'ತಲೆಕೆಟ್ಟವರಿಗೆ ಇನ್ನೇನು ಹೇಳಲು ಸಾಧ್ಯ' ರವಿಗೆ ಉಗ್ರಪ್ಪ ಏಟು!

Aug 13, 2021, 7:53 PM IST

ಬೆಂಗಳೂರು(ಆ. 13) ಬಿಜೆಪಿ ನಾಯಕ ಸಿಟಿ ರವಿ ಮಾತನಾಡುವ ಭರದಲ್ಲಿ ಬೇಕಾದರೆ ಕಾಂಗ್ರೆಸ್  ನಾಯಕರು ತಮ್ಮ ಕಚೇರಿಯಲ್ಲಿ ನೆಹರು ಹುಕ್ಕಾ ಬಾರ್ ಸ್ಥಾಪನೆ ಮಾಡಿಕೊಳ್ಳಲಿ ಎಂದು ಹೇಳಿದ್ದು ದೊಡ್ಡ ವಿವಾದಕ್ಕೆ ಕಾರಣವಾಗಿತ್ತು.   ಮತ್ತೆ ರವಿ ತಮ್ಮ ಹೇಳಿಕೆಯನ್ನು ಸಮರ್ಥನೆ ಮಾಡಿಕೊಂಡಿದ್ದರು.  ಕಾಂಗ್ರೆಸ್ ನಾಯಕರು ಸಿಟಿ ರವಿ   ಮೇಲೆ ಹರಿಯಾಯ್ದಿದ್ದಾರೆ.

ತಮ್ಮದೇ ಪಕ್ಷದ ಶಾಸಕರಿಗೆ ಸವಾಲು ಹಾಕಿದ ಸಿಟಿ ರವಿ

ಸಿಟಿ ರವಿ ಹೇಳಿಕೆಗೆ  ಕಾಂಗ್ರೆಸ್  ನಾಯಕ ವಿಎಸ್ ಉಗ್ರಪ್ಪ ತಿರುಗೇಟು ನೀಡಿದ್ದಾರೆ. ತಲೆ ಕೆಟ್ಟವರಿಗೆ ಏನು ಹೇಳಲು ಸಾಧ್ಯ. ಬಿಜೆಪಿಯವರಿಗೆ ಸಂಸ್ಕಾರವೂ  ಇಲ್ಲ.. ಸಂವಿಧಾನವೂ ಗೊತ್ತಿಲ್ಲ ಎಂದು ತಿರುಗೇಟು ಕೊಟ್ಟಿದ್ದಾರೆ.