'ಡಿ.ಕೆ.ಶಿವಕುಮಾರ್ ಸಿಎಂ ಆಗೋದು ಶತಸಿದ್ಧ..' ಎಂದ ಜೈನ ಮಹಾಮುನಿ

'ಡಿ.ಕೆ.ಶಿವಕುಮಾರ್ ಸಿಎಂ ಆಗೋದು ಶತಸಿದ್ಧ..' ಎಂದ ಜೈನ ಮಹಾಮುನಿ

Published : Jan 23, 2025, 07:16 PM IST

ಮುಖ್ಯಮಂತ್ರಿ ಪಟ್ಟದ ಆಕಾಂಕ್ಷಿಯಾಗಿರುವ ಡಿಕೆ ಶಿವಕುಮಾರ್‌ಗೆ ಸನ್ಯಾಸಿಗಳ ಬೆಂಬಲ ದೊರೆತಿದೆ. ಹೈಕಮಾಂಡ್‌ನ ನಿರ್ಧಾರವೇ ಅಂತಿಮವಾಗಿದ್ದು, ಡಿಕೆಶಿಗೆ ಸಿಂಹಾಸನ ಒಲಿಯುವುದೇ ಎಂಬ ಕುತೂಹಲ ಮನೆ ಮಾಡಿದೆ.

ರಾಜ್ಯದಲ್ಲಿ ಮುಖ್ಯಮಂತ್ರಿ ಆಗಬೇಕು ಎಂದು ಪಣ ತೊಟ್ಟಿರುವ ಡಿಸಿಎಂ ಡಿ.ಕೆ. ಶಿವಕುಮಾರ್‌ಗೆ ಭಾರೀ ಅಡ್ಡಗಾಲು ಎದುರಾಗುತ್ತಿವೆ. ಪಟ್ಟದಾಸೆಗೆ ಸನ್ಯಾಸಿ ಶಕ್ತಿ. ಇದು ಡಿಕೆ ಶಿವಕುಮಾರ್ ಅವ್ರಿಗೆ ಸಿಕ್ಕಿರೋ ಮಹಾಮುನಿ ಶಕ್ತಿ, ಸಂತಬಲ.. ತುಂಬಿದ ವೇದಿಕೆಯಲ್ಲೇ ಡಿಕೆಶಿ ಮುಖ್ಯಮಂತ್ರಿ ಆಗೇ ಆಗುತ್ತಾರೆ ಎಂದರು ಆ ದಿಗಂಬರ ಮುನಿ..

ಯೆತ್ತಿ ಆಶೀರ್ವದಿಸಿದ ಜೈನಮುನಿಗಳು. ಶಿವ ಶಕ್ತಿಯ ನಂತರ ಡಿಕೆಗೆ ಸಂತ ಶಕ್ತಿ. ಬಂಡೆ ಸುತ್ತ ರಾಜಕೀಯ ಚಕ್ರವ್ಯೂಹ, ಬಂಡೆಗೆ ಧರ್ಮಗುರುಗಳ ಅಭಯ. ಹಾಗಾದರೆ ಡಿ.ಕೆ. ಶಿವಕುಮಾರ್ ಅವರಿಗೆ ಸಿಕ್ಕಿರೋ ಈ ಸನ್ಯಾಸಿ ಶಕ್ತಿ ಅವರನ್ನು ರಾಜಪಟ್ಟದ ಮೇಲೆ ಕೂರಿಸುತ್ತಾ.? ಬಂಡೆ ಆರಂಭಿಸಿರೋ ಸಿಂಹಾಸನ ಯಜ್ಞಕ್ಕೆ ಹೈಕಮಾಂಡ್ ವರ ಸಿಗುತ್ತಾ.? ಹಾಗೂ ಇತಿಹಾಸದ ಆ ಎರಡು ಘಟನೆಗಳು ಮರುಕಳಿಸುತ್ತದೆ ಎಂದು ಡಿ.ಕೆ. ಶಿವಕುಮಾರ್ ದೃಢವಾಗಿ ನಂಬಿರೋದು ಯಾಕೆ? ಹಾಗೂ ಆ ಇತಿಹಾಸವೇನು ಎಂಬ ಅಸಲಿ ಸತ್ಯಾಂಶ ಇಲ್ಲಿದೆ ನೋಡಿ..

ಕಾಂಗ್ರೆಸ್‌ನಲ್ಲಿ ಶುರುವಾಗಿರೋದು ಪಟ್ಟದ ಆಟ. ಆ ಆಟದಲ್ಲಿ ಒಬ್ಬೊಬ್ಬರದ್ದು ಒಂದೊಂದು ದಾಳ. ಸಿಂಹಾಸನಕ್ಕಾಗಿ ಹೈಕಮಾಂಡ್ ಮೇಲೆ ನಂಬಿಕೆ ಇಟ್ಟಿರೋ ಡಿಕೆ ಶಿವಕುಮಾರ್ ಅವರ ಬೆನ್ನಿಗೆ ಸನ್ಯಾಸಿ ಶಕ್ತಿಯೇ ನಿಂತಿದೆ. ಈ ಶಕ್ತಿಯಿಂದ ರಾಜಕೀಯ ಲೆಕ್ಕಾಚಾರಗಳೇನೂ ಬದಲಾಗಲು ಸಾಧ್ಯವಿಲ್ಲ. ಈ ಲೆಕ್ಕಾಚಾರಗಳೆಲ್ಲಾ ಅಡಗಿರೋದು ಹೈಕಮಾಂಡ್ ಕೈಯಲ್ಲಿ. ಹಾಗಾದರೆ ಡಿಕೆಶಿ ಅವ್ರಿಗೆ ಹೈಕಮಾಂಡ್ ಕೃಪೆ ತೋರುತ್ತಾ ಎಂಬುದು ಭಾರೀ ಕುತೂಹಲ ಮೂಡಿಸಿದೆ. 

23:25ಟ್ರಬಲ್ ಶೂಟರ್‌​ಗೆ ಟ್ರಬಲ್! ಎರಡೇ ದಿನಕ್ಕೆ ಮೊದಲ ವಿಕೆಟ್..! ಆಸ್ಫೋಟದ ಹಿಂದಿನ ಅಸಲಿ ಗುಟ್ಟು ಏನು?
21:41ಕಮಲ ಬಿಟ್ಟು ಅಖಾಡಕ್ಕಿಳಿದ 'ಸಿಂಗಂ' ! 'ವಿ ದಿ ಲೀಡರ್ಸ್' ಹೊಸ ಆಂದೋಲನ ಘೋಷಿಸಿದ ಅಣ್ಣಾಮಲೈ!
23:52ಪದಗ್ರಹಣಕ್ಕೂ ಮುನ್ನ ಮೂರು ಹೆಜ್ಜೆ, 3 ಸಂದೇಶ; ಡಿಕೆ ಮಾಸ್ಟರ್ ಪ್ಲಾನ್‌ ರಹಸ್ಯವೇನು?
20:08ಪ್ರತಿ ಮಂತ್ರಿಗಿರಿ ಹಿಂದೆ ನೂರೆಂಟು ಲೆಕ್ಕಾಚಾರ... ಯಾರಿಗೆ ಪಟ್ಟ..? ಯಾಕೆ ಪಟ್ಟ..? ಏನಿದರ ಗುಟ್ಟು?
44:07ಬಿಜೆಪಿಗೆ ಅಣ್ಣಾಮಲೈ ರಾಜೀನಾಮೆ ನೀಡಿದ್ದೇಕೆ? ನಿತಿನ್​ ನಬಿನ್ ಮನವೊಲಿಕೆಗೆ ಒಪ್ಪಲಿಲ್ಲ ಯಾಕೆ?
26:58ಬ್ರ್ಯಾಂಡ್ ಬಂಡೆ ಡಿಕೆ: ಖಾದರ್ ಲುಕ್‌ನಿಂದ Yezdi ಬೈಕ್‌ವರೆಗೆ ಡಿಕೆ ಶಿವಕುಮಾರ್ ಸ್ಟೈಲ್ ಸ್ಟೋರಿ
22:55ಹೇಗಾಯ್ತು ಗೊತ್ತಾ ಡಿಕೆಶಿ ಸಾಮ್ರಾಜ್ಯದ ಉದಯ? ಸೆರೆವಾಸದಿಂದ ಸಿಎಂ ಗದ್ದುಗೆಯವರೆಗೆ, ರಣರೋಚಕ ಅಧ್ಯಾಯ!
39:58ಜಮೀರ್ ಖಾನ್‌ಗೆ 'ಕೈ' ಕೊಟ್ಟ ಆಡಿಯೋ; ಇತ್ತ ಸಿದ್ದರಾಮಯ್ಯ ಆಪ್ತನಿಗೆ ಕೊಟ್ರು ಮಹತ್ವದ ಸಂದೇಶ
22:16ಕರ್ನಾಟಕದಲ್ಲಿ ಹೊಸ ಚರಿತ್ರೆ ಬರೆದ ‘ಗೌರಿ’ಪುತ್ರ..ಡಿಕೆ ಬ್ರದರ್ಸ್ ಸಕ್ಸಸ್ ಸೀಕ್ರೆಟ್ ಏನು ಗೊತ್ತಾ?
22:14ಮೈಲಾರನ ಮುನಿಸು ಮಾಯ! ಡಿಕೆಗೆ ಮುಖ್ಯಮಂತ್ರಿ ಯೋಗ, ದೈವ ಕೃಪೆಯ ಹಿಂದೆ ಏನಿದೆ ರಹಸ್ಯ?
Read more