ಕರ್ನಾಟಕ ಉಪಚುನಾವಣೆ: ಕೊನೆಯ 10 ದಿನಗಳ ರೋಚಕ ಕದನ

ಕರ್ನಾಟಕ ಉಪಚುನಾವಣೆ: ಕೊನೆಯ 10 ದಿನಗಳ ರೋಚಕ ಕದನ

Published : Nov 04, 2024, 06:19 PM IST

ಕರ್ನಾಟಕ ಉಪಚುನಾವಣೆಯ ಕೊನೆಯ 10 ದಿನಗಳಲ್ಲಿ ಚನ್ನಪಟ್ಟಣ, ಸಂಡೂರು ಮತ್ತು ಶಿಗ್ಗಾಂವಿಯಲ್ಲಿ ತೀವ್ರ ಪ್ರಚಾರ ನಡೆಯಲಿದೆ. ಈ ಮೂರು ಕ್ಷೇತ್ರಗಳಲ್ಲಿ ಗೆಲುವು ಯಾರಿಗೆ ಎಂಬುದು ಮುಂದಿನ ಹತ್ತು ದಿನಗಳಲ್ಲಿ ನಿರ್ಧಾರವಾಗಲಿದೆ.

ಇಷ್ಟು ದಿನದ್ದು ಒಂದು ಲೆಕ್ಕ.., ಇನ್ಮೇಲೆ ಶುರುವಾಗೋದು ಬೇರೇನೆ ಲೆಕ್ಕ.. ಇನ್ನುಳಿದ 10 ದಿನದಲ್ಲಿ ಗೊತ್ತಾಗುತ್ತೆ ಯಾರಿಗೆ ಗೆಲುವು ಅಂತ. ಉಪಕದನಕ್ಕೆ ಈ ದಶದಿನದಲ್ಲಿ ಎಂಟ್ರಿ ಕೊಟ್ಟು ಆರ್ಭಟಿಸಲಿದ್ದಾರೆ ಹುರಿಯಾಳುಗಳು.. ಇಷ್ಟು ದಿನ ನಡೆದ ಹೋರಾಟ.. ಹಾರಾಟ ಏನೇನು ಅಲ್ಲಾ.. ಇನ್ಮುಂದೆ ಮೂರು ಕ್ಷೇತ್ರಗಳಲ್ಲೂ ಆರಂಭವಾಗುತ್ತೆ ನೋಡಿ ನಿಜವಾದ ಕದನ ಕಾದಾಟ. ಪ್ರಚಾರಕ್ಕೆ ಘಟಾನುಘಟಿಗಳ ಎಂಟ್ರಿಯಾಗಲಿದೆ. ಚುನಾವಣಾ ಚಿತ್ರಣ ಇನ್ಮೇಲೆ ಬದಲಾಗುತ್ತೆ.

ಇದು ಚನ್ನಪಟ್ಟಣ ಕಥೆಯಾದ್ರೆ, ಸಂಡೂರು ಸಂಗ್ರಾಮದಲ್ಲಿಯೂ ರಣಕಲಿಗಳ ಆಟ ಆರಂಭವಾಗಲಿದೆ. ಕಡೆ 10 ದಿನದಲ್ಲಿ ಅಲ್ಲಿಯೂ ಹೋರಾಟ, ಹಾರಾಟಗಳೂ ಹೆಚ್ಚಾಗೋ ಸೂಚನೆ ಸಿಕ್ಕಾಗಿದೆ. ಈ ಬಗ್ಗೆ ಡೀಟೈಲ್ ಆಗಿ ತೋರಿಸ್ತೀವಿ. ಹತ್ತು ದಿನ.. ಉಪಚನಾವಣೆ ಮತದಾನಕ್ಕೆ ಉಳಿದಿರುವ ಇನ್ನು ಹತ್ತು ದಿನ, ಸಂಡೂರಿನಲ್ಲಿ ಪ್ರಚಾರದ ಸುನಾಮಿಯೇ ಏಳಲಿದೆ. ಹತ್ತು ದಿನ ಕಡೇ ಆಟದಲ್ಲಿ ಗೆಲುವು – ಸೋಲಿನ ನಿರ್ಧಾರ ಅಡಗಿದೆ. ಹೀಗಾಗಿ ಅತ್ತ ಕೈ ಪಡೆ.. ಇತ್ತ ಮೈತ್ರಿ ಕೂಟ, ಇಬ್ಬರೂ  ಪ್ರಚಾರವನ್ನ ಮತ್ತಷ್ಟು ಮಗದಷ್ಟು ಬಿರುಸುಗೊಳಿಸ್ತಾಯಿದ್ದಾರೆ.

ಚನ್ನಪಟ್ಟಣ, ಸಂಡೂರಿನಂತೆ ಶಿಗ್ಗಾಂವಿಯೂ ಕಡೇ 10 ದಿನದ ರಾಜಕೀಯ ಆಟಕ್ಕೆ ಸಾಕ್ಷಿಯಾಗಲಿದೆ. ಶಿಗ್ಗಾಂವಿ ರಣಕಣ ಇನ್ಮುಂದೆ ಯಾವ ರೀತಿ ರೋಚಕವಾಗುತ್ತೆ ಅಂತ ಹೇಳ್ತೀವಿ. ಕಡೇ ಹತ್ತು ದಿನದ ಆಟಕ್ಕೆ ಶಿಗ್ಗಾಂವಿ ರಣಕಣ ಸಜ್ಜಾಗಿದೆ. ಗೆಲುವೇ ಗುರಿ ಅಂತ ಎರಡು ಕಡೆಯವರು ಕನವರಿಸ್ತಾಯಿದ್ದಾರೆ. ಆದ್ರೆ, ಇನ್ನುಳಿದ ದಶ ದಿನ ಆ ಗೆಲುವು ಯಾರಿಗೆ ಅಂತ ತಿರ್ಮಾನ ಮಾಡುತ್ತೆ. ಯಾರಿಗೆ ಕೊರಳಿಗೆ ವಿಜಯ ಲಕ್ಷ್ಮೀ ಅನ್ನೋದು ಇನ್ನುಳಿದ 10 ದಿನದಲ್ಲಿ ಡಿಸೈಡ್ ಆಗುತ್ತೆ. ಯಾಕೆಂದ್ರೆ ನಿಜವಾದ ಕಾದಾಟ, ಕಾಳಗ ಇನ್ಮೇಲೆ ನಡೆಯುತ್ತೆ.

16:54ಮೋದಿ ವಾರಸ್ದಾರ ಯಾರು? ಕೇಸರಿ ಕೋಟೆಯ ಉತ್ತರಾಧಿಕಾರಿ ರೇಸ್‌ನಲ್ಲಿ ಯೋಗಿ, ಅಮಿತ್ ಶಾ ನಡುವೆ ನಿಕಟ ಪೈಪೋಟಿ!
18:00ಹಸ್ತ ಪಾಳೆಯದಲ್ಲಿ ಸಿದ್ದು ಸೇನೆಯ 'ಸಿದ್ಧ'ತಂತ್ರ: ಡಿಕೆಶಿ ಪಟ್ಟಕ್ಕೆ ಜಾರಕಿಹೊಳಿ ಗಾಳ; 'ಬಂಡೆ' ಸುತ್ತ ಚಕ್ರವ್ಯೂಹ!
43:59Left Right & Centre: ದೇಶದಲ್ಲೀಗ ಮಾನ ಹರಾಜು ಪಾಲಿಟಿಕ್ಸ್ ಜೋರು! ನಿಜಕ್ಕೂ ಮರ್ಯಾದೆ ತೆಗೆದಿದ್ಯಾರು?
21:334 ತಿಂಗಳು, 16 ಲೆಟರ್​; ಸಿಎಂ ಯೋಗಿ ಆದಿತ್ಯನಾಥ್ ಪತ್ರ ತಂತ್ರ ರಹಸ್ಯ
18:02ಬತ್ತಳಿಕೆಯಿಂದ ಬ್ರಹ್ಮಾಸ್ತ್ರ ತೆಗೆದ ಸಿಎಂ ಸಿದ್ದರಾಮಯ್ಯ; ಟಗರು ಗುಮ್ಮಿದ್ದು ಯಾರಿಗೆ?
19:33ರಾಜಾಹುಲಿಯ ರಣಘರ್ಜನೆ, ಸೈಕಲ್ to ಸಿಂಹಾಸನ: ಮಾಜಿ ಸಿಎಂ ಯಡಿಯೂರಪ್ಪ 50 ವರ್ಷಗಳ ರೋಚಕ ಚರಿತ್ರೆ
21:15ಸಪ್ತಸಾಗರದಾಚೆ ಸಿದ್ದು ಬಣದ 'ಅಗೋಚರ ಆಟ': ಡಿಕೆಶಿ ದಂಡು ಕಟ್ಟುವ ಮೊದಲೇ ಸೈನ್ಯ ಜಮಾಯಿಸಿದ್ರಾ ಸಿಎಂ?
20:27ಕಾಂಗ್ರೆಸ್‌ನಲ್ಲಿ ನಿಯತ್ತಿನ ಯುದ್ಧ: ಡಿಕೆ ಯಾವಾಗ ಸಿಎಂ ಆಗ್ತಾರೆ? ಡಿಸಿಎಂ ಬಂಟರ ನೀಡಿದ ಮುಹೂರ್ತ ಏನು?
46:28ತಮಿಳುನಾಡು ಚುನಾವಣಾ ಕಣದಲ್ಲಿ ಬಿರುಗಾಳಿ: ವಿಜಯ್ ಸವಾಲು, ಬಿಜೆಪಿಗೆ ಅಣ್ಣಾಮಲೈ ಶಾಕ್
18:32ಸ್ವಾಮೀಜಿಯನ್ನ ಕಾಲನೇಮಿ ರಾಕ್ಷಸನಿಗೆ ಹೋಲಿಸಿದ್ರಾ ಯೋಗಿ? ಸಂತ Vs ಸನ್ಯಾಸಿ.. ತೆರೆಯ ಹಿಂದಿನ ರೋಚಕ ರಹಸ್ಯ!