Karnataka Assembly Polls: 1994ರ ಇತಿಹಾಸ ಮರುಕಳಿಸಲಿದೆ, ಜೆಡಿಎಸ್‌ ಮತ್ತೆ ಅಧಿಕಾರಕ್ಕೆ: ಎಚ್‌ಡಿಕೆ

Nov 23, 2022, 3:58 PM IST

ಬೆಂಗಳೂರು (ನ. 23): 2023ರ ವಿಧಾನಬೆ ಚುನವಾಣೆಗೆ ರಾಜಕೀಯ ಪಕ್ಷಗಳು ಭರ್ಜರಿ ತಯಾರಿ ನಡೆಸಿವೆ. ಪಂಚರತ್ನ ಯಾತ್ರೆ ಮೂಲಕ ಜೆಡಿಎಸ್‌ ಕರ್ನಾಟಕ ಕುರುಕ್ಷೇತ್ರಕ್ಕೆ ರಣಕಹಳೆ ಮೊಳಗಿಸಿದೆ. ಮಾಜಿ ಸಿಎಂ ಕುಮಾರಸ್ವಾಮಿ ರಾಜ್ಯಾದ್ಯಂತ ಪ್ರವಾಸ ಮಾಡಿ ಪಕ್ಷ ಸಂಘಟನೆ ಕೆಲಸ ಮಾಡುತ್ತಿದ್ದಾರೆ. 2023r ಮತ್ತೆ ಅಧಿಕಾರಕ್ಕೆ ಬರುವ ವಿಶ್ವಾಸವನ್ನು ಕುಮಾರಸ್ವಾಮಿ ವ್ಯಕ್ತಪಡಿಸಿದ್ದಾರೆ. ಈ ರೀತಿ ಜನರ ನಾಡಿ ಮಿಡಿತ ನಾನು ಎಂದು ಕಂಡಿರಲಿಲ್ಲ ಎಂದಿರುವ ದಳಪತಿ ಎಚ್‌ಡಿ ಕುಮಾರಸ್ವಾಮಿ "1994 ಇತಿಹಾಸ ಮರುಳಿಸುತ್ತೆ ಎಂದಿದ್ದಾರೆ. ನಮ್ಮ ಪಕ್ಷದಲ್ಲಿ ಯಾರು ಬೇಕಾದರೂ ಸಿಎಂ ಆಗುವ ಅವಕಾಶವಿದೆ. ಜೆಡಿಎಸ್‌ ಪಕ್ಷದಿಂದ ಯಾರೂ ಬೇಕಾದರೂ ಸಿಎಂ ಆಗಬಹುದು" ಎಂದು ಹೇಳಿದ್ದಾರೆ. 

ಪಂಚರತ್ನ ಯಾತ್ರೆ: ಜೆಡಿಎಸ್‌ ಗೆದ್ರೆ ಮುಸ್ಲಿಂ ಸಿಎಂ, ಮಹಿಳೆಗೆ ಡಿಸಿಎಂ, ಕುಮಾರಸ್ವಾಮಿ