ಮೋದಿ ರೋಡ್ ಶೋ‌ಗೆ ಟಕ್ಕರ್ ಕೊಡಲು ದೇವೇಗೌಡರ ಮಹಾಯಾತ್ರೆ! 100 ಕಿ.ಮೀ ಯಾತ್ರೆ ಹಿಂದೆ ನೂರಾರು ಲೆಕ್ಕಾಚಾರ!

ಮೋದಿ ರೋಡ್ ಶೋ‌ಗೆ ಟಕ್ಕರ್ ಕೊಡಲು ದೇವೇಗೌಡರ ಮಹಾಯಾತ್ರೆ! 100 ಕಿ.ಮೀ ಯಾತ್ರೆ ಹಿಂದೆ ನೂರಾರು ಲೆಕ್ಕಾಚಾರ!

Published : Mar 16, 2023, 01:48 PM IST

ಜೆಡಿಎಸ್‌ ಭದ್ರಕೋಟೆ ಮಂಡ್ಯದಲ್ಲಿ ಮೋದಿ ರೋಡ್‌ ಶೋ ಅಬ್ಬರ ಹಾಗೂ ಡಿ.ಕೆ.ಶಿವಕುಮಾರ್‌ ಗುಡುಗಿಗೆ ಠಕ್ಕರ್‌ ಕೊಡಲು ಮುಂದಾಗಿರುವ ರಾಜಕೀಯ ಭೀಷ್ಮ ದೇವೇಗೌಡರು 100 ಕಿ.ಮೀ ಮಹಾಯಾತ್ರೆಯನ್ನು ಆರಂಭಿಸುತ್ತಿದ್ದಾರೆ.


ಬೆಂಗಳೂರು (ಮಾ.16):  ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ದೇವೇಗೌಡರ ಭದ್ರಕೋಟೆಯಾಗಿರುವ ಮಂಡ್ಯದಲ್ಲಿ ರೋಡ್‌ ಶೋ ಮೂಲಕ ಅಬ್ಬರಿಸಿದ್ದರು. ಇನ್ನು ಡಿಕೆ. ಶಿವಕುಮಾರ್‌ ಅವರೂ ಕೂಡ ಗೌಡರ ವಿರುದ್ಧ ಗುಡುಗಿದ್ದರು. ಆದರೆ, ಇವರಿಬ್ಬರೂ ಠಕ್ಕರ್‌ ಕೊಡುವುದಕ್ಕೆ ಸಿದ್ಧವಾಗಿರುವ ಕರ್ನಾಟಕ ರಾಜಕೀತ ಭೀಷ್ಮ ಮಾಜಿ ಪ್ರಧಾನಮಂತ್ರಿ ಎಚ್.ಡಿ. ದೇವೇಗೌಡರು ತಮ್ಮದರ್ಬಾರ್‌ ಶುರು ಮಾಡಲಿದ್ದಾರೆ. ಹಿನ್ನೆಲೆಯಲ್ಲಿ ರಾಜ್ಯದಲ್ಲಿ 100 ಕಿ.ಮೀ. ಮಹಾಯಾತ್ರೆಯನ್ನ ಮಾಡಲು ಮುಂದಾಗಿದ್ದಾರೆ.

ಒಕ್ಕಲಿಗರ ಒಡ್ಡೋಲಗದಲ್ಲಿ ದೇವೇಗೌಡರ ದಂಡಯಾತ್ರೆ ಈಗ ಆರಂಭವಾಗಲಿದೆ. 90 ವರ್ಷದ ವಯೋವೃದ್ಧ ಗೌಡರಿಂದ 100 ಕಿ.ಮೀ ಮಹಾಯಾತ್ರೆಯೇ ಆರಂಭವಾಗಲಿದೆ. ಒಟ್ಟು 25 ರಣಕ್ಷೇತ್ರಗಳಲ್ಲಿ ಮಹಾಯಾತ್ರೆ ನಡೆಯಲಿದ್ದು, ಮತಬೇಟೆಯನ್ನಾಡಲು ಅಸ್ತ್ರವನ್ನು ಪ್ರಯೋಗಿಸಲಿದ್ದಾರೆ. ಈಗ ಆರಂಭವಾಗುತ್ತಿರುವ ದೇವೇಗೌಡರ 100 ಕಿ.ಮೀ ರೋಡ್ ಶೋನ ಹಿಂದೆ ನೂರಾರು ಲೆಕ್ಕಾಚಾರ ಅಡಗಿರುವುದಂತೂ ಸತ್ಯವಾಗಿದೆ. ಇದರಿಂದ ಕಾಂಗ್ರೆಸ್‌ ಮತ್ತು ಬಿಜೆಪಿ ಅಭ್ಯರ್ಥಿಗಳಲ್ಲಿಯೂ ಕೂಡ ಆತಂಕ ಶುರುವಾಗಲಿದೆ. ಇನ್ನು ಯಾರಿಗೆ ಮತ ಹಾಕಬೇಕು ಎಂದು ಓಲಾಟದಲ್ಲಿರುವ ಮತದಾರರು ದೇವೇಗೌಡ ಆಗಮನದಿಂದ ಜೆಡಿಎಸ್‌ಗೆ ತಮ್ಮ ಮತಗಳನ್ನು ಒತ್ತಲು ದೃಢ ನಿರ್ಧಾರ ಮಾಡುವ ಸಾಧ್ಯತೆಗಳೂ ಹೆಚ್ಚಾಗುತ್ತದೆ ಎಂದು ರಾಜಕೀಯ ಮೂಲಗಳಿಂದ ತಿಳಿದುಬಂದಿದೆ.

19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
19:26ನಾಟಿ ಕೋಳಿ ಊಟ ಹೊಟ್ಟೆಗೆ ಬೀಳ್ತಿದ್ದಂತೆ, ರಾಜಕೀಯ ಶಾಶ್ವತವಲ್ಲ ಎಂದ ಸಿದ್ದಣ್ಣ; ಆದ್ರೆ ಅಸಲಿಯತ್ತೇ ಬೇರೆ?
20:42ಕುರ್ಚಿ ಆಟದಲ್ಲಿ ಆಟಗಾರರೇ ಅಂಪೈರ್​ಗಳು; ಸಿದ್ದು ಆಟ, ಡಿಕೆ ಹಠ; ಹೈಕಮಾಂಡ್‌ಗೆ ಸಿಂಹಾಸನ ಸಂಕಟ!
23:14ಡಿ.ಕೆ.ಶಿವಕುಮಾರ್‌ಗೆ ಇದ್ಯಾ ರಾಜಯೋಗ? ನೇರಾನೇರ ಕುರ್ಚಿ ಕಾಳಗಕ್ಕೆ ಇಳಿದದ್ದು ಅದೇ ಕಾರಣಕ್ಕಾ?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
21:10ಮಹಾಕ್ರಾಂತಿ ಮಹಾ ಮುಹೂರ್ತ ಫಿಕ್ಸ್: ಪದತ್ಯಾಗನಾ? ಪಟ್ಟಾಭಿಷೇಕನಾ? ದೆಹಲಿಯಲ್ಲಿ ಕ್ಲೈಮ್ಯಾಕ್ಸ್..!
21:28ಹೊಸ ಆಟ ಆರಂಭಿಸಿದ್ರಾ ಡಿಕೆ ಬ್ರದರ್ಸ್? ಸಿಎಂ ಸಿಂಹಾಸನಕ್ಕಾಗಿ ರಾಜಕೀಯ ರಣರಂಗ!
22:40ಕುರ್ಚಿ ಕಿತ್ತಾಟ: 'ಜೋಡೆತ್ತು'ಗಳ ಜಲ್ಲಿಕಟ್ಟು, ಡಿಕೆಶಿ-ಸತೀಶ್ ಜಾರಕಿಹೊಳಿ ಮಧ್ಯರಾತ್ರಿ ರಹಸ್ಯ ರಿವೀಲ್!
21:17ಸಿಎಂ ಸಿಂಹಾಸನ ಸಮರ: 'ಕೊಟ್ಟ ಮಾತು ಉಳಿಸಿಕೊಳ್ಳಿ'! ಅಧ್ಯಕ್ಷ ಖರ್ಗೆಗೆ ಡಿಕೆಶಿ 'ಆತ್ಮಸಾಕ್ಷಿ' ಅಸ್ತ್ರ!
22:55Karnataka Politics: ಉಭಯ ಸಂಕಟದಲ್ಲಿ ಸಿಲುಕಿದ ಕಾಂಗ್ರೆಸ್ ಹೈಕಮಾಂಡ್! ಹೇಗಿವೆ ಸಿದ್ದು-ಡಿಕೆ ಪಟ್ಟುಗಳು?