ಸಾಹುಕಾರನಿಗೆ ಶಪಥ ಹಾಕೋದೇ ಭಾರೀ ಪ್ರೀತಿ: BSY ಸರ್ಕಾರಕ್ಕೂ ಬೆಳಗಾವಿ ಬಾಂಬ್ ಭೀತಿ..?

Feb 24, 2020, 8:47 PM IST

ಬೆಂಗಳೂರು, [ಫೆ.24]: ಕಾಂಗ್ರೆಸ್ ಹಾಗೂ ಜೆಡಿಎಸ್ ಸರ್ಕಾರ ಸೇರಿಕೊಂಡು ಮೈತ್ರಿ ಸರ್ಕಾರ ಅಂತ ಮಾಡಿಕೊಂಡು 14 ತಿಂಗಳು ಹಾಗೋ ಹೀಗೋ ಆಡಳಿತ ಕೊಟ್ಟು ಹೋದರು. ಆದ್ರೆ ಹೋಗೋದಕ್ಕೆ ಕಾರಣವಾಗಿದ್ದು ಬೆಳಗಾವಿ ಬಾಂಬ್ ಅನ್ನೋದು ಎಲ್ಲಾರಿಗೂ ಗೊತ್ತಿರೋ ವಿಚಾರ.

ಇನ್ನು ಮುಗಿದಿಲ್ಲ ಪವರ್ ವಾರ್: ಸವದಿ, ಜಾರಕಿಹೊಳಿ, ಕತ್ತಿ ನಡುವೆ ಮತ್ತೆ ಫೈಟ್

ಆದ್ರೆ ಈಗ ಹೊಸ ವಿಚಾರ ಏನಪ್ಪ ಅಂದ್ರೆ ಕುಮಾರಣ್ಣನ ಸರ್ಕಾರಕ್ಕೆ ಹಗಲೂ ಇರುಳು ಕಾಡಿದ್ದ ಬೆಳಗಾವಿ ಸಾಹುಕಾರ ಈಗ ಬಿಎಸ್ ವೈ ಸರ್ಕಾರಕ್ಕೂಕಂಟಕರಾಗ್ತಾರಾ ಅನ್ನೋ ಅನುಮಾನಗಳು ಶುರುವಾಗಿದೆ. ಅದಕ್ಕೆ ಕಾರಣ ರಮೇಶ್ ಜಾರಕಿಹೊಳಿಯ ರಾಜಿನಾಮೆ ಮಾತುಗಳು.  ಬನ್ನಿ ಹಾಗಾದ್ರೆ ಸಾಹುಕಾರ ತೊಟ್ಟ ಹೊಸ ಶಪಥ ಏನು ಅನ್ನೋದನ್ನ ನೋಡ್ಕೊಂಡು ಬರೋಣ.