ಕುರುಕ್ಷೇತ್ರದ ಕೊನೇ ಕ್ಷಣದಲ್ಲಿ ಅಪ್ಪ-ಮಗನ ಆಟ, ಅಖಾಡಕ್ಕೆ ಬಿಎಸ್’ವೈ-ವಿಜಯೇಂದ್ರ..!

ಕುರುಕ್ಷೇತ್ರದ ಕೊನೇ ಕ್ಷಣದಲ್ಲಿ ಅಪ್ಪ-ಮಗನ ಆಟ, ಅಖಾಡಕ್ಕೆ ಬಿಎಸ್’ವೈ-ವಿಜಯೇಂದ್ರ..!

Published : May 06, 2023, 10:33 AM IST

ಕರ್ನಾಟಕ ಕುರುಕ್ಷೇತ್ರದಲ್ಲಿ ಅಪ್ಪ-ಮಗನ ಜೋಡಿ ಅಂತ ಯಾರಾದರು ಇದ್ದರೆ ಅದು ಶಿಕಾರಿವೀರ ಯಡಿಯೂರಪ್ಪ ಮತ್ತವರ ಮಗ ವಿಜಯೇಂದ್ರ.  ಗುಡುಗು-ಮಿಂಚಿನ ಜೋಡಿ ರಣಭೂಮಿಯ ರಣಯುದ್ಧದಲ್ಲಿ ಏಕಕಾಲದಲ್ಲಿ ಧೂಳೆಬ್ಬಿಸುತ್ತಾ ಇದೆ. ಚುನಾವಣೆಗೆ ಬೆರಳೆಣಿಕೆಯ ದಿನಗಳಷ್ಟೇ ಬಾಕಿ. ಹೀಗಾಗಿ ರಣಕಲಿಗಳು ಕೊನೇ ಕ್ಷಣದಲ್ಲಿ ರೋಚಕ ದಾಳಗಳನ್ನು ಉರುಳಿಸ್ತಾ ಇದ್ದಾರೆ.

ಪ್ರಧಾನಿ ಮೋದಿಯ ಬಹುಮತದ ಸರ್ಕಾರ ಕನಸನ್ನು ನನಸು ಮಾಡಲು ಅಪ್ಪ-ಮಗನನ್ನು ಕೇಸರಿ ಪಡೆ ನಿರ್ಣಾಯಕ ಯುದ್ಧಕ್ಕೆ ಇಳಿಸಿ ಬಿಟ್ಟಿದೆ. ಗುರುವಾರದಿಂದ ಯಡಿಯೂರಪ್ಪ ಮತ್ತು ವಿಜಯೇಂದ್ರ ಪ್ರತ್ಯೇಕ ದಂಡಯಾತ್ರೆ ಶುರು ಮಾಡಿದ್ದಾರೆ. ಅಪ್ಪ-ಮಗನ ಟಾರ್ಗೆಟ್  30 ಕ್ಷೇತ್ರಗಳು. ಅದರಲ್ಲು ರಾಜಾಹುಲಿ ಬಿಎಸ್‌ವೈ ಕಮಲ ಪತಾಕೆ ಹಾರಿಸಲು ನೇರವಾಗಿ ನುಗ್ಗಿರುವುದು ಜೆಡಿಎಸ್ ಭದ್ರಕೋಟೆಗೆ.  ಈ ಬಾರಿ ಜೆಡಿಎಸ್ ಭದ್ರಕೋಟೆಯನ್ನು ಛಿದ್ರ ಮಾಡಿ ಹೊಸ ಚರಿತ್ರೆ ನಿರ್ಮಿಸಲು ಬಿಜೆಪಿ ಮುಂದಾಗಿದೆ. ಅದಕ್ಕಾಗಿ ಮಾಜಿ ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ ಮುಂಚೂಣಿಗೆ ಬಿಟ್ಟು, ಕೊನೇ ಕ್ಷಣದ ಆಟ ಶುರು ಮಾಡಿದೆ. ದಳಪತಿಗಳ ಕೋಟೆಗೆ ನುಗ್ಗಿರುವ ಬಿಎಸ್‌ವೈ, ಭರ್ಜರಿ ಪ್ರಚಾರ ನಡೆಸಿದ್ದಾರೆ.ಅಷ್ಟಕ್ಕೂ ಅಪ್ಪ-ಮಗನ ಶಿಕಾರಿವ್ಯೂಹದೊಳಗೆ ಅಡಗಿರೋದು ಅದೆಂಥಾ ರಹಸ್ಯ..? ಇಲ್ಲಿದೆ ನೋಡಿ 
 

23:25ಟ್ರಬಲ್ ಶೂಟರ್‌​ಗೆ ಟ್ರಬಲ್! ಎರಡೇ ದಿನಕ್ಕೆ ಮೊದಲ ವಿಕೆಟ್..! ಆಸ್ಫೋಟದ ಹಿಂದಿನ ಅಸಲಿ ಗುಟ್ಟು ಏನು?
21:41ಕಮಲ ಬಿಟ್ಟು ಅಖಾಡಕ್ಕಿಳಿದ 'ಸಿಂಗಂ' ! 'ವಿ ದಿ ಲೀಡರ್ಸ್' ಹೊಸ ಆಂದೋಲನ ಘೋಷಿಸಿದ ಅಣ್ಣಾಮಲೈ!
23:52ಪದಗ್ರಹಣಕ್ಕೂ ಮುನ್ನ ಮೂರು ಹೆಜ್ಜೆ, 3 ಸಂದೇಶ; ಡಿಕೆ ಮಾಸ್ಟರ್ ಪ್ಲಾನ್‌ ರಹಸ್ಯವೇನು?
20:08ಪ್ರತಿ ಮಂತ್ರಿಗಿರಿ ಹಿಂದೆ ನೂರೆಂಟು ಲೆಕ್ಕಾಚಾರ... ಯಾರಿಗೆ ಪಟ್ಟ..? ಯಾಕೆ ಪಟ್ಟ..? ಏನಿದರ ಗುಟ್ಟು?
44:07ಬಿಜೆಪಿಗೆ ಅಣ್ಣಾಮಲೈ ರಾಜೀನಾಮೆ ನೀಡಿದ್ದೇಕೆ? ನಿತಿನ್​ ನಬಿನ್ ಮನವೊಲಿಕೆಗೆ ಒಪ್ಪಲಿಲ್ಲ ಯಾಕೆ?
26:58ಬ್ರ್ಯಾಂಡ್ ಬಂಡೆ ಡಿಕೆ: ಖಾದರ್ ಲುಕ್‌ನಿಂದ Yezdi ಬೈಕ್‌ವರೆಗೆ ಡಿಕೆ ಶಿವಕುಮಾರ್ ಸ್ಟೈಲ್ ಸ್ಟೋರಿ
22:55ಹೇಗಾಯ್ತು ಗೊತ್ತಾ ಡಿಕೆಶಿ ಸಾಮ್ರಾಜ್ಯದ ಉದಯ? ಸೆರೆವಾಸದಿಂದ ಸಿಎಂ ಗದ್ದುಗೆಯವರೆಗೆ, ರಣರೋಚಕ ಅಧ್ಯಾಯ!
39:58ಜಮೀರ್ ಖಾನ್‌ಗೆ 'ಕೈ' ಕೊಟ್ಟ ಆಡಿಯೋ; ಇತ್ತ ಸಿದ್ದರಾಮಯ್ಯ ಆಪ್ತನಿಗೆ ಕೊಟ್ರು ಮಹತ್ವದ ಸಂದೇಶ
22:16ಕರ್ನಾಟಕದಲ್ಲಿ ಹೊಸ ಚರಿತ್ರೆ ಬರೆದ ‘ಗೌರಿ’ಪುತ್ರ..ಡಿಕೆ ಬ್ರದರ್ಸ್ ಸಕ್ಸಸ್ ಸೀಕ್ರೆಟ್ ಏನು ಗೊತ್ತಾ?
22:14ಮೈಲಾರನ ಮುನಿಸು ಮಾಯ! ಡಿಕೆಗೆ ಮುಖ್ಯಮಂತ್ರಿ ಯೋಗ, ದೈವ ಕೃಪೆಯ ಹಿಂದೆ ಏನಿದೆ ರಹಸ್ಯ?