ಕೊಪ್ಪಳದಲ್ಲಿ ಜೆಡಿಎಸ್‌ ಪಂಚರತ್ನ ಯಾತ್ರೆ: ಕುಮಾರಸ್ವಾಮಿ ರೋಡ್ ಶೋ

Jan 30, 2023, 4:21 PM IST

ರಾಜ್ಯ ವಿಧಾನಸಭಾ ಚುನಾವಣೆಗೆ ಜೆಡಿಎಸ್ ಭರ್ಜರಿ ಸಿದ್ಧತೆ ನಡೆಸಿದ್ದು, ಪಂಚರತ್ನ ಯಾತ್ರೆ ಮೂಲಕ ಮತಬೇಟೆಗೆ ಇಳಿದಿದೆ. ಕುಷ್ಟಗಿಯಲ್ಲಿ ಬಹಿರಂಗ ಸಮಾವೇಶ  ಮಾಡುವ ಮೂಲಕ ಮಾಜಿ ಸಿಎಂ ಹೆಚ್‌.ಡಿ ಕುಮಾರಸ್ವಾಮಿ ರೋಡ್‌ ಶೋ ಮಾಡಿದ್ದಾರೆ. ಕುಷ್ಟಗಿ ಮೂಲಕ ಬಳ್ಳಾರಿ ಜಿಲ್ಲೆಗೆ ಪಂಚರತ್ನ ಎಂಟ್ರಿ ಕೊಟ್ಟಿದ್ದು, ಮಿಷನ್‌ 123 ಗುರಿಯೊಂದಿಗೆ ದಳಪತಿ ರಣತಂತ್ರ ರೂಪಿಸಿದ್ದಾರೆ. ಜೆಡಿಎಸ್‌ ಅಭ್ಯರ್ಥಿ ತುಕಾರಾಮ್‌ ಜತೆ ರೋಡ್‌ ಶೋ ಬೈಕ್‌ ರ್ಯಾಲಿ ಮೂಲಕ ಹೆಚ್‌.ಡಿ.ಕೆಯನ್ನು ಕಾರ್ಯಕರ್ತಯರು ಸ್ವಾಗತ ಕೋರಿದ್ದಾರೆ.