
ಮತ್ತೆ ಡಿಕೆ ಶಿವಕುಮಾರ್ರನ್ನ ಟಾರ್ಗೆಟ್ ಮಾಡಿತಾ ಸಿದ್ದು ಬಣ..? ಈ ಪ್ರಶ್ನೆ ಮೂಡಲು ಕೆಲ ಕಾರಣಗಳಿವೆ. ರಾಜ್ಯ ಕಾಂಗ್ರೆಸ್ನಲ್ಲಿ ನಡೆದ ಮಹತ್ವದ ಬೆಳವಣಿಗೆ ಈ ಪ್ರಶ್ನೆಗ ಉತ್ತರ ನೀಡುತ್ತಿದೆ
ಬೆಂಗಳೂರು(ಫೆ.13) ಕೆಪಿಸಿಸಿ ಅಧ್ಯಕ್ಷ ಹುದ್ದೆ, ಅಧಿಕಾರ ಹಂಚಿಕೆ ವಿಷಯದಲ್ಲೂ ಡಿಕೆ ಶಿವಕುಮಾರ್ ಬಣಕ್ಕೆ ಅಡ್ಡಿಯಾಗುತ್ತಿದೆಯಾ? ಇದೀಗ ಸಿದ್ದರಾಮಯ್ಯ ಬಣದ ನಾಯಕರು ಹೇಳಿಕೆಗಳು ಇದಕ್ಕೆ ಪುಷ್ಠಿ ನೀಡುತ್ತಿದೆ. ಸಿಎಂ ಸಿದ್ದರಾಮಯ್ಯ ದೀರ್ಘಾವದಿ ಸಿಎಂ ಅನ್ನೋ ಮಾತುಗಳು ಬಲವಾಗಿ ಕೇಳಿಬರುತ್ತಿದೆ. ಸಿದ್ದರಾಮಯ್ಯ 5 ವರ್ಷ ಪೂರೈಸಿದರೆ ದಾಖಲೆಯಾಗುತ್ತೆ ಎಂದು ಡಾ.ಜಿ ಪರಮೇಶ್ವರ್ ಹೇಳಿದ್ದಾರೆ. ಸಿದ್ದರಾಮಯ್ಯ 10 ವರ್ಷ ಸಿಎಂ ಆಗಿರ್ತಾರೆ ಎಂದು ಎಂ.ಬಿ ಪಾಟೀಲ್ ಹೇಳಿದ್ದಾರೆ. ಏನಿದು ಹೊಸ ರಣತಂತ್ರ?