ಕೊರೋನಾಗೆ ಔಷಧಿ ಸಿಕ್ಕಿದೆ.. ಕಲ್ಲಂಗಡಿ ರೋಗಕ್ಕೆ ಸಿಗಲ್ವಾ..? ವಿಜ್ಞಾನಿಗಳಿಗೆ ಬಿಸಿ ಪಾಟೀಲ್ ಕ್ಲಾಸ್

Jan 23, 2021, 10:44 PM IST

ಚಾಮರಾಜನಗರ, (ಜ.23): ರೈತರ ಆತ್ಮಹತ್ಯೆ ಬಗ್ಗೆ ಮತನಾಡಿದ ವಿವಾದಕ್ಕೀಡಾಗಿದ್ದ ಕೃಷಿ ಸಚಿವ ಬಿ.ಸಿ.ಪಾಟೀಲ್, ಕೊರೋನಾಗೆ ಔಷಧಿ ಸಿಕ್ಕಿದೆ. ಕಲ್ಲಂಗಡಿ ರೋಗಕ್ಕೆ ಸಿಗಲ್ವಾ..? ಎಂದು ವಿಜ್ಞಾನಿಗಳಿಗೆ ಕ್ಲಾಸ್ ತೆಗದುಕೊಂಡಿರುವ ಘಟನೆ ನಡೆದಿದೆ.

ರೈತರ ಆತ್ಮಹತ್ಯೆ ಬಗ್ಗೆ ಮತ್ತೊಂದು ಹೇಳಿಕೆ ನೀಡಿ ವಿವಾದ ಸೃಷ್ಟಿಸಿದ ಸಚಿವ

ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ‌ ಮುಂಟಿಪುರ ಗ್ರಾಮದಲ್ಲಿ ನಡೆದ ರೈತರ ಕಾರ್ಯಕ್ರಮದಲ್ಲಿ ಕೃಷಿ ಸಚಿವರು ಭಾಗಿಯಾಗಿದ್ದರು. ಈ ವೇಳೆ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳಿಗೆ ಕ್ಲಾಸ್​ ತೆಗೆದುಕೊಂಡ ಸಚಿವರು, ಕೊರೋನಾಗೆ ಔಷಧಿಯನ್ನ ಕಂಡು ಹಿಡಿದಿದ್ದಾರೆ. ನಿಮಗೆ ಕಲ್ಲಂಗಡಿ ರೋಗಕ್ಕೆ ಔಷಧಿ ಕಂಡು ಹಿಡಿಯಲು ಸಾಧ್ಯವಾಗಿಲ್ಲವೇ ಎಂದು ಪ್ರಶ್ನಿಸಿದ್ದಾರೆ.