ಟಿಕೆಟ್ ಕಾಳಗದಲ್ಲಿ ನುಗ್ಗಿ ಬಂತು ಜಾತಿ ಮಿಸೈಲ್..!

ಟಿಕೆಟ್ ಕಾಳಗದಲ್ಲಿ ನುಗ್ಗಿ ಬಂತು ಜಾತಿ ಮಿಸೈಲ್..!

Published : Mar 09, 2023, 07:21 PM IST

ಟಿಕೆಟ್ ಕಾಳಗದಲ್ಲಿ ನುಗ್ಗಿ ಬಂತು ಜಾತಿ ಮಿಸೈಲ್..! ಲಿಂಗಾಯತ.. ಒಕ್ಕಲಿಗ.. ಕುರುಬ.. ಮುಸ್ಲಿಮ್, ದಲಿತ..! ಒಬ್ಬೊಬ್ಬರದ್ದು ಒಂದೊಂದು ನಂಬರ್ ಗೇಮ್..! ಯಾರ ಡಿಮ್ಯಾಂಡ್ ಏನು..?
 

ಬೆಂಗಳೂರು (ಮಾ.9): ಚುನಾವಣೆಗಳು ನಡೆಯೋದು ಜಾತಿ ಆಧಾರದ ಮೇಲೆ ಅನ್ನೋದು ಸಾರ್ವಕಾಲಿಕ ಸತ್ಯ. ಚುನಾವಣೆಯಲ್ಲಿ ಯಾವ ಸಮುದಾಯದ ಎಷ್ಟು ಶಾಸಕರು ಆಯ್ಕೆಯಾಗ್ತಾರೆ ಅನ್ನೋದು ಜನರಿಗಿರೋ ಸಹಜ ಕುತೂಹಲ. ಅಂತಹ ಕುತೂಹಲ ಮತ್ತೆ ಗರಿಗೆದರಿ ನಿಂತಿದೆ. ಟಿಕೆಟ್ ಕಾಳಗದಲ್ಲಿ ದೊಡ್ಡ ಸಮುದಾಯಗಳ ಮಧ್ಯೆ ಪೈಪೋಟಿ ಶುರುವಾಗಿದೆ. ಜಾತಿ ನೋಡಿ ಟಿಕೆಟ್ ಕೊಡಿ ಅನ್ನೋ ಕೂಗು ಎದ್ದು ಬಿಟ್ಟಿದೆ. ಹಾಗಾದ್ರೆ ಯಾರ ಕೂಗು ಜೋರು..? ಯಾರ ಡಿಮ್ಯಾಂಡ್ ಎಷ್ಟು..?

224ರ ಪೈಕಿ 68 ಕ್ಷೇತ್ರಗಳಲ್ಲಿ  ಟಿಕೆಟ್ ನೀಡ್ಬೇಕು ಅಂತ ಕಾಂಗ್ರೆಸ್'ನ ವೀರಶೈವ-ಲಿಂಗಾಯತ ನಾಯಕರು ಪಟ್ಟು ಹಿಡಿದಿದ್ದಾರೆ. ಮೂರೂ ಪಕ್ಷಗಳಿಂದ ಒಟ್ಟು 40 ಟಿಕೆಟ್'ಗಳಿಗೆ ಕುರುಬ ಸಮುದಾಯ ಪಟ್ಟು ಹಾಕಿ ಕೂತಿದೆ. ಟಿಕೆಟ್ ಕಾಳಗದಲ್ಲಿ ಒಕ್ಕಲಿಗ ಸಮುದಾಯದ ನಡೆ ಏನು..? ಮುಸ್ಲಿಂ ಸಮುದಾಯ ಎಷ್ಟು ಟಿಕೆಟ್'ಗಳಿಗೆ ಬೇಡಿಕೆ ಇಟ್ಟಿದೆ..? 

ಕರ್ನಾಟಕ ಚುನಾವಣಾ ಪೂರ್ವತಯಾರಿ ಪರಿವೀಕ್ಷಣೆಗೆ ಬಂದ ಮುಖ್ಯ ಚುನಾವಣಾ ಆಯುಕ್ತ ನೇತೃತ್ವದ ತಂಡ

"ಜಾತಿ ನೋಡಿ ಟಿಕೆಟ್ ಕೊಡಿ". ಇದು ರಾಜ್ಯ ವಿಧಾನಸಭಾ ಚುನಾವಣೆ ಹೊಸ್ತಿಲಲ್ಲಿ ಜೋರಾಗಿ ಸದ್ದು ಮಾಡ್ತಿರೋ ಹೊಸ ಸ್ಲೋಗನ್.  ರಾಜ್ಯದ ದೊಡ್ಡ ಸಮುದಾಯಗಳು ಟಿಕೆಟ್'ಗಾಗಿ ಜಾತಿ ಅಸ್ತ್ರವನ್ನು ಝಳಪಿಸ್ತಾ ಇವೆ. ವಿಧಾನಸಭೆಯಲ್ಲಿ ಸಮುದಾಯದ ಶಾಸಕರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಲು ಪ್ಲಾನ್ ಮಾಡ್ತಿವೆ. ಹಾಗಾದ್ರೆ ಈ ಬಾರಿ ಟಿಕೆಟ್ ಹಂಚಿಕೆಯಲ್ಲಿ ಯಾವ ಸಮುದಾಯಕ್ಕೆ ಸಿಂಹಪಾಲು ಅನ್ನೋದೇ ಇರುವ ಕುತೂಹಲ.

18:13ಸಿದ್ದು ಸೇನೆಯಲ್ಲಿ ಬಿರುಕು: ಅಹಿಂದ ಅರಸೊತ್ತಿಗೆ, ಸಾಹುಕಾರ್​ಗೆ ಸಿಗುತ್ತಾ ಪ್ರಚಂಡ ಪವರ್?
19:47ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
20:50ಸಿಂಹಾಸನ ಸಂಗ್ರಾಮದಲ್ಲಿ ಡಿಕೆ ಶಿವಕುಮಾರ್ 'ಸ್ನೇಹವ್ಯೂಹ': ಸಿದ್ದು ಸಿಪಾಯಿಗಳನ್ನೇ ಸೆಳೆಯುವ ಬಂಡೆಯ ಹೊಸ ದಾಳ!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
19:26ನಾಟಿ ಕೋಳಿ ಊಟ ಹೊಟ್ಟೆಗೆ ಬೀಳ್ತಿದ್ದಂತೆ, ರಾಜಕೀಯ ಶಾಶ್ವತವಲ್ಲ ಎಂದ ಸಿದ್ದಣ್ಣ; ಆದ್ರೆ ಅಸಲಿಯತ್ತೇ ಬೇರೆ?
20:42ಕುರ್ಚಿ ಆಟದಲ್ಲಿ ಆಟಗಾರರೇ ಅಂಪೈರ್​ಗಳು; ಸಿದ್ದು ಆಟ, ಡಿಕೆ ಹಠ; ಹೈಕಮಾಂಡ್‌ಗೆ ಸಿಂಹಾಸನ ಸಂಕಟ!
23:14ಡಿ.ಕೆ.ಶಿವಕುಮಾರ್‌ಗೆ ಇದ್ಯಾ ರಾಜಯೋಗ? ನೇರಾನೇರ ಕುರ್ಚಿ ಕಾಳಗಕ್ಕೆ ಇಳಿದದ್ದು ಅದೇ ಕಾರಣಕ್ಕಾ?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
21:10ಮಹಾಕ್ರಾಂತಿ ಮಹಾ ಮುಹೂರ್ತ ಫಿಕ್ಸ್: ಪದತ್ಯಾಗನಾ? ಪಟ್ಟಾಭಿಷೇಕನಾ? ದೆಹಲಿಯಲ್ಲಿ ಕ್ಲೈಮ್ಯಾಕ್ಸ್..!
21:28ಹೊಸ ಆಟ ಆರಂಭಿಸಿದ್ರಾ ಡಿಕೆ ಬ್ರದರ್ಸ್? ಸಿಎಂ ಸಿಂಹಾಸನಕ್ಕಾಗಿ ರಾಜಕೀಯ ರಣರಂಗ!
Read more