ಬಿಎಸ್‌ವೈ- ಅಮಿತ್ ಶಾ ಭೇಟಿ, ಸಚಿವ ಸಂಪುಟ ವಿಸ್ತರಣೆಗೆ ಗ್ರೀನ್ ಸಿಗ್ನಲ್?

Jan 31, 2020, 5:22 PM IST

ನವದೆಹಲಿ(ಜ. 31) ಸಚಿವ ಸಂಪುಟ ವಿಸ್ತರಣೆಗೆ ಗ್ರೀನ್ ಸಿಗ್ನಲ್ ಪಡೆದುಕೊಳ್ಳಲು ನವದೆಹಲಿಯಲ್ಲಿ ಸಿಎಂ ಯಡಿಯೂರಪ್ಪ ಹರಸಾಹಸ ಮಾಡುತ್ತಿದ್ದಾರೆ. ಅನರ್ಹ ಪಟ್ಟ ಮೀರಿ ಗೆದ್ದ 11 ಶಾಸಕರಿಗೂ ಸಚಿವ ಸ್ಥಾನ ಪಕ್ಕಾ ಎಂಬ ಮಾತುಗಳು ಕೇಳಿ ಬರುತ್ತಿವೆ.

ಆಗದ ವಿಸ್ತರಣೆ: ರಹಸ್ಯ ಸ್ಥಳಕ್ಕೆ ತೆರಳಿದ ನೂತನ ಶಾಸಕರು; ಗುಂಪಿನಲ್ಲಿ ಯಾರ್ಯಾರು?

ಉಪಚುನಾವಣೆಯಲ್ಲಿ ಗೆದ್ದಿರುವವರನ್ನು ಮಂತ್ರಿ ಮಾಡಲು ಒಂದು ಅವಕಾಶ ಮಾಡಿಕೊಡಿ ಎಂದು ಸಿಎಂ ಯಡಿಯೂರಪ್ಪ ಶತ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಅಮಿತ್ ಶಾ ಬಿಎಸ್‌ ವೈ ಕೈಗೆ ಸಿಗುತ್ತಿಲ್ಲ. ಹಾಗಾದರೆ ಮುಂದೇನು?