'ಕನ್ನಡ ಪಂಡಿತರು ಅಂದ್ಕೊಂಡಿದ್ದೆ, ಸಿದ್ಧರಾಮಯ್ಯರಿಗೆ ಕನ್ನಡ ಬರಲ್ವಾ?' ಎಚ್‌ಡಿಕೆ ಪ್ರಶ್ನೆ!

'ಕನ್ನಡ ಪಂಡಿತರು ಅಂದ್ಕೊಂಡಿದ್ದೆ, ಸಿದ್ಧರಾಮಯ್ಯರಿಗೆ ಕನ್ನಡ ಬರಲ್ವಾ?' ಎಚ್‌ಡಿಕೆ ಪ್ರಶ್ನೆ!

Published : Jul 17, 2023, 08:21 PM IST

ತಾವೊಬ್ಬ ಕನ್ನಡ ಪಂಡಿತ ಅನ್ನೋ ರೀತಿಯಲ್ಲಿ ಮಾತನಾಡುವ ಸಿಎಂ ಸಿದ್ಧರಾಮಯ್ಯಗೆ ಕನ್ನಡ ಭಾಷೆ ಅರ್ಥವಾಗೋದಿಲ್ವಾ ಎಂದು ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಕಿಡಿಕಾರಿದ್ದಾರೆ.

ಬೆಂಗಳೂರು (ಜು.17): ಪಂಚರತ್ನ ಜಾರಿಯಾಗದೇ ಇದ್ದಲ್ಲಿ ಜೆಡಿಎಸ್‌ ಪಕ್ಷ ವಿಸರ್ಜನೆ ಮಾಡ್ತೇನೆ ಅಂದಿದ್ದೆ. 123 ಸೀಟು ಬರದೇ ಇದ್ದಲ್ಲಿ ವಿಸರ್ಜನೆ ಮಾಡುತ್ತೇನೆ ಎಂದು ಎಲ್ಲಿಯೂ ಹೇಳಿರಲಿಲ್ಲ ಎಂದು ಎಚ್‌ಡಿ ಕುಮಾರಸ್ವಾಮಿ ಹೇಳಿದ್ದಾರೆ.

ತನ್ನನ್ನು ತಾನು ಕನ್ನಡ ಪಂಡಿತ ಅಂತಾ ಸಿದ್ಧರಾಮಯ್ಯ ಹೇಳ್ತಾರೆ. ಅವರಿಗೇನು ಕನ್ನಡ ಬರೋದಿಲ್ವಾ? ಎಂದು ಸಿದ್ಧರಾಮಯ್ಯ ವಿರುದ್ಧ ಎಚ್‌ಡಿಕೆ ಲೇವಡಿ ಮಾಡಿದ್ದಾರೆ. ದೇವರಾಜು ಅರಸು ನಂತ್ರ 2ನೇ ಬಾರಿಗೆ ಸಿಎಂ ಆಗಿದ್ದೀರಿ ಅಂತಾ ಹೇಳ್ಕೊಂಡು ತಿರುಗಾಡ್ತಾ ಇದ್ದೀರಿ, ಇದರಿಂದ ಜನರಿಗೆ ಏನ್‌ ಸಂದೇಶ ಕೊಡೋಕೆ ಹೊರಟಿದ್ದೀರಿ ಅದನ್ನು ಹೇಳಿ ಎಂದು ಎಚ್‌ಡಿಕೆ ಹೇಳಿದ್ದಾರೆ.

'ನಾನು ಸಿಎಂ ಆಗಿದ್ದಾಗ ಎಲ್ಲರೂ ನನ್ನ ಕೈ ಕೂಡ ಹೀಗೆ ಎತ್ತಿದ್ರು..' ಮಹಾಘಟಬಂದನ್‌, ಕಾಂಗ್ರೆಸ್‌ಗೆ ಎಚ್‌ಡಿಕೆ ಟೀಕೆ!

ಇದು ನನ್ನ ಕೊನೆ ಚುನಾವಣೆ ಅಂತಾ ಹೇಳಿದ್ದೀರಿ. ಜನರ ಬಳಿ ಒಳ್ಳೆಯ ಹೆಸರು ತೆಗೆದುಕೊಂಡು ಅಧಿಕಾರ ಮಾಡಿ. ಯಾವ ಸರ್ಕಾರದ ಮೇಲೂ ಈ ರೀತಿಯ ಆರೋಪಗಳನ್ನು ನಾನೆಲ್ಲೂ ಕೇಳಿರಲಿಲ್ಲ ಎಂದು ಎಚ್‌ಡಿಕೆ ಹೇಳಿದ್ದಾರೆ.

24:03Narendra Modi: 2025ರಲ್ಲಿ ಪ್ರಧಾನಿ ನರೇಂದ್ರ ಮೋದಿ ಸಾಧನೆ ಏನು? ಇಲ್ಲಿದೆ ನೋಡಿ ಸಂಪೂರ್ಣ ವರದಿ
20:58ಅಣ್ಣನನ್ನೇ ಓವರ್ ಟೇಕ್ ಮಾಡಿದ್ರಾ ಮುದ್ದಿನ ತಂಗಿ? ಅರ್ಧ ನಿಜವಾಗಿದೆ ಅಂದು ಇಂದಿರಾ ನುಡಿದಿದ್ದ ಭವಿಷ್ಯ!
20:43ಸಿಎಂ ಪಟ್ಟದ ಪಗಡೆಯಾಟದಲ್ಲಿ ಡಿಕೆಶಿ ವೈರಾಗ್ಯದ ನುಡಿ: ಸಿದ್ದು ಅಹಿಂದ ಬ್ರಹ್ಮಾಸ್ತ್ರಕ್ಕೆ ಸಿಂಹಾಸನ ದಿಗ್ಬಂಧನ?
22:34ರಾಹುಕಾಲ ರಹಸ್ಯ..! ಸಿದ್ದು ಆಪ್ತನ ಪತ್ರವ್ಯೂಹ.. ರಾಹುಲ್ ಕೈಯಲ್ಲಿ ಡಿ.ಕೆ.ಶಿವಕುಮಾರ್ ಪಟ್ಟ ಭವಿಷ್ಯ!
25:15ಜೂನಿಯರ್ ಇಂದಿರೆ, ಪ್ರಚಂಡ ಪ್ರಿಯಾಂಕಾ; ಬದ್ಧವೈರಿಗಳ ಬಾಯಲ್ಲೇ ಗುಣಗಾನ
23:33ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆದಿದ್ದು ಹೇಗೆ ರಣಬೇಟೆಗಾರ ಸಿಎಂ ಸಿದ್ದರಾಮಯ್ಯ?
05:37ಡೆವಿಲ್ ಸಿನಿಮಾದಲ್ಲಿ ದರ್ಶನ್ ಸಿಎಂ..! ಕಿಚ್ಚ ಸುದೀಪ್ ಹೇಳಿದ ಪಾಲಿಟಿಕ್ಸ್ ಸೀಕ್ರೆಟ್ ಏನು?
21:17ಸಿದ್ದು ಸಮರವ್ಯೂಹ.. ಡಿಕೆ ಚತುರದಾಳ.. ಡಿನ್ನರ್ ದಂಗಲ್: ಒಂದು ಸಭೆ.. ಮೂರು ಸಂದೇಶ.. ಚಾಣಾಕ್ಷ ಬಂಡೆ!
18:13ಸಿದ್ದು ಸೇನೆಯಲ್ಲಿ ಬಿರುಕು: ಅಹಿಂದ ಅರಸೊತ್ತಿಗೆ, ಸಾಹುಕಾರ್​ಗೆ ಸಿಗುತ್ತಾ ಪ್ರಚಂಡ ಪವರ್?
19:47ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
Read more