ಸಿಎಂ ಪಟ್ಟದ ಹಗ್ಗಜಗ್ಗಾಟ: ಸಿದ್ದು ಟೀಮ್ ವಿರುದ್ಧ ಡಿಕೆಶಿ ಒಂಟಿಯಾಗಿ ಸೈಲೆಂಟ್ ಗೇಮ್ ಆಡ್ತಿರೋದ್ಯಾಕೆ?

ಸಿಎಂ ಪಟ್ಟದ ಹಗ್ಗಜಗ್ಗಾಟ: ಸಿದ್ದು ಟೀಮ್ ವಿರುದ್ಧ ಡಿಕೆಶಿ ಒಂಟಿಯಾಗಿ ಸೈಲೆಂಟ್ ಗೇಮ್ ಆಡ್ತಿರೋದ್ಯಾಕೆ?

Published : Jan 12, 2025, 09:47 PM ISTUpdated : Jan 12, 2025, 09:49 PM IST

ಮುಖ್ಯಮಂತ್ರಿ ಪಟ್ಟಕ್ಕಾಗಿ ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಬೆಂಬಲಿಗರ ನಡುವೆ ಹಗ್ಗಜಗ್ಗಾಟ ನಡೆಯುತ್ತಿದೆ. ಡಿಕೆ ಶಿವಕುಮಾರ್ ಸೈಲೆಂಟ್ ಆಗಿ ಒಂಟಿ ಯುದ್ಧ ಶುರು ಮಾಡಿದ್ದಾರೆ. ಈ ಸೈಲೆಂಟ್ ಗೇಮ್ ಸಿಂಹಾಸನವೇರುವ ಗುರಿ ಮುಟ್ಟುತ್ತಾ ಎಂಬುದನ್ನು ಕಾದು ನೋಡಬೇಕಿದೆ.

ರಾಜ್ಯದಲ್ಲಿ ಮುಖ್ಯಮಂತ್ರಿ ಪಟ್ಟಕ್ಕಾಗಿ ಹಗ್ಗಜಗ್ಗಾಟ ಶುರುವಾಗಿದೆ. ಇದರಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ವಿದೇಶಕ್ಕೆ ಹೋಗಿ ಮರಳಿ ಬಂದ ನಂತರ ರಾಜ್ಯದಲ್ಲಿ ನಿಂತಲ್ಲಿ ನಿಲ್ಲದೇ ದೆಹಲಿ, ಟೆಂಪಲ್ ರನ್ ಹಾಗೂ ಮೀಟಿಂಗ್‌ಗಳನ್ನು ಮಾಡಲು ಮುಂದಾಗಿದ್ದಾರೆ. ಆದರೆ, ಇವರ ನಡೆಗೆ ವಿರುದ್ಧವಾಗಿ ಸಿದ್ದರಾಮಯ್ಯ ಅವರ ಬೆಂಬಲಿಗರು ಬಣವಾಗಿ ಒಗ್ಗಟ್ಟಿನ ಮೂಲಕ ಡಿನ್ನರ್ ಮೀಟಿಂಗ್ ಮಾಡಲು ಮುಂದಾಗಿದ್ದಾರೆ. ಆದರೆ, ಇದೆಲ್ಲವನ್ನು ನೋಡುತ್ತಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮಾತ್ರ ಒಬ್ಬಂಟಿಯಾಗಿದ್ದಾರೆ ಎಂಬ ದೃಶ್ಯ ಕಂಡುಬರುತ್ತಿದೆ. ಇದೆಲ್ಲದರ ನಡುವೆ ಡಿ.ಕೆ. ಶಿವಕುಮಾರ್ ಮುಂದಿನ ಮುಖ್ಯಮಂತ್ರಿ ಎಂಬ ಘೋಷನೆಯೂ ಮೊಳಗಿದೆ. ಆದರೂ, ಡಿ.ಕೆ. ಶಿವಕುಮಾರ್ ಮಾತ್ರ ಯಾವುದಕ್ಕೂ ತುಟಿ ಬಿಚ್ಚದೇ ಸುಮ್ಮನೇ ಎಲ್ಲವನ್ನೂ ನೋಡುತ್ತಿದ್ದಾರೆ.

ಆದರೆ, ಸಿಎಂ ಕುರ್ಚಿಯ ಯುದ್ಧದಲ್ಲಿ ಡಿಕೆ ಶಿವಕುಮಾರ್ ಏಕಾಂಗಿಯಂತೂ ಅಲ್ಲ. ಅವ್ರ ಹಿಂದೆಯೂ ಒಂದು ಸೈನ್ಯ ಇದೆ.. ಆದರೆ, ಸದ್ಯಕ್ಕೆ ಸೈಲೆಂಟ್ ಆಗಿರುವ ಶಿವಕುಮಾರ್ ಒಂಟಿಯುದ್ಧ ಶುರು ಮಾಡಿದ್ದಾರೆ. ಶಸ್ತ್ರ, ಅಸ್ತ್ರ, ದಂಡು, ಸೇನೆ ಎಲ್ಲಾ ಇದ್ರೂ ಡಿಕೆ ಸೈಲೆಂಟಾಗಿರೋದ್ಯಾಕೆ ಎಂಬ ಪ್ರಶ್ನೆ ಕಾಡುತ್ತದೆ. ಡಿಕೆ ಶಿವಕುಮಾರ್ ಅವರ ಈ ಸೈಲೆಂಟ್ ಗೇಮ್, ಆ ಒಂಟಿಯುದ್ಧ ಸಿಂಹಾಸನವೇರುವ ಗುರಿ ಮುಟ್ಟುತ್ತಾ ಎಂಬುದನ್ನು ಕಾದು ನೋಡಬೇಕಿದೆ. ಈಗ ಸಿದ್ದು ಸೇನೆಯ ಮಂತ್ರಿಗಳು ಕೆರಳಿಸಿದ್ರೂ ಡಿಕೆ ಕೆರಳುತ್ತಿಲ್ಲ. ಕೆಣಕಿದ್ರೂ ಕೌಂಟರ್ ಕೊಡ್ತಿಲ್ಲ.. ಡಿಕೆ ಶಿವಕುಮಾರ್ ಅವರ ಈ ಸೈಲೆಂಟ್ ಗೇಮ್ ಶುರು ಮಾಡಿದ್ದಾರೆ.

16:54ಮೋದಿ ವಾರಸ್ದಾರ ಯಾರು? ಕೇಸರಿ ಕೋಟೆಯ ಉತ್ತರಾಧಿಕಾರಿ ರೇಸ್‌ನಲ್ಲಿ ಯೋಗಿ, ಅಮಿತ್ ಶಾ ನಡುವೆ ನಿಕಟ ಪೈಪೋಟಿ!
18:00ಹಸ್ತ ಪಾಳೆಯದಲ್ಲಿ ಸಿದ್ದು ಸೇನೆಯ 'ಸಿದ್ಧ'ತಂತ್ರ: ಡಿಕೆಶಿ ಪಟ್ಟಕ್ಕೆ ಜಾರಕಿಹೊಳಿ ಗಾಳ; 'ಬಂಡೆ' ಸುತ್ತ ಚಕ್ರವ್ಯೂಹ!
43:59Left Right & Centre: ದೇಶದಲ್ಲೀಗ ಮಾನ ಹರಾಜು ಪಾಲಿಟಿಕ್ಸ್ ಜೋರು! ನಿಜಕ್ಕೂ ಮರ್ಯಾದೆ ತೆಗೆದಿದ್ಯಾರು?
21:334 ತಿಂಗಳು, 16 ಲೆಟರ್​; ಸಿಎಂ ಯೋಗಿ ಆದಿತ್ಯನಾಥ್ ಪತ್ರ ತಂತ್ರ ರಹಸ್ಯ
18:02ಬತ್ತಳಿಕೆಯಿಂದ ಬ್ರಹ್ಮಾಸ್ತ್ರ ತೆಗೆದ ಸಿಎಂ ಸಿದ್ದರಾಮಯ್ಯ; ಟಗರು ಗುಮ್ಮಿದ್ದು ಯಾರಿಗೆ?
19:33ರಾಜಾಹುಲಿಯ ರಣಘರ್ಜನೆ, ಸೈಕಲ್ to ಸಿಂಹಾಸನ: ಮಾಜಿ ಸಿಎಂ ಯಡಿಯೂರಪ್ಪ 50 ವರ್ಷಗಳ ರೋಚಕ ಚರಿತ್ರೆ
21:15ಸಪ್ತಸಾಗರದಾಚೆ ಸಿದ್ದು ಬಣದ 'ಅಗೋಚರ ಆಟ': ಡಿಕೆಶಿ ದಂಡು ಕಟ್ಟುವ ಮೊದಲೇ ಸೈನ್ಯ ಜಮಾಯಿಸಿದ್ರಾ ಸಿಎಂ?
20:27ಕಾಂಗ್ರೆಸ್‌ನಲ್ಲಿ ನಿಯತ್ತಿನ ಯುದ್ಧ: ಡಿಕೆ ಯಾವಾಗ ಸಿಎಂ ಆಗ್ತಾರೆ? ಡಿಸಿಎಂ ಬಂಟರ ನೀಡಿದ ಮುಹೂರ್ತ ಏನು?
46:28ತಮಿಳುನಾಡು ಚುನಾವಣಾ ಕಣದಲ್ಲಿ ಬಿರುಗಾಳಿ: ವಿಜಯ್ ಸವಾಲು, ಬಿಜೆಪಿಗೆ ಅಣ್ಣಾಮಲೈ ಶಾಕ್
18:32ಸ್ವಾಮೀಜಿಯನ್ನ ಕಾಲನೇಮಿ ರಾಕ್ಷಸನಿಗೆ ಹೋಲಿಸಿದ್ರಾ ಯೋಗಿ? ಸಂತ Vs ಸನ್ಯಾಸಿ.. ತೆರೆಯ ಹಿಂದಿನ ರೋಚಕ ರಹಸ್ಯ!
Read more