ಮಗ ಆಯ್ತು ಈಗ ಅಪ್ಪ ಸಾಫ್ಟ್: ಬೈ ಎಲೆಕ್ಷನ್ ರಿಸಲ್ಟ್ ಏನೇ ಆಗ್ಲೀ BSY ಸರ್ಕಾರ ಸೇಫ್

Nov 5, 2019, 6:25 PM IST

ಬೆಂಗಳೂರು, (ನ.05): ಯಾವುದೇ ಕಾರಣಕ್ಕೂ ಯಾರ ಜತೆ ಹೊಂದಾಣಿಕೆ ಇಲ್ಲವೆಂದು ಹೇಳಿದ್ದ ದೇವೇಗೌಡ ಇದೀಗ ಅದ್ಯಾಕೋ ಯುಟರ್ನ್ ಹೊಡೆದಂತಿದೆ.

ಸರ್ಕಾರದ ವಿರುದ್ಧ ರಿವೇಂಜ್ ತೀರಿಸಿಕೊಳ್ಳಲ್ಲ: BJPಗೆ HDK ಶರಣಾಗತಿ ..?

2006ರ ಬಳಿಕ ಜೆಡಿಸ್ ಹಾಗೂ ಬಿಜೆಪಿ ಮತ್ತೆ ಒಂದಾಗೋಣ ಬಾ ಅನ್ನೋತರ ಇದೆ. ಯಾಕಂದ್ರೆ ಮೊನ್ನೇ ಅಷ್ಟೇ ಕುಮಾರಸ್ವಾಮಿ ಅವರು ಸರ್ಕಾರ ಬೀಳಿಸಲ್ಲ ಎಂದು ಅಚ್ಚರಿ ಹೇಳಿಕೆ ನೀಡಿದ್ದರು. 

ಸರ್ಕಾರ ಬೀಳಿಸಲ್ಲ ಎನ್ನುವ HDK ಓಪನ್ ಸ್ಟೇಟ್​ಮೆಂಟ್: ಮದುವೆ ಮನೆಯಲ್ಲಾಯ್ತು ಕಮಿಟ್‌ಮೆಂಟ್‌

ಇದರ ಬೆನ್ನಲ್ಲೇ ಇದೀಗ ಸ್ವತಃ ದೊಡ್ಡಗೌಡ್ರು ಪರೋಕ್ಷವಾಗಿ ಬಿ.ಎಸ್.ಯಡಿಯೂರಪ್ಪಗೆ ಬೆಂಬಲಿಸಲು ಅಭಯ ನೀಡಿದ್ದಾರೆ ಎನ್ನಲಾಗಿದೆ. ಒಂದು ವೇಳೆ ಬಿಜೆಪಿ-ಜೆಡಿಎಸ್ ನಡುವೆ ಅಂದುಕೊಂಡಂತೆ ನಡೆದರೆ ಉಪಚುನಾವಣೆಯ ಫಲಿತಾಂಶ ಏನೇ ಆಗಲಿ ಸರ್ಕಾರ ಮಾತ್ರ ಸೇಫ್ ಆಗಿರಲಿದೆ.

ಇದಕ್ಕೆ ಪೂಕರವೆಂಬಂತೆ ಇಂದು ದೇವೇಗೌಡ್ರು ಬಿಜೆಪಿ ಮೇಲೆ ಸಾಫ್ಟ್ ಕಾರ್ನರ್ ತೋರಿಸಿದ್ದನ್ನು ವಿಡಿಯೋನಲ್ಲಿ ನೋಡಿ.