ತಮ್ಮನ ಜೊತೆ ದೆಹಲಿ ದಂಡಯಾತ್ರೆ, ಖರ್ಗೆ-ಡಿಕೆಶಿ ಭೇಟಿ: ಬಂಡೆಗೆ ಸಿಕ್ಕ ಮೂರು ಆಯ್ಕೆಗಳೇನು?

ತಮ್ಮನ ಜೊತೆ ದೆಹಲಿ ದಂಡಯಾತ್ರೆ, ಖರ್ಗೆ-ಡಿಕೆಶಿ ಭೇಟಿ: ಬಂಡೆಗೆ ಸಿಕ್ಕ ಮೂರು ಆಯ್ಕೆಗಳೇನು?

Published : Nov 18, 2025, 06:48 PM IST
ನಾಯಕತ್ವ ಬದಲಾವಣೆ ಚರ್ಚೆಯ ನಡುವೆಯೇ ಡಿ.ಕೆ.ಶಿವಕುಮಾರ್, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರನ್ನು ಭೇಟಿಯಾಗಿದ್ದಾರೆ. ಈ ಭೇಟಿಯಲ್ಲಿ, ಸಿಎಂ ಹುದ್ದೆಗೆ ಸಂಬಂಧಿಸಿದಂತೆ ಖರ್ಗೆಯವರು ಡಿಕೆಶಿಗೆ ನೀಡಿರಬಹುದಾದ ಮೂರು ಸಂಭಾವ್ಯ ಆಯ್ಕೆಗಳ ಬಗ್ಗೆ ವಿಶ್ಲೇಷಿಸಲಾಗಿದೆ.

ನಾಯಕತ್ವ ಬದಲಾವಣೆ ಚರ್ಚೆಯೇ ಇಲ್ಲ ಅಂತಿದ್ದಾರೆ ಡಿ.ಕೆ.ಶಿವಕುಮಾರ್. ಹೀಗಿದ್ರೂ ಇದು ಸಹ ಡಿಕೆಶಿಯ ತೆರೆ ಹಿಂದಿನ ಆಟ ಅನ್ನೋ ಮಾತುಗಳು ಕೇಳಿ ಬರ್ತಿವೆ. ಈ ಮಧ್ಯೆ ಡಿ.ಕೆ.ಶಿವಕುಮಾರ್ ಹಾಗೂ ಡಿ.ಕೆ.ಸುರೇಶ್ ಇಬ್ಬರು ಒಂದಾಗಿ ಮಲ್ಲಿಕಾರ್ಜುನ ಖರ್ಗೆಯರವನ್ನ ಭೇಟಿಯಾಗಿದ್ದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಎಐಸಿಸಿ ಅಧ್ಯಕ್ಷರು, ಬಂಡೆ ಬ್ರದರ್ಸ್​ಗೆ ಏನೆಲ್ಲಾ ಸಂದೇಶಗಳನ್ನ ಕೊಟ್ಟಿರ್ಬೋದು ಅನ್ನೋ ವಿಚಾರವಾಗಿ ಒಂದಿಷ್ಟು ವಿಶ್ಲೇಷಣೆಗಳನ್ನ ಮಾಡಲಾಗ್ತಿದೆ. ಖರ್ಗೆ ಜೊತೆಗಿನ ಸಭೆಯಲ್ಲಿ ನಾಯಕತ್ವ ವಿಚಾರವಾಗಿ ಚರ್ಚೆಯಾಗಿದ್ದೇ ಆದಲ್ಲಿ ಮೂರು ಆಯ್ಕೆಗಳನ್ನ ಡಿಕೆ ಮುಂದಿಟ್ಟಿರಬಹುದು ಮಲ್ಲಿಕಾರ್ಜುನ ಖರ್ಗೆ. ಮೊದಲನೆಯಾದಾಗಿ, ಎರಡುವರೆ ವರ್ಷಕ್ಕೆ ಸಿದ್ದರಾಮಯ್ಯ ಅವರು ಡಿಕೆಗೆ ಸಿಂಹಾಸನ ಬಿಟ್ಟು ಕೊಡ್ಬೇಕು ಅಂತ ಒಪ್ಪಂದ ಆಗಿದ್ದೇ ಆದಲ್ಲಿ, ಆ ನಿಟ್ಟಿನಲ್ಲಿ ಮಲ್ಲಿಕಾರ್ಜುನ ಖರ್ಗೆಯವರಿಗೂ ಮನಸ್ಸಿದ್ದಲ್ಲಿ, ಡಿಕೆಗೆ ಸಿಂಹಾಸನ ಸಿಗುವ ಭರವಸೆಯನ್ನ ಕೊಟ್ಟಿ ಕಳುಹಿಸಿರಬಹುದು.. ಇಲ್ಲದೇ ಹೋದ್ರೆ, ತಾಳ್ಮೆಯಿಂದಿರಿ ಎನ್ನುವ ಸಂದೇಶವನ್ನೂ ತಲುಪಿಸಿರಬಹುದು. ಸಿದ್ದರಾಮಯ್ಯ ಅವರಿಗೆ ದೇವರಾಜ್ ಅರಸು ಅವರ ದಾಖಲೆ ಮುರಿಬೇಕು ಅನ್ನೋ ಆಸೆಯಿದೆ. ಹೋಗಾಗಿ ಅಲ್ಲಿಯ ತನಕ ತಾಳ್ಮೆಯಿಂದಿರಿ. ಅದಾದ ಮೇಲೆ ಬೇಕಾದ್ರೂ ಸಿಎಂ ಸಿಂಹಾಸನದ ಬಗ್ಗೆ ಮತ್ತೆ ಚರ್ಚೆ ಮಾಡೋಣ ಅನ್ನೋ ಭರವಸೆಯನ್ನೂ ಮಲ್ಲಿಕಾರ್ಜುನ ಖರ್ಗೆಯವರು ಡಿಕೆ ಕೊಟ್ಟಿರಬಹುದು.

16:54ಮೋದಿ ವಾರಸ್ದಾರ ಯಾರು? ಕೇಸರಿ ಕೋಟೆಯ ಉತ್ತರಾಧಿಕಾರಿ ರೇಸ್‌ನಲ್ಲಿ ಯೋಗಿ, ಅಮಿತ್ ಶಾ ನಡುವೆ ನಿಕಟ ಪೈಪೋಟಿ!
18:00ಹಸ್ತ ಪಾಳೆಯದಲ್ಲಿ ಸಿದ್ದು ಸೇನೆಯ 'ಸಿದ್ಧ'ತಂತ್ರ: ಡಿಕೆಶಿ ಪಟ್ಟಕ್ಕೆ ಜಾರಕಿಹೊಳಿ ಗಾಳ; 'ಬಂಡೆ' ಸುತ್ತ ಚಕ್ರವ್ಯೂಹ!
43:59Left Right & Centre: ದೇಶದಲ್ಲೀಗ ಮಾನ ಹರಾಜು ಪಾಲಿಟಿಕ್ಸ್ ಜೋರು! ನಿಜಕ್ಕೂ ಮರ್ಯಾದೆ ತೆಗೆದಿದ್ಯಾರು?
21:334 ತಿಂಗಳು, 16 ಲೆಟರ್​; ಸಿಎಂ ಯೋಗಿ ಆದಿತ್ಯನಾಥ್ ಪತ್ರ ತಂತ್ರ ರಹಸ್ಯ
18:02ಬತ್ತಳಿಕೆಯಿಂದ ಬ್ರಹ್ಮಾಸ್ತ್ರ ತೆಗೆದ ಸಿಎಂ ಸಿದ್ದರಾಮಯ್ಯ; ಟಗರು ಗುಮ್ಮಿದ್ದು ಯಾರಿಗೆ?
19:33ರಾಜಾಹುಲಿಯ ರಣಘರ್ಜನೆ, ಸೈಕಲ್ to ಸಿಂಹಾಸನ: ಮಾಜಿ ಸಿಎಂ ಯಡಿಯೂರಪ್ಪ 50 ವರ್ಷಗಳ ರೋಚಕ ಚರಿತ್ರೆ
21:15ಸಪ್ತಸಾಗರದಾಚೆ ಸಿದ್ದು ಬಣದ 'ಅಗೋಚರ ಆಟ': ಡಿಕೆಶಿ ದಂಡು ಕಟ್ಟುವ ಮೊದಲೇ ಸೈನ್ಯ ಜಮಾಯಿಸಿದ್ರಾ ಸಿಎಂ?
20:27ಕಾಂಗ್ರೆಸ್‌ನಲ್ಲಿ ನಿಯತ್ತಿನ ಯುದ್ಧ: ಡಿಕೆ ಯಾವಾಗ ಸಿಎಂ ಆಗ್ತಾರೆ? ಡಿಸಿಎಂ ಬಂಟರ ನೀಡಿದ ಮುಹೂರ್ತ ಏನು?
46:28ತಮಿಳುನಾಡು ಚುನಾವಣಾ ಕಣದಲ್ಲಿ ಬಿರುಗಾಳಿ: ವಿಜಯ್ ಸವಾಲು, ಬಿಜೆಪಿಗೆ ಅಣ್ಣಾಮಲೈ ಶಾಕ್
18:32ಸ್ವಾಮೀಜಿಯನ್ನ ಕಾಲನೇಮಿ ರಾಕ್ಷಸನಿಗೆ ಹೋಲಿಸಿದ್ರಾ ಯೋಗಿ? ಸಂತ Vs ಸನ್ಯಾಸಿ.. ತೆರೆಯ ಹಿಂದಿನ ರೋಚಕ ರಹಸ್ಯ!
Read more