Karnataka Politics: ಇಂದು ದೆಹಲಿಗೆ ತೆರಳಲಿರುವ ಸಿಎಂ: ಹೈಕಮಾಂಡ್ ಜೊತೆ ಹಲವು ವಿಚಾರಗಳ ಚರ್ಚೆ

Dec 26, 2022, 12:55 PM IST

ಇಂದು ಸಿಎಂ ದೆಹಲಿಗೆ ತೆರಳಲಿದ್ದು, ಚುನಾವಣೆ ಸಿದ್ಧತೆ ಬಗ್ಗೆ ಬಿಜೆಪಿ ಹೈಕಮಾಂಡ್‌ ಜತೆ ಚರ್ಚೆ ಮಾಡಲಿದ್ದಾರೆ. ಸಂಪುಟ ವಿಸ್ತರಣೆ, ಮೀಸಲಾತಿ ಹಾಗೂ ಚುನಾವಣೆ ಬಗ್ಗೆ ಸಮಾಲೋಚನೆ ನಡೆಸಲಿದ್ದು, ಸಿಎಂ ದೆಹಲಿ ಪ್ರವಾಸದ ಹಿಂದೆ ಇರುವ ಮುಖ್ಯ ಕಾರಣವೇ ಮೀಸಲಾತಿ. ಪಂಚಮಸಾಲಿ ಮೀಸಲಾತಿ ವಿಚಾರ ಸಾಧಕ ಬಾಧಕಗಳ ಬಗ್ಗೆ ಚರ್ಚೆ ಮಾಡಲಿದ್ದಾರೆ. ಚುನಾವಣೆ ಹೊತ್ತಿನಲ್ಲಿ ಸಿಎಂ ದೆಹಲಿ ಭೇಟಿ ಮೇಲೆ ಪಕ್ಷದ ಶಾಸಕರ ಕಣ್ಣಿಟ್ಟಿದ್ದು, ರಮೇಶ್ ಜಾರಕಿಹೊಳಿ ಮತ್ತು ಈಶ್ವರಪ್ಪ ಸಚಿವ ಸ್ಥಾನದ ಮೇಲೆ ಒತ್ತಡ ಇದ್ದು, ಹೈಕಮಾಂಡ್‌ ಅಭಿಪ್ರಾಯ ಪಡೆದು ಮುಂದಿನ ತೀರ್ಮಾನ ಸಿಎಂ ಕೈಗೊಳ್ಳಲಿದ್ದಾರೆ.

Assembly election: ರಾಯಚೂರು, ಮಸ್ಕಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಟಿಕೆಟ್‌ಗೆ ಭಾರೀ ಕಸರತ್ತು!