'ಅವನ್ಯಾವನೋ ಸತ್ರೆ ನನಗೆ ಯಾಕ್ರೀ ಕೇಳ್ತೀರಾ'? ಸಂತೋಷ್ ಬಗ್ಗೆ ಈಶ್ವರಪ್ಪ ಸಿಡಿಮಿಡಿ

Nov 28, 2020, 1:42 PM IST

ಬೆಂಗಳೂರು (ನ. 28): ಮುಖ್ಯಮಂತ್ರಿ ಬಿಎಸ್‌ವೈ ಆಪ್ತ ಸಂತೋಷ್‌ ಆತ್ಮಹತ್ಯೆಗೆ ಯತ್ನಿಸಿರುವ ಬಗ್ಗೆ ಕೆ. ಎಸ್ ಈಶ್ವರಪ್ಪರವರನ್ನು ಪ್ರಶ್ನಿಸಿದಾಗ, 'ಅವನ್ಯಾವನೋ ಸತ್ತರೆ ನನ್ನನ್ಯಾಕೆ ಪ್ರಶ್ನಿಸುತ್ತೀರಿ? ರಾಜಕೀಯ ಒತ್ತಡದಿಂದ ಆತ್ಮಹತ್ಯೆ ಎನ್ನುತ್ತಿದ್ದಾರೆ. ರಾಜಕೀಯ ಕಾರಣವೋ, ಕೌಟುಂಬಿಕ ಕಾರಣವೋ ಎಂದು ಮನೆಯವರನ್ನೇ ಕೇಳಬೇಕು' ಎಂದು ಹೇಳಿದ್ದಾರೆ. 

ಸಂತೋಷ್ ಆತ್ಮಹತ್ಯೆ ಯತ್ನ: ಪ್ರಕರಣಕ್ಕೆ ಡಿಕೆಶಿ 'ರಹಸ್ಯ ವೀಡಿಯೋ' ಟ್ವಿಸ್ಟ್!

ರಾಮಯ್ಯ ಆಸ್ಪತ್ರೆ ವೈದ್ಯರು ಮಾತನಾಡಿ, ಸಂತೋಷ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಚಿಕಿತ್ಸೆ ಸ್ಪಂದಿಸುತ್ತಿದ್ದಾರೆ. ಭಯಪಡುವ ಅಗತ್ಯ ಇಲ್ಲ' ಎಂದು ಭರವಸೆ ನೀಡಿದ್ದಾರೆ.