ಬಿಜೆಪಿ ಸರ್ಕಾರದಿಂದ ಡಿಕೆಶಿ ವಿರುದ್ಧ ಹೊಸ ತನಿಖಾಸ್ತ್ರ: ಕನಕಪುರ ಬಂಡೆಗೆ ಮತ್ತೆ ಕಂಟಕ?

Aug 19, 2022, 10:13 AM IST

ಬೆಂಗಳೂರು(ಆ.19):  ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ಆಡಳಿತರೂಢ ಬಿಜೆಪಿ ಸರ್ಕಾರ ಬ್ರಹ್ಮಾಸ್ತ್ರವೊಂದನ್ನ ಸಿದ್ಧಪಡಿಸಿದೆ ಅಂತ ಹೇಳಲಾಗುತ್ತಿದೆ. ಡಿಕೆಶಿ ವಿರುದ್ಧ ತನಿಖೆಯೊಂದಕ್ಕೆ ಸರ್ಕಾರ ಚಾಲನೆ ನೀಡಿದೆ. ಡಿ.ಕೆ. ಶಿವಕುಮಾರ್ ವಿರುದ್ಧ ತನಿಖಾಸ್ತ್ರವನ್ನ ಬಳಸಲು ಬಿಜೆಪಿ ಸರ್ಕಾರ ಸಿದ್ಧತೆ ನಡೆಸಿದೆ. ಚುನಾವಣೆ ಹೊಸ್ತಿಲಲ್ಲಿ ಡಿಕೆಶಿಯನ್ನ ಕಟ್ಟಿಹಾಕಲು ಬಿಜೆಪಿ ಸರ್ಕಾರ ಪ್ಲಾನ್‌ ಮಾಡಿದೆ. ವಿದ್ಯುತ್‌ ಖರೀದಿ ಪ್ರಕ್ರಿಯೆ ವಿರುದ್ಧ ತನಿಖೆಗೆ ಮುಂದಾಗಿದೆ ರಾಜ್ಯ ಸರ್ಕಾರ. ಡಿಕೆಶಿ ಕಾಲಾವಧಿಯ ವಿದ್ಯುತ್‌ ಖರೀದಿ ಪ್ರಕ್ರಿಯೆಗಳ ಬಗ್ಗೆ ತನಿಖೆ ನಡೆಸಲು ಸಿದ್ಧತೆ ಸಚಿವ ಸುನಿಲ್‌ ಕುಮಾರ್‌ ಮಂದಾಗಿದ್ದಾರೆ. 

ಸುಮಲತಾ ಬಿಜೆಪಿ ಸೇರೋದು ಪಕ್ಕಾ?: ತೆರೆಮರೆಯಲ್ಲಿ ನಡೀತಿದೆ ಕಮಲ ಪಾಳಯ ಸೇರೋ ಪ್ಲಾನ್..!