Jan 31, 2020, 7:53 PM IST
ಬೆಂಗಳೂರು(ಜ. 31) ಸಚಿವ ಸಂಪುಟ ವಿಸ್ತರಣೆ ಮತ್ತು ಕೆಪಿಸಿಸಿ ಅಧ್ಯಕ್ಷ ಗಾದಿ ಸಂಬಂಧ ಡಿಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಯಡಿಯೂರಪ್ಪನವರು ದ್ವೇಷದ ರಾಜಕಾರಣ ಮಾಡುತ್ತಿಲ್ಲ ಎಂದು ಹೇಳಿ ಈಗ ಏನು ಮಾಡುತ್ತಿದ್ದಾರೆ? ಶಾಸಕರಿಗೆ ನೀಡಿದ ಅನುದಾನ ಕಡಿತ ಮಾಡಿದ್ದು ಯಾಕೆ ಎಂದು ಪ್ರಶ್ನೆ ಮಾಡಿದ್ದಾರೆ.
ಸಂಪುಟಕ್ಕೆ ಹಸಿರು ನಿಶಾನೆ, ಯಾರು ಇನ್? ಯಾರು ಔಟ್?
ಅಂದು ಬಸವಣ್ಣನ ತತ್ವ ಹೇಳಿದವರು ಇಂದು ಯಾಕೆ ಹೀಗೆ ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದ್ದಾರೆ. ನಾವು ಎಲ್ಲಿ ಮಾತನಾಡಬೇಕು ಅಲ್ಲಿ ಮಾತನಾಡುತ್ತೇವೆ. ಸಚಿವ ಸ್ಥಾನ ಆಸೆ ಪಟ್ಟವರಿಗೆ ಒಳ್ಳೆಯದಾಗಲಿ ಎಂದು ಹಾರೈಸಿದ್ದಾರೆ.