡ್ಡಿ ಅಂತಃಕಲಹ?: 40 ವರ್ಷಗಳ ಸ್ನೇಹ.. 4 ತಿಂಗಳಿಗೇ ಹಳಸಿತಾ?

Published : Jan 25, 2025, 01:29 PM IST

ಒಂದು ಕಾಲದ ದೋಸ್ತಿಗಳು, ಈಗ ದುಷ್ಮನ್​ಗಳಾಗಿದ್ದಾರೆ.. ಈ ದುಷ್ಮನಿ ಹಿಂದಿರೋ ಕಹಾನಿ, ಏನು ಗೊತ್ತಾ? ಎಲ್ಲವೂ ತಣ್ಣಗಾಯ್ತು ಅಂದ್ಕೊಳ್ತಾ ಇರುವಾಗ್ಲೇ, ಈ ಇಬ್ಬರು ಸ್ನೇಹಿತರ ನಡುವೆ ವಿದ್ವೇಷದ ವಿಷಜ್ವಾಲೆ ಹೊತ್ತಿಕೊಂಡಿದ್ದೇಕೆ?

ಜನಾರ್ದನ ರೆಡ್ಡಿ, ಶ್ರೀರಾಮುಲು.. ಇಬ್ಬರೂ ಕೂಡ ಆಪ್ತಮಿತ್ರರು.. ಈ ಸ್ನೇಹಿತರ ಆಟಕ್ಕೆ ರಾಜ್ಯ ರಾಜಕೀಯದಲ್ಲಿ ಬಿರುಗಾಳಿ ಎದ್ದಿತ್ತು.. ರಾಷ್ಟ್ರ ರಾಜಕಾರಣದಲ್ಲಿ ಕೋಲಾಹಲ ಸೃಷ್ಟಿಸಿತ್ತು.. ಕಮಲಪಾಳಯದ ಘಟಾನುಘಟಿಗಳಿಗೇ ಸವಾಲು ಹಾಕಿತ್ತು. ಆದ್ರೆ ಈಗ, ಈ ಮಿತ್ರರು, ಒಬ್ಬರ ವಿರುದ್ಧ ಮತ್ತೊಬ್ಬರು ತೊಡೆ ತಟ್ತಾ ಇದಾರೆ.. ನಾನಾ ನೀನಾ ಅನ್ನೋ ಯುದ್ಧ ಆರಂಭಿಸಿದ್ದಾರೆ.. ಒಂದು ಕಾಲದ ದೋಸ್ತಿಗಳು, ಈಗ ದುಷ್ಮನ್​ಗಳಾಗಿದ್ದಾರೆ.. ಈ ದುಷ್ಮನಿ ಹಿಂದಿರೋ ಕಹಾನಿ, ಏನು ಗೊತ್ತಾ? ಎಲ್ಲವೂ ತಣ್ಣಗಾಯ್ತು ಅಂದ್ಕೊಳ್ತಾ ಇರುವಾಗ್ಲೇ, ಈ ಇಬ್ಬರು ಸ್ನೇಹಿತರ ನಡುವೆ ವಿದ್ವೇಷದ ವಿಷಜ್ವಾಲೆ ಹೊತ್ತಿಕೊಂಡಿದ್ದೇಕೆ? ಈ ನಾಯಕರ ನಡುವಿನ ವೈರತ್ವದ ಕತೆ ಏನು? ಅಸಲಿಗೆ, ಈ ಇಬ್ಬರ ರಾಜಕೀಯ ದ್ವೇಷದಾಟಕ್ಕೆ, ನಷ್ಟ ಅನುಭವಿಸೋದು ಯಾರು? 

ಲಾಭ ಪಡೆಯೋದು ಯಾರು? ರೆಡ್ಡಿ ಹಾಗೂ ರಾಮುಲು ಮಧ್ಯೆ, ಈಗ ಹುಲ್ಲು ಕಡ್ಡಿ ಹಾಕಿದ್ರೂ ಧಗಧಗ ಅಂತ ಬೆಂಕಿ ಹೊತ್ತಿಕೊಳ್ಳತ್ತೆ.. ಅಂಥದ್ದೊಂದು ಸ್ಥಿತಿ ನಿರ್ಮಾಣವಾಗಿದ್ದು ಬೈ ಎಲೆಕ್ಷನ್ ಸೋಲಿನ ಬಳಿಕ.. ಅಷ್ಟಕ್ಕೂ ಆ ಉಪಚುನಾವಣೇಲಿ ಆಗಿದ್ದೇನು? ಈಗ ಆಗ್ತಾ ಇರೋದೇನು? ಅದರ ಪರಿಣಾಮ ಏನು? ಅದೆಲ್ಲದರ ವಿವರ ಇಲ್ಲಿದೆ. ರೆಡ್ಡಿ ರಾಮುಲು ನಡುವಿನ ಮನಸ್ತಾಪ, ಈಗ ಮತ್ತೊಂದು ಹಂತ ತಲುಪಿದೆ.. ಅದರ ನೇರಪರಿಣಾಮ ಆಗೋದು, ರಾಜ್ಯ ಬಿಜೆಪಿ ಮೇಲೆ.. ಅದ್ಯಾಕೆ ಗೊತ್ತಾ?. ಸ್ನೇಹಕ್ಕೆ ಸ್ನೇಹ, ಪ್ರೀತಿಗೆ ಪ್ರೀತಿ ಅಂತಿದ್ದ ರೆಡ್ಡಿ ರಾಮುಲು ಮಧ್ಯೆ, ದ್ವೇಷಾಸೂಯೆಯ ರಾಜಕೀಯ ಉದ್ಭವಿಸಿದೆ.. ಸದ್ಯಕ್ಕಿದು ತಣ್ಣಗಾಗೋ ಸಣ್ಣ ಸುಳಿವೂ ಇಲ್ಲ., ಇದರಿಂದ ಕಷ್ಟ ಯಾರಿಗೆ? ಏನು ನಷ್ಟ?

19:47ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
20:50ಸಿಂಹಾಸನ ಸಂಗ್ರಾಮದಲ್ಲಿ ಡಿಕೆ ಶಿವಕುಮಾರ್ 'ಸ್ನೇಹವ್ಯೂಹ': ಸಿದ್ದು ಸಿಪಾಯಿಗಳನ್ನೇ ಸೆಳೆಯುವ ಬಂಡೆಯ ಹೊಸ ದಾಳ!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
19:26ನಾಟಿ ಕೋಳಿ ಊಟ ಹೊಟ್ಟೆಗೆ ಬೀಳ್ತಿದ್ದಂತೆ, ರಾಜಕೀಯ ಶಾಶ್ವತವಲ್ಲ ಎಂದ ಸಿದ್ದಣ್ಣ; ಆದ್ರೆ ಅಸಲಿಯತ್ತೇ ಬೇರೆ?
20:42ಕುರ್ಚಿ ಆಟದಲ್ಲಿ ಆಟಗಾರರೇ ಅಂಪೈರ್​ಗಳು; ಸಿದ್ದು ಆಟ, ಡಿಕೆ ಹಠ; ಹೈಕಮಾಂಡ್‌ಗೆ ಸಿಂಹಾಸನ ಸಂಕಟ!
23:14ಡಿ.ಕೆ.ಶಿವಕುಮಾರ್‌ಗೆ ಇದ್ಯಾ ರಾಜಯೋಗ? ನೇರಾನೇರ ಕುರ್ಚಿ ಕಾಳಗಕ್ಕೆ ಇಳಿದದ್ದು ಅದೇ ಕಾರಣಕ್ಕಾ?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
21:10ಮಹಾಕ್ರಾಂತಿ ಮಹಾ ಮುಹೂರ್ತ ಫಿಕ್ಸ್: ಪದತ್ಯಾಗನಾ? ಪಟ್ಟಾಭಿಷೇಕನಾ? ದೆಹಲಿಯಲ್ಲಿ ಕ್ಲೈಮ್ಯಾಕ್ಸ್..!
21:28ಹೊಸ ಆಟ ಆರಂಭಿಸಿದ್ರಾ ಡಿಕೆ ಬ್ರದರ್ಸ್? ಸಿಎಂ ಸಿಂಹಾಸನಕ್ಕಾಗಿ ರಾಜಕೀಯ ರಣರಂಗ!
22:40ಕುರ್ಚಿ ಕಿತ್ತಾಟ: 'ಜೋಡೆತ್ತು'ಗಳ ಜಲ್ಲಿಕಟ್ಟು, ಡಿಕೆಶಿ-ಸತೀಶ್ ಜಾರಕಿಹೊಳಿ ಮಧ್ಯರಾತ್ರಿ ರಹಸ್ಯ ರಿವೀಲ್!