ನಾಯಕತ್ವ ಬದಲಾವಣೆ: ಬಿಜೆಪಿ ಪಾಳದಲ್ಲಿ ಬಿರುಸಿನ ಚಟುವಟಿಕೆ

Jun 15, 2021, 4:28 PM IST

ಬೆಂಗಳೂರು, (ಜೂನ್.15): ರಾಜ್ಯದಲ್ಲಿ ನಾಯಕತ್ವ ಕೂಗು ಕೇಳಿಬಂದ ಬೆನ್ನಲ್ಲೇ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಜೂನ್ 16 ರಂದು ಕರ್ನಾಟಕಕ್ಕೆ ಆಗಮಿಸಲಿದ್ದಾರೆ. 

17 ಶಾಸಕರು ಬಂದ ಮೇಲೆ ಗೊಂದಲಗಳಾಗಿದ್ದು ನಿಜ ಎಂದ ಮೂಲ ಬಿಜೆಪಿ ನಾಯಕ

ಮೂರು ದಿನಗಳ ರಾಜ್ಯ ಪ್ರವಾಸದಲ್ಲಿರುವ ಅರುಣ್ ಸಿಂಗ್ ಅವರು ನಾಯಕತ್ವ ಗೊಂದಲಗಳ ಬಗ್ಗೆ ಸಚಿವರು, ಶಾಸಕರ ಜತೆ ಸುದೀರ್ಘ ಚರ್ಚೆ ಮಾಡಲಿದ್ದಾರೆ. ಇದರಿಂದ ರಾಜ್ಯ ಬಿಜೆಪಿಯಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ.  ಏನೆಲ್ಲಾ ರಾಜಕೀಯ ವಿದ್ಯಮಾನಗಳ ನಡೆಯಬಹುದು ಅನ್ನೋ ಕುತೂಹಲ ಸೃಷ್ಟಿಯಾಗಿದೆ.