ರಾಜ್ಯದಲ್ಲಿ ಮತ್ತೊಮ್ಮೆ ಅಧಿಕಾರ ಹಿಡಿಯಲು ಬಿಜೆಪಿ ಸಿದ್ಧತೆ ನಡೆಸಿದ್ದು, ಬಿಜೆಪಿ ಚಾಣಕ್ಯ ಅಮಿತ್ ಶಾ ಮತಬೇಟೆಗೆ ಇಳಿದಿದ್ದಾರೆ.
ಉತ್ತರ ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕದ ಮೇಲೆ ಈ ಬಾರಿ ಬಿಜೆಪಿ ಕಣ್ಣಿಟ್ಟಿದ್ದು, ಕೇಂದ್ರ ಗೃಹ ಸಚಿವ ಅಮಿತ್ ಶಾ, ಈ ಭಾಗದಲ್ಲಿ ಹೂಡಿದ್ದಾರೆ. ಕಾಂಗ್ರೆಸ್ ಭದ್ರಕೋಟೆಯಲ್ಲಿ ಕಮಲ ಅರಳಿಸಲು ಬಿಜೆಪಿ ಚಾಣಕ್ಯ ಶಾ ಚಕ್ರವ್ಯೂಹ ಎಣೆದಿದ್ದಾರೆ. ಇದರ ಜೊತೆ ಪಕ್ಷದೊಳಗಿನ ನಾಯಕರ ಒಳ ಜಗಳಕ್ಕೂ ಅಮಿತ್ ಶಾ ಬ್ರೇಕ್ ಹಾಕಲು ಸಭೆ ನಡೆಸಿದ್ದಾರೆ. ಮತಬೇಟೆಗೆ ಕರ್ನಾಟಕಕ್ಕೆ ಬಂದಿರುವ ಅಮಿತ್ ಶಾ, ಒಡೆದು ಹೋಗಿರುವ ಬಿಜೆಪಿ ಮನಸ್ಸುಗಳನ್ನ ಒಗ್ಗೂಡಿಸೋ ಪ್ಲಾನ್ ಕೂಡ ಮಾಡಿಕೊಂಡಿದ್ದಾರೆ.
ಹಳೆಯ ನಿಯಮಕ್ಕೆ ತಿಲಾಂಜಲಿ: ನೂತನ ಅಪಾರ್ಟ್ಮೆಂಟ್ಗೆ ಬಿಡಿಎ ಗ್ರೀನ್ ಸಿ ...