ಕಲ್ಯಾಣ ಕರ್ನಾಟಕಕ್ಕೆ ನರೇಂದ್ರ ಮೋದಿ ಭೇಟಿ: ತವರಲ್ಲೇ ಖರ್ಗೆಯನ್ನು ಕಟ್ಟಿ ಹಾಕಲು ಬಿಜೆಪಿ ಪ್ಲಾನ್‌

Jan 11, 2023, 11:26 AM IST

ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಬಳಿಕ ರಾಜ್ಯದಲ್ಲಿ ಇದೀಗ ಪ್ರಧಾನಿ ನರೇಂದ್ರ ಮೋದಿ ಮೇನಿಯಾ ಶುರುವಾಗಲಿದೆ. ಈ ಬಾರಿ ಕಲ್ಯಾಣ ಕರ್ನಾಟಕದತ್ತ ಬಿಜೆಪಿಯ ಚಿತ್ತವಿದ್ದು, 40 ಕ್ಷೇತ್ರಗಳಲ್ಲಿ 25 ಕ್ಷೇತ್ರ ಗೆಲ್ಲಲೂ ಬಿಜೆಪಿ ತಂತ್ರ ರೂಪಿಸಿದೆ. ತವರಲ್ಲೇ ಖರ್ಗೆಯನ್ನು ಕಟ್ಟಿ ಹಾಕಲು ಬಿಜೆಪಿ ಪ್ಲಾನ್‌ ಮಾಡಿದೆ. ಇದೇ 19ರಂದು ನರೆಂದ್ರ ಮೋದಿ ರಾಜ್ಯಕ್ಕೆ ಭೇಟಿ ನೀಡಲಿದ್ದು, ಕಲ್ಯಾಣ ಕರ್ನಾಟಕದ ಮೇಲೆ ಗಮನ ಹರಿಸಲಿದ್ದಾರೆ.