ಬಿಜೆಪಿ ಪಾಳಯದಲ್ಲಿ ಕನಕಪುರದ ಬಂಡೆ ಡಿ.ಕೆ. ಮಾಡೆಲ್ ರಾಜಕಾರಣದ ಚರ್ಚೆ?

ಬಿಜೆಪಿ ಪಾಳಯದಲ್ಲಿ ಕನಕಪುರದ ಬಂಡೆ ಡಿ.ಕೆ. ಮಾಡೆಲ್ ರಾಜಕಾರಣದ ಚರ್ಚೆ?

Published : Dec 10, 2024, 12:02 PM ISTUpdated : Dec 10, 2024, 12:07 PM IST

ಕಮಲ ಪಾಳೆಯದಲ್ಲಿ ಡಿಕೆ ಮಾಡೆಲ್ ಪಾಲಿಟಿಕ್ಸ್ ಚರ್ಚೆಯಲ್ಲಿದೆ. ಭಿನ್ನಮತದ ಬೆಂಕಿಗೆ ಡಿಕೆ ಮಾದರಿಯೇ ಮದ್ದು ಎಂಬ ಚರ್ಚೆ ನಡೆಯುತ್ತಿದೆ. ಆದರೆ, ಬಿಜೆಪಿ ಆಂತರಿಕ ಭಿನ್ನಮತಕ್ಕೆ ಇದು ಪರಿಹಾರವಾಗುವುದೇ ಎಂಬ ಪ್ರಶ್ನೆ ಉದ್ಭವಿಸಿದೆ.

ಕಮಲ ಕಲಹದ ಅಖಾಡದಲ್ಲಿ 'ಡಿಕೆ ಮಾಡೆಲ್'ನದ್ದೇ ಸುದ್ದಿ. ಕಮಲ ಸೈನ್ಯದಲ್ಲಿ ಕೈ ಸೇನಾಪತಿ ಸದ್ದು ಮಾಡುತ್ತಿರುವುದರ ಗುಟ್ಟೇನು ಎಂಬುದು ಇಲ್ಲಿದೆ ನೋಡಿ. ಶತ್ರುವೇ ಮಿತ್ರ ಎಂಬ ಡಿಕೆ ಹೊಸ ತಂತ್ರವನ್ನು ನೋಡಿದ ಬಿಜೆಪಿ ಬೆರಗುಗಣ್ಣಿಂದ ನೋಡುತ್ತಿದೆ. 

ಹೌದು, ಬಿಜೆಪಿ ಪಾಳೆಯದಲ್ಲಿ ಚರ್ಚೆಯಾಗ್ತಿದ್ಯಂತೆ ಡಿಕೆ ಮಾಡೆಲ್ ಪಾಲಿಟಿಕ್ಸ್. ಕದಡಿದ ಕಮಲ ಕೋಟೆಗೆ ಬೇಕಿದ್ಯಂತೆ ಬಂಡೆ ಮಾದರಿ ರಾಜಕಾರಣ. ಡಿಸಿಎಂ ರಾಜಕೀಯ ಪಟ್ಟುಗಳಿಗೆ ಕೇಸರಿಕಲಿಗಳೇ ಕ್ಲೀನ್ ಬೌಲ್ಡ್ ಆಗಿದ್ದಾರೆ. ನಮ್ಗೆ ಬೇಕಿರೋದು ಇದೇ ರಾಜನೀತಿ, ಅದೇ ರಣತಂತ್ರ ಅಂದ್ರಂತೆ ಕಮಲವೀರರು. ಡಿಕೆ ಶಿವಕುಮಾರ್ ಅವ್ರ ರಾಜಕೀಯ ಪಟ್ಟುಗಳ ಬಗ್ಗೆ, ಅವ್ರ ರಾಜಕೀಯ ಚರಿತ್ರೆ ಬಗ್ಗೆ ದೊಡ್ಡ ಕಥೆಯೇ ಇದೆ. ಒಡೆದ ಮನೆಯಾಗಿರೋ ಬಿಜೆಪಿಯಲ್ಲೀಗ ಡಿಕೆ ರಾಜಕೀಯ ಪಟ್ಟು, ರಾಜಕೀಯ ತಂತ್ರಗಳ ಬಗ್ಗೆಯೇ ಮಾತು. ನಮ್ಗೆ ಬೇಕಿರೋದು ಡಿಕೆ ಮಾಡೆಲ್ ಪಾಲಿಟಿಕ್ಸ್ ಅಂತ ಬಿಜೆಪಿ ನಾಯಕರು ಮಾತಾಡಿಕೊಳ್ತಿದದಾರಂತೆ.

ಹಾಗಾದ್ರೆ ಡಿಕೆ ಮಾಡೆಲ್ ಪಾಲಿಟಿಕ್ಸನ್ನು ಬಿಜೆಪಿ ನಾಯಕರು ಅನುಸರಿಸಿದ್ರೆ, ಭಿನ್ನಮತದ ಬೆಂಕಿ ಆರುತ್ತಾ..? ನಾನಾ ನೀನಾ ಅಂತ ಪರಸ್ಪರ ತೊಡೆ ತಟ್ಟಿ ನಿಂತಿರೋ ಕೇಸರಿ ಕಲಿಗಳು ಇಂಥದ್ದಕ್ಕೆ ರೆಡಿ ಇದ್ದಾರಾ..? ಇಲ್ವೇ ಇಲ್ಲ ಅನ್ನೋದಕ್ಕೆ ಮತ್ತೊಂದು ಉದಾಹರಣೆ ಬೆಳಗಾವಿ ಅಧಿವೇಶನದಲ್ಲೇ ಸಿಕ್ಕಿ ಬಿಟ್ಟಿದೆ. ಡಿಕೆ ಮಾಡೆಲ್ ಪಾಲಿಟಿಕ್ಸ್ ಬಗ್ಗೆ ಬಿಜೆಪಿಯಲ್ಲಿ ಚರ್ಚೆಯಾಗ್ತಿರೋದು ನಿಜ.. ಬಿಜೆಪಿಯಲ್ಲಿ ಭಿನ್ನಮತದ ಬೆಂಕಿ ಹೊತ್ತಿಸಿರೋರು ಡಿಕೆ ಮಾಡೆಲನ್ನು ಅನುಸರಿಸಿದ್ರೆ, ಬೆಂಕಿ ಆರತ್ತೆ ಅಂತಿರೋದೂ ನಿಜ.. ಆದ್ರೆ ನಾನಾ ನೀನಾ ಅಂತ ತೊಡೆ ತಟ್ಟಿ ನಿಂತಿರೋರು ಮಾತ್ರ ಇದಕ್ಕೆಲ್ಲಾ ರೆಡಿ ಇಲ್ಲ. ಅವ್ರ ಮಧ್ಯೆ ಮತ್ತದೇ ಅಂತರ್ಯುದ್ಧ, ಕೋಲ್ಡ್ ವಾರ್.

21:17ಸಿದ್ದು ಸಮರವ್ಯೂಹ.. ಡಿಕೆ ಚತುರದಾಳ.. ಡಿನ್ನರ್ ದಂಗಲ್: ಒಂದು ಸಭೆ.. ಮೂರು ಸಂದೇಶ.. ಚಾಣಾಕ್ಷ ಬಂಡೆ!
18:13ಸಿದ್ದು ಸೇನೆಯಲ್ಲಿ ಬಿರುಕು: ಅಹಿಂದ ಅರಸೊತ್ತಿಗೆ, ಸಾಹುಕಾರ್​ಗೆ ಸಿಗುತ್ತಾ ಪ್ರಚಂಡ ಪವರ್?
19:47ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
20:50ಸಿಂಹಾಸನ ಸಂಗ್ರಾಮದಲ್ಲಿ ಡಿಕೆ ಶಿವಕುಮಾರ್ 'ಸ್ನೇಹವ್ಯೂಹ': ಸಿದ್ದು ಸಿಪಾಯಿಗಳನ್ನೇ ಸೆಳೆಯುವ ಬಂಡೆಯ ಹೊಸ ದಾಳ!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
19:26ನಾಟಿ ಕೋಳಿ ಊಟ ಹೊಟ್ಟೆಗೆ ಬೀಳ್ತಿದ್ದಂತೆ, ರಾಜಕೀಯ ಶಾಶ್ವತವಲ್ಲ ಎಂದ ಸಿದ್ದಣ್ಣ; ಆದ್ರೆ ಅಸಲಿಯತ್ತೇ ಬೇರೆ?
20:42ಕುರ್ಚಿ ಆಟದಲ್ಲಿ ಆಟಗಾರರೇ ಅಂಪೈರ್​ಗಳು; ಸಿದ್ದು ಆಟ, ಡಿಕೆ ಹಠ; ಹೈಕಮಾಂಡ್‌ಗೆ ಸಿಂಹಾಸನ ಸಂಕಟ!
23:14ಡಿ.ಕೆ.ಶಿವಕುಮಾರ್‌ಗೆ ಇದ್ಯಾ ರಾಜಯೋಗ? ನೇರಾನೇರ ಕುರ್ಚಿ ಕಾಳಗಕ್ಕೆ ಇಳಿದದ್ದು ಅದೇ ಕಾರಣಕ್ಕಾ?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
21:10ಮಹಾಕ್ರಾಂತಿ ಮಹಾ ಮುಹೂರ್ತ ಫಿಕ್ಸ್: ಪದತ್ಯಾಗನಾ? ಪಟ್ಟಾಭಿಷೇಕನಾ? ದೆಹಲಿಯಲ್ಲಿ ಕ್ಲೈಮ್ಯಾಕ್ಸ್..!
Read more