ಕಲೆ ಮತ್ತು ಸಂಸ್ಕ್ರತಿ ವಿಭಾಗದಲ್ಲಿ ಕಳೆದ25 ವರ್ಷಗಳಿಂದ ಸೇವೆ ಸಲ್ಲಿಸುತ್ತ ಬಂದಿರುವ ಶ್ರೀ ರಾಘವೇಂದ್ರ ಸಂಗೀತ ಸೇವಾ ಪ್ರತಿಷ್ಠಾನ ವತಿಯಿಂದ 25ನೇ ವರ್ಷದ ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತಿದೆ. ಬನಶಂಕರಿ ದೇವಗಿರಿ ವೇಕಟೇಶ್ವರ ದೇವಸ್ಥಾನದಲ್ಲಿ ಪ್ರತಿಷ್ಠಾನದ ರಜತ ಮಹೋತ್ಸವ ಮತ್ತು ಹರಿದಾಸವರೇಣ್ಯರಾದ ಪುರಂದರದಾಸರು, ಕನಕದಾಸರು ಹಾಗೂ ತ್ಯಾಗರಾಜರ ಆರಾಧನಾ ಪುಣ್ಯ ಮಹೋತ್ಸವ ನಡೆಸಲಾಯ್ತು.. ಕಾರ್ಯಕ್ರಮದಲ್ಲಿ ಗಾನ ಕಲಾಭೂಷಣ ವಿದ್ವಾನ್ ಡಾ.ಆರ್.ಕೆ.ಪದ್ಮನಾಭ ನಿವೃತ್ತ ವೇದಾಂತ ಪ್ರಾಧ್ಯಾಪಕ ವಿದ್ವಾನ್ ಜಿ.ಶಿವರಾಂ ಅಗ್ನಿಹೋತ್ರಿ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಯ್ತು, ದಿವಂಗತ ಪಿ.ಅನಂತ ಪದ್ಮನಾಭಾಚಾರ್ಯ ಅವರಿಗೆ ಮರಣೋತ್ತರ ವ್ಯಾಸ ಪ್ರಶಸ್ತಿ ಮತ್ತು ವಿದ್ವಾನ್ ಜಿ.ಶಿವರಾಂ ಅಗ್ನಿಹೋತ್ರಿ ಅವರಿಗೆ ಜೀವಮಾನ ವ್ಯಾಸ ಪ್ರಶಸ್ತಿ ಮತ್ತು ಸಂಗೀತ ವಿದ್ವಾನ್ ಅರ್ಚನಾ ಕುಲಕರ್ಣಿ ಅವರಿಗೆ ಗುರುರಾಘವೇಂದ್ರ ಸಂಸ್ಮರಣೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಇದೇ ವೇಳೆ ಎಲೆಕ್ಟ್ರಾನಿಕ್ಸ್ ಅಂಡ್ ಇನ್ಸ್ಟ್ರುಮೆಂಟೇಷನ್ ಎಂಜಿನಿಯರ್ ವಿ.ಎಸ್.ವೇದ ಅವರಿಗೆ ಪ್ರತಿಭಾ ಪುರಸ್ಕಾರ ಮತ್ತು ನಂಜನಗೂಡು ಶ್ರೀರಾಘವೇಂದ್ರಸ್ವಾಮಿಗಳ ಮಠದ ದೇವರಾತ ಜೋಷಿ ಅವರಿಗೆ ಧ್ರುವ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಕೋಲಾರದ ತಂಬಹಳ್ಳಿ ಮಾಧವತೀರ್ಥ ಮಠದ ವಿದ್ಯಾಸಾಗರ ಮಾಧವತೀರ್ಥ ಸ್ವಾಮೀಜಿ ಮತ್ತು ವಿದ್ಯಾವಲ್ಲಭ ಮಾಧವತೀರ್ಥ ಸ್ವಾಮೀಜಿ, ವಿದ್ವಾಂಸ ಎಸ್.ರಂಗನಾಥ್, ಶ್ರೀ ರಾಘವೇಂದ್ರ ಸಂಗೀತ ಸೇವಾ ಪ್ರತಿಷ್ಠಾನ ಅಧ್ಯಕ್ಷೆ ಬೆಳಗೆರೆ ಗೌರಿ ನಾಗರಾಜ್, ಕಾರ್ಯದರ್ಶಿ ನಾಗರಾಜ್, ಉಪಾಧ್ಯಕ್ಷೆ ವೀಣಾ ಸುರೇಶ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates Suvarna News Live: https://www.youtube.com/live/R50P2knCQBs?feature=shared