'ನಾನಾ-ನೀನಾ' ಯುದ್ಧದಲ್ಲಿ ಏನಿದು ಅಣ್ತಮ್ಮ ರಗಳೆ?: ಬಂಡೆ ವಿರುದ್ಧ 'ಕಮಿಷನ್ ಬಾಂಬ್' ಸಿಡಿಸಿದ ದಳಪತಿ

'ನಾನಾ-ನೀನಾ' ಯುದ್ಧದಲ್ಲಿ ಏನಿದು ಅಣ್ತಮ್ಮ ರಗಳೆ?: ಬಂಡೆ ವಿರುದ್ಧ 'ಕಮಿಷನ್ ಬಾಂಬ್' ಸಿಡಿಸಿದ ದಳಪತಿ

Published : Aug 06, 2023, 05:14 PM IST

ಕುಮಾರಣ್ಣನೇ  “ನನ್ನ ಅಣ್ಣ”  ಅಂದ್ರು ಡಿಕೆಶಿ..! “ಅಂಥಾ ತಮ್ಮ”. ನಂಗೆ ಬೇಡ್ವೇ ಬೇಡ ಅಂದ್ರು ಎಚ್’ಡಿಕೆ..! ದುಷ್ಮನಿ.. ದೋಸ್ತಿ.. ಕುಸ್ತಿ.. ಜೋಡೆತ್ತು.. ಈಗ ಅಣ್ತಮ್ಮ..! “ನಾನಾ-ನೀನಾ” ಯುದ್ಧದಲ್ಲಿ ಏನಿದು ಅಣ್ತಮ್ಮ ರಗಳೆ..? ಇದೇ ಇವತ್ತಿನ ಸುವರ್ಣ ಸ್ಪೆಷಲ್, ತಮ್ಮಾ ಬಾಂಡ್ ಅಣ್ಣಾ ರಾಂಗ್..! 

ಕುಮಾರಣ್ಣನೇ  “ನನ್ನ ಅಣ್ಣ”  ಅಂದ್ರು ಡಿಕೆಶಿ..! “ಅಂಥಾ ತಮ್ಮ”. ನಂಗೆ ಬೇಡ್ವೇ ಬೇಡ ಅಂದ್ರು ಎಚ್’ಡಿಕೆ..! ದುಷ್ಮನಿ.. ದೋಸ್ತಿ.. ಕುಸ್ತಿ.. ಜೋಡೆತ್ತು.. ಈಗ ಅಣ್ತಮ್ಮ..! “ನಾನಾ-ನೀನಾ” ಯುದ್ಧದಲ್ಲಿ ಏನಿದು ಅಣ್ತಮ್ಮ ರಗಳೆ..? ಇದೇ ಇವತ್ತಿನ ಸುವರ್ಣ ಸ್ಪೆಷಲ್, ತಮ್ಮಾ ಬಾಂಡ್ ಅಣ್ಣಾ ರಾಂಗ್..! ಅವರಿಬ್ಬರದ್ದು ಇಡೀ ಕರ್ನಾಟಕವೇ ಬೆಕ್ಕಸ ಬೆರಗಾಗಿ ನೋಡಿದ್ದ ದುಷ್ಮನಿ.. ರಾಜಕೀಯ ದ್ವೇಷಕ್ಕೆ ಮತ್ತೊಂದು ಹೆಸರೇ ಆ ರಣರೋಚಕ ದುಷ್ಮನಿ. ಸೀನ್ ಕಟ್ ಮಾಡಿದ್ರೆ, ದುಷ್ಮನಿಯ ಜಾಗದಲ್ಲಿ ವಿಜೃಂಭಿಸಿತ್ತು ಜೋಡೆತ್ತು ದೋಸ್ತಿ. 

ಮೊದಲು ರಣದ್ವೇಷ, ನಂತ್ರ ದೋಸ್ತಿ, ಜಂಗೀಕುಸ್ತಿ.. ಈಗ ಅಣ್ತಮ್ಮ ರಹಸ್ಯ. ಇಲ್ಲಿ ಅಣ್ಣಾಬಾಂಡ್ ರಾಂಗ್ ಆಗಿದ್ದಾರೆ, ತಮ್ಮರಾಯ ರೊಚ್ಚಿಗೆದ್ದಿದ್ದಾರೆ. ಪರಿಣಾಮ ಹೊತ್ತಿಕೊಂಡಿದೆ ಹಳೇದ್ವೇಷದ ಹೊಸ ಕಿಡಿ. ಯಾರೆಷ್ಟೇ ಅಬ್ಬರಿಸಿದ್ರೂ, ಯಾರೆಷ್ಟೇ ಕೌಂಟರ್ ಅಟ್ಯಾಕ್ ಮಾಡಿದ್ರೂ ಕುಮಾರಣ್ಣ ಮಾತ್ರ ಜಗ್ಗುತ್ತಿಲ್ಲ, ಬಗ್ಗುತ್ತಿಲ್ಲ. ಅಣ್ಣಾಬಾಂಬ್-ತಮ್ಮರಾಯನ ನಡುವಿನ ಜಟಾಪಟಿ.  ದುಷ್ಮನ್'ಗಳಾಗಿದ್ದವರು, ದೋಸ್ತಿಗಳಾದ್ರು.  ದೋಸ್ತಿಗಳಾಗಿದ್ದವರು ಜೋಡೆತ್ತುಗಳಾದ್ರು. ಮತ್ತೆ ದುಷ್ಮನಿ ಶುರುವಾಯ್ತು ಅನ್ನುವಷ್ಟರಲ್ಲಿ ಅಣ್ತಮ್ಮ ರಗಳೆ. 

ಒಂದು ಕಡೆ ಅಣ್ಣಾಬಾಂಡ್, ಇನ್ನೊಂದ್ಕಡೆ ತಮ್ಮರಾಯ. ಇದು ಹಳೇದ್ವೇಷದಲ್ಲಿ ಭುಗಿಲೆದ್ದ ಹೊಸ ಕಾಳಗ ರಹಸ್ಯ. ದಳಪತಿ ಜೊತೆಗಿನ ಯುದ್ಧಕ್ಕೆ ಡಿಸಿಎಂ ಡಿಕೆಶಿ ಮುಹೂರ್ತ ಫಿಕ್ಸ್ ಮಾಡಿದ್ದಾರೆ. ಹಾಗಾದ್ರೆ ತಮ್ಮರಾಯನ ಕೌಂಟರ್ ಹೇಗಿರಲಿದೆ..? ಆ ಕೌಂಟರ್'ಗೆ ಪ್ರತಿಯಾಗಿ ಅಣ್ಣಾಬಾಂಡ್ ಮತ್ತೊಂದು ಬಾಂಬ್ ಹಾಕ್ತಾರಾ..? ದಳಪತಿ ಕುಮಾರಸ್ವಾಮಿ ಟಾರ್ಗೆಟ್ ಇಡೀ ಕಾಂಗ್ರೆಸ್ ಸರ್ಕಾರವೇ ಆದ್ರೂ, ಮೇನ್ ಟಾರ್ಗೆಟ್ ಡಿಸಿಎಂ ಡಿಕೆ ಶಿವಕುಮಾರ್. ಅಷ್ಟಕ್ಕೂ ತಮ್ಮನ್ನು ಅಣ್ಣಾ ಅಂದಿರೋ ಡಿಕೆಶಿ ವಿರುದ್ಧ ಎಚ್ಡಿಕೆ ಈ ಪರಿ ಮುಗಿ ಬಿದ್ದಿರೋದ್ಯಾಕೆ..? ಇದ್ರ ಹಿಂದಿನ ರಹಸ್ಯವನ್ನು ತೋರಿಸ್ತೀವಿ ನೋಡಿ.

23:25ಟ್ರಬಲ್ ಶೂಟರ್‌​ಗೆ ಟ್ರಬಲ್! ಎರಡೇ ದಿನಕ್ಕೆ ಮೊದಲ ವಿಕೆಟ್..! ಆಸ್ಫೋಟದ ಹಿಂದಿನ ಅಸಲಿ ಗುಟ್ಟು ಏನು?
21:41ಕಮಲ ಬಿಟ್ಟು ಅಖಾಡಕ್ಕಿಳಿದ 'ಸಿಂಗಂ' ! 'ವಿ ದಿ ಲೀಡರ್ಸ್' ಹೊಸ ಆಂದೋಲನ ಘೋಷಿಸಿದ ಅಣ್ಣಾಮಲೈ!
23:52ಪದಗ್ರಹಣಕ್ಕೂ ಮುನ್ನ ಮೂರು ಹೆಜ್ಜೆ, 3 ಸಂದೇಶ; ಡಿಕೆ ಮಾಸ್ಟರ್ ಪ್ಲಾನ್‌ ರಹಸ್ಯವೇನು?
20:08ಪ್ರತಿ ಮಂತ್ರಿಗಿರಿ ಹಿಂದೆ ನೂರೆಂಟು ಲೆಕ್ಕಾಚಾರ... ಯಾರಿಗೆ ಪಟ್ಟ..? ಯಾಕೆ ಪಟ್ಟ..? ಏನಿದರ ಗುಟ್ಟು?
44:07ಬಿಜೆಪಿಗೆ ಅಣ್ಣಾಮಲೈ ರಾಜೀನಾಮೆ ನೀಡಿದ್ದೇಕೆ? ನಿತಿನ್​ ನಬಿನ್ ಮನವೊಲಿಕೆಗೆ ಒಪ್ಪಲಿಲ್ಲ ಯಾಕೆ?
26:58ಬ್ರ್ಯಾಂಡ್ ಬಂಡೆ ಡಿಕೆ: ಖಾದರ್ ಲುಕ್‌ನಿಂದ Yezdi ಬೈಕ್‌ವರೆಗೆ ಡಿಕೆ ಶಿವಕುಮಾರ್ ಸ್ಟೈಲ್ ಸ್ಟೋರಿ
22:55ಹೇಗಾಯ್ತು ಗೊತ್ತಾ ಡಿಕೆಶಿ ಸಾಮ್ರಾಜ್ಯದ ಉದಯ? ಸೆರೆವಾಸದಿಂದ ಸಿಎಂ ಗದ್ದುಗೆಯವರೆಗೆ, ರಣರೋಚಕ ಅಧ್ಯಾಯ!
39:58ಜಮೀರ್ ಖಾನ್‌ಗೆ 'ಕೈ' ಕೊಟ್ಟ ಆಡಿಯೋ; ಇತ್ತ ಸಿದ್ದರಾಮಯ್ಯ ಆಪ್ತನಿಗೆ ಕೊಟ್ರು ಮಹತ್ವದ ಸಂದೇಶ
22:16ಕರ್ನಾಟಕದಲ್ಲಿ ಹೊಸ ಚರಿತ್ರೆ ಬರೆದ ‘ಗೌರಿ’ಪುತ್ರ..ಡಿಕೆ ಬ್ರದರ್ಸ್ ಸಕ್ಸಸ್ ಸೀಕ್ರೆಟ್ ಏನು ಗೊತ್ತಾ?
22:14ಮೈಲಾರನ ಮುನಿಸು ಮಾಯ! ಡಿಕೆಗೆ ಮುಖ್ಯಮಂತ್ರಿ ಯೋಗ, ದೈವ ಕೃಪೆಯ ಹಿಂದೆ ಏನಿದೆ ರಹಸ್ಯ?
Read more