ಕೆಂಗಲ್ ಹನುಮಂತಯ್ಯ ಅವರು ಬೆಸ್ಟ್ ಮುಖ್ಯಮಂತ್ರಿ: ವಾಟಾಳ್ ನಾಗರಾಜ್

Jan 8, 2023, 3:43 PM IST

ಕೆಂಗಲ್ ಹನುಮಂತಯ್ಯ ವಿಧಾನ ಸೌಧವನ್ನು ಬಹಳ ಕಡಿಮೆ ದುಡ್ಡಲ್ಲಿ ಕಟ್ಟಿಸಿದ್ದಾರೆ. ಅವರು ಪ್ರಾಮಾಣಿಕರು ಎಂದು ವಾಟಾಳ್ ನಾಗರಾಜ್ ಹೇಳಿದರು. ಅವರು ಸತ್ಯವಂತರು, ಇನ್ನು ಅಂತವರು ಸಿಗುವುದಿಲ್ಲ ಎಂದರು. ಜತೆಯಲ್ಲಿ 500 ಸಭೆ ಮಾಡಿದ್ದಾರೆ. ನನ್ನ ಜೊತೆ ಬಂದು ಭಾಷಣ ಮಾಡಿದ್ದಾರೆ. ನಿಜಲಿಂಗಪ್ಪನವರನ್ನು ಸತ್ಯ ಹರಿಶ್ಚಂದ್ರನಿಗೆ ಹೋಲಿಕೆ ಮಾಡಬಹುದು ಎಂದರು. ಹಾಗೇ ದೇವರಾಜ ಅರಸು ಕೂಡ ಅದ್ಭುತ ಹಾಗೂ ವೀರೇಂದ್ರ ಪಾಟೀಲ್‌ ಕೂಡ ಅತ್ಯುತ್ತಮ ಮುಖ್ಯಮಂತ್ರಿ ಎಂದು ಹೇಳಿದರು.