ಅನಾಮಿಕನ ಹಿಂದಿದ್ಯಾ ಅಪಪ್ರಚಾರದ ಹುನ್ನಾರ? ಕೈ ಪಡೆಯಿಂದಲೂ  ಕೇಳಿ ಬರ್ತಿದೆ ಅಪಸ್ವರದ ಧ್ವನಿ!

ಅನಾಮಿಕನ ಹಿಂದಿದ್ಯಾ ಅಪಪ್ರಚಾರದ ಹುನ್ನಾರ? ಕೈ ಪಡೆಯಿಂದಲೂ ಕೇಳಿ ಬರ್ತಿದೆ ಅಪಸ್ವರದ ಧ್ವನಿ!

Published : Aug 14, 2025, 04:17 PM IST

ಧರ್ಮಸ್ಥಳದಲ್ಲಿ ಒಂದಾದ ಮೇಲೆ ಒಂದು ಸ್ಥಳದಲ್ಲಿ ಮಣ್ಣು ಹೊರ ತೆಗೆಯಲಾಗ್ತಲೇ ಇದೆ.. ಆದ್ರೆ ಅನಾಮಿಕ ದೂರುದಾರ ಹೇಳಿದ ಹಾಗೆ ಅಲ್ಲಿ ಯಾವ ಅಸ್ಥಿಯೂ ಸಿಗ್ತಿಲ್ಲ.. ಈ ಮಧ್ಯೆ ರಾಜಕೀಯ ಜಟಾಪಟಿ ಜೋರಾಗಿದೆ.

ಬುರುಡೆ ಶೋಧ..ಖಾಲಿ ಗುಂಡಿ.. ಒಡೆದ ತಾಳ್ಮೆ ಕಟ್ಟೆ..! ಅನಾಮಿಕನ ಹಿಂದಿದ್ಯಾ ಅಪಪ್ರಚಾರದ ಹುನ್ನಾರ..? ಸದನದೊಳಗೂ ಕಿಚ್ಚು. ಹೊರಗೂ ಆಕ್ರೋಶ.. ಶುರು ‘ಧರ್ಮ’ ಯುದ್ಧ..! ಧರ್ಮಸ್ಥಳ ಚಲೋ. ಹೋರಾಟಕ್ಕೆ ಸಜ್ಜಾದ ಕಮಲ ಪಡೆ..! ಇದೇ ಇವತ್ತಿನ ಸುವರ್ಣ ಸ್ಪೆಷಲ್ ಧರ್ಮಸ್ಥಳ ಕಿಚ್ಚು. ಬುರುಡೆ ಬೆಂಕಿ. ದಿನಗಳು ಉರುಳುತ್ತಲೇ ಇವೆ.. ಧರ್ಮಸ್ಥಳದಲ್ಲಿ  ಒಂದಾದ ಮೇಲೆ ಒಂದು ಸ್ಥಳದಲ್ಲಿ ಮಣ್ಣು ಹೊರ ತೆಗೆಯಲಾಗ್ತಲೇ ಇದೆ. ಆದ್ರೆ ಅನಾಮಿಕ ದೂರುದಾರ ಹೇಳಿದ ಹಾಗೆ ಅಲ್ಲಿ ಯಾವ ಅಸ್ಥಿಯೂ ಸಿಗ್ತಿಲ್ಲ.. ಈ ಮಧ್ಯೆ ರಾಜಕೀಯ ಜಟಾಪಟಿ ಜೋರಾಗಿದೆ. ಧರ್ಮಸ್ಥಳ ಚಲೋ ಅಂತ ಬಿಜೆಪಿ ಸಜ್ಜಾಗಿದ್ರೆ, ಕೈ ಸಾಮ್ರಾಜ್ಯದೊಳಗಿಂದಲೇ ಇನ್ನೆಷ್ಟು ಗುಂಡಿ ಅಗಿತೀರಿ ಅನ್ನೋ ಪ್ರಶ್ನೆಗಳು ಕೇಳಿ ಬರ್ತಿವೆ. ಇಷ್ಟೆಲ್ಲದರ ಮಧ್ಯೆ ರಾಜ್ಯಾದ್ಯಂತ ಜನರು ಕೂಡ ಧರ್ಮಸ್ಥಳದ ಪರವಾಗಿ ಬೀದಿಗಿಳಿದಿದ್ದಾರೆ.

ಇನ್ನೆಷ್ಟು ದಿನ ಅನಾಮಿಕ ತೋರಿಸಿದ ಕಡೆಯೆಲ್ಲಾ ಗುಂಡಿ ಅಗೆಯುತ್ತೀರಿ ಅನ್ನೋ ಪ್ರಶ್ನೆಯನ್ನ ಜನ್ರು ಕೇಳೋಕೆ ಶುರು ಮಾಡಿದ್ದಾರೆ.. ರಾಜ್ಯಾದ್ಯಂತ ಧರ್ಮಸ್ಥಳದ ಪರವಾಗಿ ಪ್ರತಿಭಟನೆಗಳೂ ನಡೆದಿವೆ. ರಾಜ್ಯಾದ್ಯಂತ ಸಿಡಿದೆದ್ದಿರೋ ಧರ್ಮಸ್ಥಳ ಮಂಜುನಾಥ ಸ್ವಾಮಿ ಭಕ್ತರು, ಕ್ಷೇತ್ರದ ಬಗ್ಗೆ ಅಪಪ್ರಚಾರ ಮಾಡಲಾಗ್ತಿದೆ ಅಂತ ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಹಾಗಿದ್ರೆ ರಾಜ್ಯಾದ್ಯಂತ ಹೇಗಿತ್ತು ಭಕ್ತರ ಹೋರಾಟ..? ಅವರ ಆಗ್ರಹವೇನು..?  ಆಕ್ರೋಶವೇನು..? ಭಕ್ತರು ಹೀಗೆ ಬೀದಿಗಿಳಿದು ಹೋರಾಡ್ತಿದ್ರೆ, ಅತ್ತ ಅನಾಮಿಕ ದೂರುದಾರ ಮತ್ತೊಂದು ಹೊಸ ಬೇಡಿಕೆಯನ್ನ ಎಸ್​ಐಟಿ ಮುಂದಿಟ್ಟಿದ್ದಾನೆ. ಅನಾಮಿಕ ದೂರುದಾರ ಮತ್ತೊಂದು ಬಾಂಬ್ ಸಿಡಿಸಿದ್ದಾನೆ. ಹೊಸದಾಗಿ 30 ಜಾಗ ಗುರುತಿಸ್ತೀನಿ. ಅಲ್ಲಿ 300ಕ್ಕೂ ಹೆಚ್ಚು ಹೆಣ ಇದ್ದಾವೆ. ಅಲ್ಲಿ ಶೋಧಕಾರ್ಯ ನಡೆಸುವಂತೆ ಮುಸುಕುಧಾರಿ ಎಸ್​ಐಟಿ ಮುಂದೆ ಬೇಡಿಕೆ ಇಟ್ಟಿದ್ದಾನಂತೆ.

18:13ಸಿದ್ದು ಸೇನೆಯಲ್ಲಿ ಬಿರುಕು: ಅಹಿಂದ ಅರಸೊತ್ತಿಗೆ, ಸಾಹುಕಾರ್​ಗೆ ಸಿಗುತ್ತಾ ಪ್ರಚಂಡ ಪವರ್?
19:47ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
20:50ಸಿಂಹಾಸನ ಸಂಗ್ರಾಮದಲ್ಲಿ ಡಿಕೆ ಶಿವಕುಮಾರ್ 'ಸ್ನೇಹವ್ಯೂಹ': ಸಿದ್ದು ಸಿಪಾಯಿಗಳನ್ನೇ ಸೆಳೆಯುವ ಬಂಡೆಯ ಹೊಸ ದಾಳ!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
19:26ನಾಟಿ ಕೋಳಿ ಊಟ ಹೊಟ್ಟೆಗೆ ಬೀಳ್ತಿದ್ದಂತೆ, ರಾಜಕೀಯ ಶಾಶ್ವತವಲ್ಲ ಎಂದ ಸಿದ್ದಣ್ಣ; ಆದ್ರೆ ಅಸಲಿಯತ್ತೇ ಬೇರೆ?
20:42ಕುರ್ಚಿ ಆಟದಲ್ಲಿ ಆಟಗಾರರೇ ಅಂಪೈರ್​ಗಳು; ಸಿದ್ದು ಆಟ, ಡಿಕೆ ಹಠ; ಹೈಕಮಾಂಡ್‌ಗೆ ಸಿಂಹಾಸನ ಸಂಕಟ!
23:14ಡಿ.ಕೆ.ಶಿವಕುಮಾರ್‌ಗೆ ಇದ್ಯಾ ರಾಜಯೋಗ? ನೇರಾನೇರ ಕುರ್ಚಿ ಕಾಳಗಕ್ಕೆ ಇಳಿದದ್ದು ಅದೇ ಕಾರಣಕ್ಕಾ?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
21:10ಮಹಾಕ್ರಾಂತಿ ಮಹಾ ಮುಹೂರ್ತ ಫಿಕ್ಸ್: ಪದತ್ಯಾಗನಾ? ಪಟ್ಟಾಭಿಷೇಕನಾ? ದೆಹಲಿಯಲ್ಲಿ ಕ್ಲೈಮ್ಯಾಕ್ಸ್..!
21:28ಹೊಸ ಆಟ ಆರಂಭಿಸಿದ್ರಾ ಡಿಕೆ ಬ್ರದರ್ಸ್? ಸಿಎಂ ಸಿಂಹಾಸನಕ್ಕಾಗಿ ರಾಜಕೀಯ ರಣರಂಗ!
Read more