ರಾಷ್ಟ್ರವ್ಯೂಹದ ಭವಿಷ್ಯ ನಿರ್ಧರಿಸಲಿದೆ ರಾಷ್ಟ್ರಪತಿ ಚುನಾವಣೆ

Jun 14, 2022, 9:49 PM IST

ಬೆಂಗಳೂರು (ಜೂನ್.14): ದೇಶ ರಾಷ್ಟ್ರಪತಿ ಚುನಾವಣೆಗೆ (president election) ಸಿದ್ಧವಾಗುತ್ತಿದೆ. ಒಂದೆಡೆ ಪ್ರಧಾನಿ (Prime Minister Modi)ನೇತೃತ್ವದ ಬಿಜೆಪಿಗೆ  (BJP) ವಿಪಕ್ಷಗಳು ತೊಡೆತಟ್ಟಿ ನಿಂತಿದೆ. ತೆಲಂಗಾಣದ ಕೆಸಿಆರ್ (Telngana CM KCR), ಬಂಗಾಳದ ಮಮತಾ ಬ್ಯಾನರ್ಜಿ(West Bengal CM Mamata banerje) ಹಾಗೂ ದೆಹಲಿಯ ಅರವಿಂದ್ ಕೇಜ್ರಿವಾಲ್ (Delhi CM arvind kejriwal) ಇಡೀ ವಿಪಕ್ಷಗಳ ಬಣವನ್ನುಒಟ್ಟುೂಡಿಸುವ ಇರಾದೆಯಲ್ಲಿದ್ದಾರೆ.

ರಾಷ್ಟ್ರಪತಿ ಚುನಾವಣೆಯ ಹೆಸರಲ್ಲಿ ನಡೀತಾ ಇರೋ ಮೋದಿ ಶತ್ರುಕೂಟದ ಪ್ಲಾನ್ ಎಂಥದ್ದು, ಅವರು ಈ ಯೋಜನೆಯಲ್ಲಿ ಯಶ ಕಾಣ್ತಾರಾ ಎನ್ನುವ ಕುತೂಹಲ ಎಲ್ಲರಲ್ಲಿದೆ. ಹಾಗಾದ್ರೆ ಮೋದಿ ವಿರುದ್ಧದ ರಾಷ್ಟ್ರವ್ಯೂಹದಲ್ಲಿ ವಿಪಕ್ಷಗಳ ಮೈತ್ರಿಕೂಟದ ನೇತೃತ್ವ ವಹಿಸಲಿರೋದು ಯಾರು..? ತೆಲಂಗಾಣದ ಕೆಸಿಆರಾ..? ಬಂಗಾಳದ ದೀದಿನಾ..? ಅಥವಾ ಕಾಂಗ್ರೆಸ್ಸಾ..? ಅಷ್ಟಕ್ಕೂ ರಾಷ್ಟ್ರಪತಿ ಚುನಾವಣೆಯಲ್ಲಿ ವಿಪಕ್ಷಗಳ ಒಮ್ಮತದ ಅಭ್ಯರ್ಥಿ ಯಾರು..? ಇದು ನಿಂತಿರೋದೇ ಪ್ರಧಾನಿ ಮೋದಿ ನಿರ್ಧಾರದ ಮೇಲೆ ಎಂದು ಹೇಳಿದರೆ ನಿಮಗೆ ಅಚ್ಚರಿ ಕೂಡ ಅನಿಸಬಹುದು.

ರಾಷ್ಟ್ರಪತಿ ರೇಸಲ್ಲಿ 6 ಮಂದಿ: ಮೋದಿ ಕಣ್ಣು ಯಾರ ಮೇಲೆ? ಯಾರಾಗ್ತಾರೆ ದೇಶದ ಪ್ರಥಮ ಪ್ರಜೆ?

ರಾಷ್ಟ್ರಪತಿ ಚುನಾವಣೆ ಬೇರೆಲ್ಲಾ ಚುನಾವಣೆಗಳಂತಲ್ಲ. ಇಲ್ಲಿನ ಲೆಕ್ಕಾಚಾರವೇ ಬೇರೆ. ಅಷ್ಟಕ್ಕೂ ದೇಶದ ಪ್ರಥಮ ಪ್ರಜೆಯನ್ನುಆರಿಸುವ ಚುನಾವಣೆ ಹೇಗೆ ನಡೆಯತ್ತೆ..? ಇಲ್ಲಿ ಮತ ಚಲಾಯಿಸುವ ಹಕ್ಕು ಯಾರಿಗೆಲ್ಲಾ ಇರತ್ತೆ ಅನ್ನೋ ಕುತೂಹಲ ಎಲ್ಲರಲ್ಲಿದೆ.