ಮಹಾರಾಷ್ಟ್ರದ ಶಿವಸೇನೆ ಮಾದರಿಯಲ್ಲಿ ಇಬ್ಭಾಗವಾಗುತ್ತಾ ಜೆಡಿಎಸ್? ಸಡ್ಡು ಹೊಡೆದ ಅಧ್ಯಕ್ಷನಿಗೆ ಗೌಡ್ರು ಏನ್ಮಾಡ್ತಾರೆ?

ಮಹಾರಾಷ್ಟ್ರದ ಶಿವಸೇನೆ ಮಾದರಿಯಲ್ಲಿ ಇಬ್ಭಾಗವಾಗುತ್ತಾ ಜೆಡಿಎಸ್? ಸಡ್ಡು ಹೊಡೆದ ಅಧ್ಯಕ್ಷನಿಗೆ ಗೌಡ್ರು ಏನ್ಮಾಡ್ತಾರೆ?

Published : Oct 18, 2023, 02:00 PM IST

ಬಿಜೆಪಿ ದೋಸ್ತಿಯಿಂದ ಜೆಡಿಎಸ್ ಪಾಳೆಯದಲ್ಲಿ ಭೂಕಂಪ ಸೃಷ್ಟಿಯಾಗಿದೆ. ಮಹಾರಾಷ್ಟ್ರದ ಶಿವಸೇನೆ ಮಾದರಿಯಲ್ಲಿ ಜೆಡಿಎಸ್‌ ಕೂಡ ಇಬ್ಭಾಗವಾಗುತ್ತಾ? ಎಂಬ ಅನುಮಾನ ಕಾಡುತ್ತಿದೆ.

ಬಿಜೆಪಿ ದೋಸ್ತಿಯಿಂದ ಜೆಡಿಎಸ್ ಪಾಳೆಯದಲ್ಲಿ ಭೂಕಂಪ.. ಜೆಡಿಎಸ್‌ನಲ್ಲಿ ಬಂಡಾಯದ ಝಂಡಾ ಹಾರಿಸಿದ್ರು ಪಕ್ಷದ ರಾಜ್ಯಾಧ್ಯಕ್ಷ..! ಕುಮಾರಸ್ವಾಮಿಯವರನ್ನೇ ಪಕ್ಷದಿಂದ ಹೊರ ಹಾಕ್ತೀನಿ ಅಂತ ಅಬ್ಬರಿಸಿದ ಅಧ್ಯಕ್ಷ..! ನಮ್ಮದು ಒರಿಜಿನಲ್ ಜೆಡಿಎಸ್ ಅಂತ ದೇವೇಗೌಡರ ಕುಟುಂಬಕ್ಕೇ ಸವಾಲ್ ಹಾಕಿದ ಜೆಡಿಎಸ್ ರಾಜ್ಯಾಧ್ಯಕ್ಷ.. ಅಷ್ಟಕ್ಕೂ ಜೆಡಿಎಸ್ ಯಾರ ಪಕ್ಷ..? ದೇವೇಗೌಡರದ್ದಾ? ಸಿ.ಎಂ ಇಬ್ರಾಹಿಂರದ್ದಾ..? ಮಹಾರಾಷ್ಟ್ರದ ಶಿವಸೇನೆ ಮಾದರಿಯಲ್ಲಿ  ಒಡೆದು ಎರಡು ಹೋಳಾಗಲಿದ್ಯಾ ಜೆಡಿಎಸ್..?

ಜೆಡಿಎಸ್ ದೇವೇಗೌಡರ ಕುಟುಂಬದ ಸ್ವತ್ತಲ್ಲ, ನಮ್ಮದು ಅಂತಿದ್ದಾರೆ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ. ಪಕ್ಷದ ನಾಯಕತ್ವಕ್ಕೇ ಸಡ್ಡು ಹೊಡೆದಿರೋ ಇಬ್ರಾಹಿಂ, ಹೊಸ ಕೋರ್ ಕಮಿಟಿ ರಚಿಸಲು ಮುಂದಾಗಿದ್ದಾರೆ. ಇದ್ರ ಮಧ್ಯೆ ಜೆಡಿಎಸ್'ನಲ್ಲಿ ಇಬ್ರಾಹಿಂ ನಾಮಕಾವಸ್ತೆ ಅಧ್ಯಕ್ಷ ಅಂದಿದ್ದಾರೊಬ್ಬ ಬಿಜೆಪಿ ನಾಯಕ. ಜನತಾ ಪರಿವಾರರದ ಅಂತರ್ಯುದ್ದದಿಂದಲೇ ಜನ್ಮ ಪಡೆದ ಜೆಡಿಎಸ್'ನಲ್ಲೀಗ ಐತಿಹಾಸಿಕ ಅಂತಯುದ್ಧ. ಪಕ್ಷದ ಪರಮೋಚ್ಛ ನಾಯಕ ಕುಮಾರಸ್ವಾಮಿ ವಿರುದ್ಧ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ ಸಮರ ಕಹಳೆ ಮೊಳಗಿಸಿದ್ದಾರೆ. ಜೆಡಿಎಸ್ ದೇವೇಗೌಡರ ಕುಟುಂಬದ ಸ್ವತ್ತಲ್ಲ, ನಮ್ಮದು ಅಂತಿದ್ದಾರೆ. ಸಮಾನ ಮನಸ್ಕರ ಸಭೆ ಕರೆದು ಕುಮಾರಸ್ವಾಮಿ ವಿರುದ್ಧ ಗುಡುಗಿದ್ದಾರೆ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ.

ಇಬ್ರಾಹಿಂ ಕರೆದಿದ್ದ ಸಭೆಯಲ್ಲಿ ಬೇರೆ ಪಕ್ಷಗಳ ನಾಯಕರೂ ಇದ್ರು. ಅಷ್ಟಕ್ಕೂ ಜೆಡಿಎಸ್ ಸಭೆಯಲ್ಲಿದ್ದ ಅನ್ಯಪಕ್ಷಗಳ ಲೀಡರ್'ಗಳು ಯಾರು..? ಅವ್ರು ಅಲ್ಲಿಗೆ ಬಂದದ್ದೇಕೆ..? ಅಷ್ಟಕ್ಕೂ ಇಬ್ರಾಹಿಂ ಕರೆದಿದ್ದ ಸಭೆಯಲ್ಲಿ ಉಪಸ್ಥಿತರಿದ್ದ ಬೇರೆ ಪಕ್ಷಗಳ ನಾಯಕರು ಯಾರು..? ಹಾಗಾದ್ರೆ ಶಿವಸೇನೆಯ ರೀತಿಯಲ್ಲೇ ಜೆಡಿಎಸ್ ಇಬ್ಭಾಗವಾಗುತ್ತಾ..? ಜೆಡಿಎಸ್‌ ಅನ್ನು ಒಡೆಯುವ ಶಕ್ತಿ ಸಿ.ಎಂ ಇಬ್ರಾಹಿಂ ಅವರಿಗಿದ್ಯಾ..? ಖಂಡಿತಾ ಇಲ್ಲ ಅನ್ನೋದು ಜೆಡಿಎಸ್ ಪಾಳೆಯದಿಂದ ಸಿಗ್ತಿರೋ ರೆಡಿ ಮೇಡ್ ಉತ್ತರ.

20:50ಸಿಂಹಾಸನ ಸಂಗ್ರಾಮದಲ್ಲಿ ಡಿಕೆ ಶಿವಕುಮಾರ್ 'ಸ್ನೇಹವ್ಯೂಹ': ಸಿದ್ದು ಸಿಪಾಯಿಗಳನ್ನೇ ಸೆಳೆಯುವ ಬಂಡೆಯ ಹೊಸ ದಾಳ!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
19:26ನಾಟಿ ಕೋಳಿ ಊಟ ಹೊಟ್ಟೆಗೆ ಬೀಳ್ತಿದ್ದಂತೆ, ರಾಜಕೀಯ ಶಾಶ್ವತವಲ್ಲ ಎಂದ ಸಿದ್ದಣ್ಣ; ಆದ್ರೆ ಅಸಲಿಯತ್ತೇ ಬೇರೆ?
20:42ಕುರ್ಚಿ ಆಟದಲ್ಲಿ ಆಟಗಾರರೇ ಅಂಪೈರ್​ಗಳು; ಸಿದ್ದು ಆಟ, ಡಿಕೆ ಹಠ; ಹೈಕಮಾಂಡ್‌ಗೆ ಸಿಂಹಾಸನ ಸಂಕಟ!
23:14ಡಿ.ಕೆ.ಶಿವಕುಮಾರ್‌ಗೆ ಇದ್ಯಾ ರಾಜಯೋಗ? ನೇರಾನೇರ ಕುರ್ಚಿ ಕಾಳಗಕ್ಕೆ ಇಳಿದದ್ದು ಅದೇ ಕಾರಣಕ್ಕಾ?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
21:10ಮಹಾಕ್ರಾಂತಿ ಮಹಾ ಮುಹೂರ್ತ ಫಿಕ್ಸ್: ಪದತ್ಯಾಗನಾ? ಪಟ್ಟಾಭಿಷೇಕನಾ? ದೆಹಲಿಯಲ್ಲಿ ಕ್ಲೈಮ್ಯಾಕ್ಸ್..!
21:28ಹೊಸ ಆಟ ಆರಂಭಿಸಿದ್ರಾ ಡಿಕೆ ಬ್ರದರ್ಸ್? ಸಿಎಂ ಸಿಂಹಾಸನಕ್ಕಾಗಿ ರಾಜಕೀಯ ರಣರಂಗ!
22:40ಕುರ್ಚಿ ಕಿತ್ತಾಟ: 'ಜೋಡೆತ್ತು'ಗಳ ಜಲ್ಲಿಕಟ್ಟು, ಡಿಕೆಶಿ-ಸತೀಶ್ ಜಾರಕಿಹೊಳಿ ಮಧ್ಯರಾತ್ರಿ ರಹಸ್ಯ ರಿವೀಲ್!
21:17ಸಿಎಂ ಸಿಂಹಾಸನ ಸಮರ: 'ಕೊಟ್ಟ ಮಾತು ಉಳಿಸಿಕೊಳ್ಳಿ'! ಅಧ್ಯಕ್ಷ ಖರ್ಗೆಗೆ ಡಿಕೆಶಿ 'ಆತ್ಮಸಾಕ್ಷಿ' ಅಸ್ತ್ರ!
Read more