ಶರತ್ ಬಚ್ಚೇಗೌಡ ಬೆನ್ನಿಗೆ ನಿಂತ ಸಿದ್ದು, ಎಂಟಿಬಿಗೆ ಗುದ್ದು

Feb 25, 2021, 4:51 PM IST

ಬೆಂಗಳೂರು, (ಫೆ.25): ಹೊಸಕೋಟೆ ವಿಧಾನಸಭೆ ಕ್ಷೇತ್ರದ ಪಕ್ಷೇತರ ಶಾಸಕ ಶರತ್ ಬಚ್ಚೇಗೌಡ ಅವರು  ಕಾಂಗ್ರೆಸ್ ಶಾಸಕಾಂಗ ಪಕ್ಷಕ್ಕೆ ಬಾಹ್ಯ ಬೆಂಬಲ ಘೋಷಿಸಿದರು. 

ದಿಢೀರ್ ತೀರ್ಮಾನ ಬದಲು: ಕಾಂಗ್ರೆಸ್ ಸೇರ್ಪಡೆ ಬದಲಿಗೆ ಬೇರೆ ಹಾದಿ ತುಳಿದ ಶರತ್ ಬಚ್ಚೇಗೌಡ

ಬೆಂಗಳೂರಿನಲ್ಲಿ ಇಂದು (ಗುರುವಾರ) ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ಶರತ್ ಬಚ್ಚೇಗೌಡ ಕಾಂಗ್ರೆಸ್ ಶಾಸಕಾಂಗ ಪಕ್ಷಕ್ಕೆ ಬಾಹ್ಯ ಬೆಂಬಲ ಪ್ರಕಟಿಸಿದರು. ಈ ವೇಳೆ ಸಿದ್ದರಾಮಯ್ಯ ಅವರು ಸಚಿವ ಎಂಟಿಬಿ ನಾಗರಾಜ್ ಅವರಿಗೆ ಟಾಂಗ್ ಕೊಟ್ಟಿದ್ದಾರೆ.