ಇಂದು ಮೈಸೂರಿನಲ್ಲಿ ಪಂಚರತ್ನ ಸಮಾರೋಪ: ಶಕ್ತಿ ಪ್ರದರ್ಶಕ್ಕೆ ಜೆಡಿಎಸ್‌ ಸಜ್ಜು

Mar 26, 2023, 9:54 AM IST

 ಜೆಡಿಎಸ್‍ನ ಪಂಚರತ್ನ ರಥಯಾತ್ರೆಯ ಸಮಾರೋಪ ಸಮಾವೇಶವು ಇಂದು ಮೈಸೂರಿನಲ್ಲಿ ನಡೆಯಲಿದ್ದು, 10 ಲಕ್ಷ ಕಾರ್ಯಕರ್ತರು ಅಭಿಮಾನಿಗಳು ಸೇರುವ ಸಾಧ್ಯತೆ ಇದೆ. ಜಿ. ಟಿ ದೇವೇಗೌಡರ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಲಿದ್ದು, 6 ತಿಂಗಳ ಬಳಿಕ ಕಾರ್ಯಕ್ರಮವೊಂದರಲ್ಲಿ ಎಚ್‌ಡಿಡಿ ಭಾಗಿಯಾಗಲಿದ್ದಾರೆ.  ಮೈಸೂರಿನ ವರ್ತುಲ ರಸ್ತೆ ಬಳಿ ಜ್ವಾಲಾಮುಖಿ ತ್ರಿಪುರಸುಂದರಿಯಮ್ಮ ದೇವಸ್ಥಾನ ಪಕ್ಕದ ಮೈದಾನದಲ್ಲಿ ಸಮಾವೇಶ ಹಮ್ಮಿಕೊಳ್ಳಲಾಗಿದ್ದು,  ಸಮಾವೇಶಕ್ಕೂ ಮುನ್ನ ಶ್ರೀರಾಂಪುರದಿಂದ ರೋಡ್ ಷೋ ಮಾಡಲಾಗುತ್ತದೆ. ಇನ್ನು ಸಂಜೆ ನಾಲ್ಕು ಗಂಟೆಗೆ ಸಮಾವೇಶ ಜರುಗಲಿದೆ.