ಕುರುಕ್ಷೇತ್ರದ ಕೊನೇ ಕ್ಷಣದಲ್ಲಿ ಅಪ್ಪ-ಮಗನ ಆಟ, ಅಖಾಡಕ್ಕೆ ಬಿಎಸ್’ವೈ-ವಿಜಯೇಂದ್ರ..!

ಕುರುಕ್ಷೇತ್ರದ ಕೊನೇ ಕ್ಷಣದಲ್ಲಿ ಅಪ್ಪ-ಮಗನ ಆಟ, ಅಖಾಡಕ್ಕೆ ಬಿಎಸ್’ವೈ-ವಿಜಯೇಂದ್ರ..!

Published : May 06, 2023, 10:33 AM IST

ಕರ್ನಾಟಕ ಕುರುಕ್ಷೇತ್ರದಲ್ಲಿ ಅಪ್ಪ-ಮಗನ ಜೋಡಿ ಅಂತ ಯಾರಾದರು ಇದ್ದರೆ ಅದು ಶಿಕಾರಿವೀರ ಯಡಿಯೂರಪ್ಪ ಮತ್ತವರ ಮಗ ವಿಜಯೇಂದ್ರ.  ಗುಡುಗು-ಮಿಂಚಿನ ಜೋಡಿ ರಣಭೂಮಿಯ ರಣಯುದ್ಧದಲ್ಲಿ ಏಕಕಾಲದಲ್ಲಿ ಧೂಳೆಬ್ಬಿಸುತ್ತಾ ಇದೆ. ಚುನಾವಣೆಗೆ ಬೆರಳೆಣಿಕೆಯ ದಿನಗಳಷ್ಟೇ ಬಾಕಿ. ಹೀಗಾಗಿ ರಣಕಲಿಗಳು ಕೊನೇ ಕ್ಷಣದಲ್ಲಿ ರೋಚಕ ದಾಳಗಳನ್ನು ಉರುಳಿಸ್ತಾ ಇದ್ದಾರೆ.

ಪ್ರಧಾನಿ ಮೋದಿಯ ಬಹುಮತದ ಸರ್ಕಾರ ಕನಸನ್ನು ನನಸು ಮಾಡಲು ಅಪ್ಪ-ಮಗನನ್ನು ಕೇಸರಿ ಪಡೆ ನಿರ್ಣಾಯಕ ಯುದ್ಧಕ್ಕೆ ಇಳಿಸಿ ಬಿಟ್ಟಿದೆ. ಗುರುವಾರದಿಂದ ಯಡಿಯೂರಪ್ಪ ಮತ್ತು ವಿಜಯೇಂದ್ರ ಪ್ರತ್ಯೇಕ ದಂಡಯಾತ್ರೆ ಶುರು ಮಾಡಿದ್ದಾರೆ. ಅಪ್ಪ-ಮಗನ ಟಾರ್ಗೆಟ್  30 ಕ್ಷೇತ್ರಗಳು. ಅದರಲ್ಲು ರಾಜಾಹುಲಿ ಬಿಎಸ್‌ವೈ ಕಮಲ ಪತಾಕೆ ಹಾರಿಸಲು ನೇರವಾಗಿ ನುಗ್ಗಿರುವುದು ಜೆಡಿಎಸ್ ಭದ್ರಕೋಟೆಗೆ.  ಈ ಬಾರಿ ಜೆಡಿಎಸ್ ಭದ್ರಕೋಟೆಯನ್ನು ಛಿದ್ರ ಮಾಡಿ ಹೊಸ ಚರಿತ್ರೆ ನಿರ್ಮಿಸಲು ಬಿಜೆಪಿ ಮುಂದಾಗಿದೆ. ಅದಕ್ಕಾಗಿ ಮಾಜಿ ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ ಮುಂಚೂಣಿಗೆ ಬಿಟ್ಟು, ಕೊನೇ ಕ್ಷಣದ ಆಟ ಶುರು ಮಾಡಿದೆ. ದಳಪತಿಗಳ ಕೋಟೆಗೆ ನುಗ್ಗಿರುವ ಬಿಎಸ್‌ವೈ, ಭರ್ಜರಿ ಪ್ರಚಾರ ನಡೆಸಿದ್ದಾರೆ.ಅಷ್ಟಕ್ಕೂ ಅಪ್ಪ-ಮಗನ ಶಿಕಾರಿವ್ಯೂಹದೊಳಗೆ ಅಡಗಿರೋದು ಅದೆಂಥಾ ರಹಸ್ಯ..? ಇಲ್ಲಿದೆ ನೋಡಿ 
 

18:13ಸಿದ್ದು ಸೇನೆಯಲ್ಲಿ ಬಿರುಕು: ಅಹಿಂದ ಅರಸೊತ್ತಿಗೆ, ಸಾಹುಕಾರ್​ಗೆ ಸಿಗುತ್ತಾ ಪ್ರಚಂಡ ಪವರ್?
19:47ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
20:50ಸಿಂಹಾಸನ ಸಂಗ್ರಾಮದಲ್ಲಿ ಡಿಕೆ ಶಿವಕುಮಾರ್ 'ಸ್ನೇಹವ್ಯೂಹ': ಸಿದ್ದು ಸಿಪಾಯಿಗಳನ್ನೇ ಸೆಳೆಯುವ ಬಂಡೆಯ ಹೊಸ ದಾಳ!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
19:26ನಾಟಿ ಕೋಳಿ ಊಟ ಹೊಟ್ಟೆಗೆ ಬೀಳ್ತಿದ್ದಂತೆ, ರಾಜಕೀಯ ಶಾಶ್ವತವಲ್ಲ ಎಂದ ಸಿದ್ದಣ್ಣ; ಆದ್ರೆ ಅಸಲಿಯತ್ತೇ ಬೇರೆ?
20:42ಕುರ್ಚಿ ಆಟದಲ್ಲಿ ಆಟಗಾರರೇ ಅಂಪೈರ್​ಗಳು; ಸಿದ್ದು ಆಟ, ಡಿಕೆ ಹಠ; ಹೈಕಮಾಂಡ್‌ಗೆ ಸಿಂಹಾಸನ ಸಂಕಟ!
23:14ಡಿ.ಕೆ.ಶಿವಕುಮಾರ್‌ಗೆ ಇದ್ಯಾ ರಾಜಯೋಗ? ನೇರಾನೇರ ಕುರ್ಚಿ ಕಾಳಗಕ್ಕೆ ಇಳಿದದ್ದು ಅದೇ ಕಾರಣಕ್ಕಾ?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
21:10ಮಹಾಕ್ರಾಂತಿ ಮಹಾ ಮುಹೂರ್ತ ಫಿಕ್ಸ್: ಪದತ್ಯಾಗನಾ? ಪಟ್ಟಾಭಿಷೇಕನಾ? ದೆಹಲಿಯಲ್ಲಿ ಕ್ಲೈಮ್ಯಾಕ್ಸ್..!
21:28ಹೊಸ ಆಟ ಆರಂಭಿಸಿದ್ರಾ ಡಿಕೆ ಬ್ರದರ್ಸ್? ಸಿಎಂ ಸಿಂಹಾಸನಕ್ಕಾಗಿ ರಾಜಕೀಯ ರಣರಂಗ!