ನನ್ನನ್ನು ಸಮಯ ಕಾದು ಡಿಕೆಶಿ ಹೊಡೆದಿದ್ದಾರೆ: ರಮೇಶ್ ಜಾರಕಿಹೊಳಿ ಕಿಡಿ

Jan 30, 2023, 1:44 PM IST

ಯಾರನ್ನು ವೈಯಕ್ತಕವಾಗಿ ಟೀಕೆ ಮಾಡಬಾರದು, ವೈಯಕ್ತಿಕ ದಾರಿ ತಪ್ಪಿದರೆ ಸರಿ ದಾರಿಗೆ ತರಬೇಕು ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ತಿಳಿಸಿದ್ದಾರೆ. ಶಾಂತಿನಗರ ಹೌಸಿಂಗ್‌ ಸೊಸೈಟಿ ಫೈಲ್‌ ಕ್ಲಿಯರ್‌ ಮಾಡದ್ದಕ್ಕೆ ಷಡ್ಯಂತ್ರ ನಡೆಸಲಾಗಿದೆ. ನಾನು ಸಹಕಾರ ಸಚಿವ ಆಗಿದ್ದಾಗ ಹತ್ತು ಸಾವಿರ ಕೋಟಿ ಫೈಲ್‌ ಕ್ಲಿಯರ್‌ ಮಾಡಲು ಒತ್ತಾಯ ಮಾಡಿದ್ದರು. ಆದರೆ ನಾನು ಫೈಲ್‌ ಕ್ಲಿಯರ್‌ ಮಾಡಿರಲಿಲ್ಲ . ಈಗಾಗಿ ನನ್ನ ವಿರುದ್ಧ ಷಡ್ಯಂತ್ರ ನಡೆದಿದೆ ಎಂದು ರಮೇಶ್ ಜಾರಕಿಹೊಳಿ ಆರೋಪ ಮಾಡಿದ್ದಾರೆ. ಹಗರಣ ಆಗಿದೆ ಎಂದು ಅಧಿಕಾರಿ ನನ್ನ ಬಳಿ ಹೇಳಿದ್ರು ಎಂದು ಅವರು ತಿಳಿಸಿದ್ದಾರೆ.

ಡಿಕೆಶಿ ರಾಜಕಾರಣದಲ್ಲಿರಲು ನಾಲಾಯಕ್‌: ರಮೇಶ್ ಜಾರಕಿಹೊಳಿ ಗುಡುಗು