Dec 28, 2022, 10:28 AM IST
ಮೀಸಲಾತಿ ವಿಚಾರದಲ್ಲಿ ಎಚ್ಚರಿಕೆ ವಹಿಸಲು ಸಿಎಂ ಬಸವರಾಜ ಬೊಮ್ಮಾಯಿ ಹೈಕಮಾಂಡ್ ಸಲಹೆ ನೀಡಿದೆ. ಸಮುದಾಯದ ಒತ್ತಡಕ್ಕೆ ಮಣಿದು ತಪ್ಪು ತೀರ್ಮಾನ ಮಾಡಬೇಡಿ. ಸರ್ವ ಪಕ್ಷಗಳ ಸಭೆ ಕರೆದು ಎಲ್ಲಾ ನಾಯಕರ ನಿಲುವು ತಿಳಿದುಕೊಳ್ಳಿ. ಮೀಸಲಾತಿಗೆ ಸಾಮಾಜಿಕ ನ್ಯಾಯವೇ ಮಾನದಂಡವಾಗಿರಬೇಕು. ಈ ವಿಚಾರವಾಗಿ ಡಿ. 30 ಮತ್ತು 31ರ ಅಮಿತ್ ಶಾ ಭೇಟಿಯಲ್ಲಿ ಚರ್ಚೆ ಆಗಬಹುದು ಹೊರತು, ನಿರ್ಣಯಗಳು ಆಗುವುದಿಲ್ಲ. ಜನವರಿ 12ರಂದು ದೆಹಲಿಯಲ್ಲಿ ಇದಕ್ಕೆ ಸಂಬಂಧಿಸಿದಂತೆ ಮತ್ತೊಂದು ಸಭೆ ಮಾಡಲಾಗುತ್ತದೆ. ಮತ್ತೊಮ್ಮೆ ಸಿಎಂ ಬೊಮ್ಮಾಯಿ ದೆಹಲಿಗೆ ಭೇಟಿ ನೀಡಲಿದ್ದಾರೆ.