ಮತ್ತೆ ಮೈತ್ರಿ ಚಿಗುರು? ಮೋದಿ ವಿರುದ್ಧ ತೊಡೆ ತಟ್ಟಲು ಕಾಂಗ್ರೆಸ್-ಜೆಡಿಎಸ್ ರಣತಂತ್ರ

Jan 7, 2020, 4:33 PM IST

ಬೆಂಗಳೂರು, (ಜ.07): ನರೇಂದ್ರ ಮೋದಿ ವಿರುದ್ಧ ತೊಡೆ ತಟ್ಟಲು ಕಾಂಗ್ರೆಸ್- ಜೆಡಿಎಸ್ ರಣತಂತ್ರ ರೂಪಿಸಿದ್ದು, ಮುರಿದು ಬಿದ್ದ ಮೈತ್ರಿ ಮತ್ತೆ ರಾಜ್ಯದಲ್ಲಿ ಮತ್ತೆ ಚಿಗುರುವ ಲಕ್ಷಣಗಳು ಗೋಚರಿಸುತ್ತಿದೆ.

ಗೌಡರು ರಾಜ್ಯಸಭೆಗೆ: ಕಾಂಗ್ರೆಸ್‌ ಬೆಂಬಲ?

ಕಾಂಗ್ರೆಸ್-ಜೆಡಿಎಸ್ ನಾಯಕರು ಲೋಕಸಭಾ ಚುನಾವಣೆಯಲ್ಲಿ ಸೋತು ಬಳಿಕ ಒಬ್ಬರಿಗೊಬ್ಬರು ಪರಸ್ಪರವಾಗಿ ಕಿತ್ತಾಡಿಕೊಂಡಿದ್ದರು. ಅಷ್ಟೇ ಅಲ್ಲದೇ ಮತ್ತೆ ಮೈತ್ರಿ ಪ್ರಶ್ನೆಯೇ ಇಲ್ಲ ಎಂದು ಕಡ್ಡಿ ತುಂಡಾದಂತೆ ಜೆಡಿಎಸ್ ನಾಯರು ಹೇಳಿದ್ದರು.

 ಆದ್ರೆ, ಇದೀಗ ದೆಹಲಿಯಲ್ಲಿ ಮೋದಿ ವಿರೋಧಿ ಕೂಗಿಗೆ ಮತ್ತಷ್ಟು ಬಲ ತುಂಬಲು ಮತ್ತೆ ಕಾಂಗ್ರೆಸ್-ಜೆಡಿಎಸ್‌ ಮೈತ್ರಿ ಮೊಳಕೆ ಹೊಡೆದಿದೆ. ಕರ್ನಾಟಕದಲ್ಲಿ ಮೈತ್ರಿ ಕುರಿತು ದೆಹಲಿ ಮಟ್ಟದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ವರಿಷ್ಟರು ಚರ್ಚೆ ನಡೆಸಿದ್ದಾರೆನ್ನಲಾಗಿದೆ. ಏಕೆ ಮೈತ್ರಿ..? ಮೈತ್ರಿ ಮಾಡಿ[ಕೊಂಡ್ರೆ ಏನು ಲಾಭ..?