RR ನಗರ ರಸ್ತೆಗಳನ್ನು ನೋಡಿದ್ರೆ ಮುನಿರತ್ನ ಅಭಿವೃದ್ಧಿ ಕೆಲಸ ಅರ್ಥವಾಗುತ್ತದೆ: ದರ್ಶನ್

Oct 30, 2020, 2:47 PM IST

ಬೆಂಗಳೂರು (ಅ. 30): ಆರ್‌ಆರ್‌ ನಗರ ಬಿಜೆಪಿ ಅಭ್ಯರ್ಥಿ ಮುನಿರತ್ನ ಪರ ದರ್ಶನ್ ಪ್ರಚಾರ ಮಾಡಿದ್ದಾರೆ. ಪ್ರಚಾರದ ವೇಳೆ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ. 

'ಆರ್‌ಆರ್‌ ನಗರ ಹುಲಿಯನ್ನು ನಾವು ಗೆದ್ದೇ ಗೆಲ್ಲಿಸ್ತೀವಿ, ಕೈ ಕುತಂತ್ರವೆಲ್ಲಾ ಇಲ್ಲಿ ನಡೆಯಲ್ಲ'

'ಆರ್‌ಆರ್‌ ನಗರದಲ್ಲಿ ಓಡಾಡಿದ್ರೆ ನಿಮಗೆ ಅರ್ಥವಾಗುತ್ತದೆ. ಅವರು ಅಭಿವೃದ್ಧಿ ಮಾಡಿರುವ ರಸ್ತೆಗಳನ್ನು ನೋಡಿದರೆ ಅರ್ಥವಾಗುತ್ತದೆ. ಗಾಡಿಗಳಿಗೆ ಟ್ಯಾಕ್ಸ್ ಕಟ್ಟುತ್ತೇವೆ. ಆದರೆ ರಸ್ತೆಯೇ ಚೆನ್ನಾಗಿಲ್ಲ ಅಂದ್ರೆ ಏನು ಮಾಡೋಣ? ಮುಂದೆಯೂ ಕೂಡಾ ಒಳ್ಳೊಳ್ಳೆ ಕೆಲಸಗಳನ್ನು ಅವರು ಮಾಡುತ್ತಾರೆ. ನನಗೆ ಆ ನಂಬಿಕೆ ಇದೆ' ಎಂದಿದ್ದಾರೆ.