ರಾಜ್ಯ ವಿಧಾನಸಭಾ ಚುನಾವಣೆಯ ಕಾವು ಜೋರಾಗಿದ್ದು, ಈಗಾಗಲೇ ಮೂರು ಪಕ್ಷಗಳು ತಯಾರಿ ನಡೆಸಿವೆ. ವಿಜಯನಗರ ಕುರುಕ್ಷೇತ್ರದಲ್ಲಿ ಜಿಲ್ಲೆಯಲ್ಲಿ ಮೂರು ಪಕ್ಷಗಳಲ್ಲಿಯೂ ಟಿಕೆಟ್ ಫೈಟ್ ಶುರುವಾಗಿದೆ.
ವಿಜಯನಗರದಲ್ಲಿ ಕೈ ಕಮಲ ಮಧ್ಯೆ ಪೈಪೊಟಿ ನಡೆದಿದ್ದು, ಆನಂದ್ ಸಿಂಗ್ ವಿರುದ್ಧ ಕೈ ಅಭ್ಯರ್ಥಿ ಯಾರು ಎಂಬುದು ಫೈನಲ್ ಆಗಿಲ್ಲ. ಹಗರಿಬೊಮ್ಮನಹಳ್ಳಿಯಲ್ಲಿ ಗೆಲುವಿಗಾಗಿ ಭೀಮಾ ನಾಯ್ಕ ಹಾಗೂ ನೇಮ್ ರಾಜ್ ಮಧ್ಯೆ ಫೈಟ್ ಏರ್ಪಟ್ಟಿದೆ. ಹೂವಿನಹಡಗಲಿಯಲ್ಲಿ ಬಿಜೆಪಿಯಲ್ಲಿ ಟಿಕೆಟ್ ಲಾಬಿ ನಡೆದಿದೆ. ಕೊಡ್ಲಗಿಯಲ್ಲಿ ಕೈ ಹಾಗೂ ಕಮಲ ಎರಡರ ನಡುವೆ ಜಿದ್ದಾಜಿದ್ದಿ ಏರ್ಪಟ್ಟಿದೆ. ಹರಪ್ಪನಹಳ್ಳಿಯಲ್ಲಿ ಕರುಣಾಕರ್ ರೆಡ್ಡಿಗೆ ಎದುರಾಳಿ ಯಾರು ಎಂಬುದು ಫೈನಲ್ ಆಗಿಲ್ಲ. ವಿಜಯನಗರದಲ್ಲಿ ಗಣಿ ದುಡ್ಡಿನದ್ದೇ ದರ್ಬಾರ ಇದೆ.