ಮಹಾರಾಷ್ಟ್ರದ ಶಿವಸೇನೆ ಮಾದರಿಯಲ್ಲಿ ಇಬ್ಭಾಗವಾಗುತ್ತಾ ಜೆಡಿಎಸ್? ಸಡ್ಡು ಹೊಡೆದ ಅಧ್ಯಕ್ಷನಿಗೆ ಗೌಡ್ರು ಏನ್ಮಾಡ್ತಾರೆ?

ಮಹಾರಾಷ್ಟ್ರದ ಶಿವಸೇನೆ ಮಾದರಿಯಲ್ಲಿ ಇಬ್ಭಾಗವಾಗುತ್ತಾ ಜೆಡಿಎಸ್? ಸಡ್ಡು ಹೊಡೆದ ಅಧ್ಯಕ್ಷನಿಗೆ ಗೌಡ್ರು ಏನ್ಮಾಡ್ತಾರೆ?

Published : Oct 18, 2023, 02:00 PM IST

ಬಿಜೆಪಿ ದೋಸ್ತಿಯಿಂದ ಜೆಡಿಎಸ್ ಪಾಳೆಯದಲ್ಲಿ ಭೂಕಂಪ ಸೃಷ್ಟಿಯಾಗಿದೆ. ಮಹಾರಾಷ್ಟ್ರದ ಶಿವಸೇನೆ ಮಾದರಿಯಲ್ಲಿ ಜೆಡಿಎಸ್‌ ಕೂಡ ಇಬ್ಭಾಗವಾಗುತ್ತಾ? ಎಂಬ ಅನುಮಾನ ಕಾಡುತ್ತಿದೆ.

ಬಿಜೆಪಿ ದೋಸ್ತಿಯಿಂದ ಜೆಡಿಎಸ್ ಪಾಳೆಯದಲ್ಲಿ ಭೂಕಂಪ.. ಜೆಡಿಎಸ್‌ನಲ್ಲಿ ಬಂಡಾಯದ ಝಂಡಾ ಹಾರಿಸಿದ್ರು ಪಕ್ಷದ ರಾಜ್ಯಾಧ್ಯಕ್ಷ..! ಕುಮಾರಸ್ವಾಮಿಯವರನ್ನೇ ಪಕ್ಷದಿಂದ ಹೊರ ಹಾಕ್ತೀನಿ ಅಂತ ಅಬ್ಬರಿಸಿದ ಅಧ್ಯಕ್ಷ..! ನಮ್ಮದು ಒರಿಜಿನಲ್ ಜೆಡಿಎಸ್ ಅಂತ ದೇವೇಗೌಡರ ಕುಟುಂಬಕ್ಕೇ ಸವಾಲ್ ಹಾಕಿದ ಜೆಡಿಎಸ್ ರಾಜ್ಯಾಧ್ಯಕ್ಷ.. ಅಷ್ಟಕ್ಕೂ ಜೆಡಿಎಸ್ ಯಾರ ಪಕ್ಷ..? ದೇವೇಗೌಡರದ್ದಾ? ಸಿ.ಎಂ ಇಬ್ರಾಹಿಂರದ್ದಾ..? ಮಹಾರಾಷ್ಟ್ರದ ಶಿವಸೇನೆ ಮಾದರಿಯಲ್ಲಿ  ಒಡೆದು ಎರಡು ಹೋಳಾಗಲಿದ್ಯಾ ಜೆಡಿಎಸ್..?

ಜೆಡಿಎಸ್ ದೇವೇಗೌಡರ ಕುಟುಂಬದ ಸ್ವತ್ತಲ್ಲ, ನಮ್ಮದು ಅಂತಿದ್ದಾರೆ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ. ಪಕ್ಷದ ನಾಯಕತ್ವಕ್ಕೇ ಸಡ್ಡು ಹೊಡೆದಿರೋ ಇಬ್ರಾಹಿಂ, ಹೊಸ ಕೋರ್ ಕಮಿಟಿ ರಚಿಸಲು ಮುಂದಾಗಿದ್ದಾರೆ. ಇದ್ರ ಮಧ್ಯೆ ಜೆಡಿಎಸ್'ನಲ್ಲಿ ಇಬ್ರಾಹಿಂ ನಾಮಕಾವಸ್ತೆ ಅಧ್ಯಕ್ಷ ಅಂದಿದ್ದಾರೊಬ್ಬ ಬಿಜೆಪಿ ನಾಯಕ. ಜನತಾ ಪರಿವಾರರದ ಅಂತರ್ಯುದ್ದದಿಂದಲೇ ಜನ್ಮ ಪಡೆದ ಜೆಡಿಎಸ್'ನಲ್ಲೀಗ ಐತಿಹಾಸಿಕ ಅಂತಯುದ್ಧ. ಪಕ್ಷದ ಪರಮೋಚ್ಛ ನಾಯಕ ಕುಮಾರಸ್ವಾಮಿ ವಿರುದ್ಧ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ ಸಮರ ಕಹಳೆ ಮೊಳಗಿಸಿದ್ದಾರೆ. ಜೆಡಿಎಸ್ ದೇವೇಗೌಡರ ಕುಟುಂಬದ ಸ್ವತ್ತಲ್ಲ, ನಮ್ಮದು ಅಂತಿದ್ದಾರೆ. ಸಮಾನ ಮನಸ್ಕರ ಸಭೆ ಕರೆದು ಕುಮಾರಸ್ವಾಮಿ ವಿರುದ್ಧ ಗುಡುಗಿದ್ದಾರೆ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ.

ಇಬ್ರಾಹಿಂ ಕರೆದಿದ್ದ ಸಭೆಯಲ್ಲಿ ಬೇರೆ ಪಕ್ಷಗಳ ನಾಯಕರೂ ಇದ್ರು. ಅಷ್ಟಕ್ಕೂ ಜೆಡಿಎಸ್ ಸಭೆಯಲ್ಲಿದ್ದ ಅನ್ಯಪಕ್ಷಗಳ ಲೀಡರ್'ಗಳು ಯಾರು..? ಅವ್ರು ಅಲ್ಲಿಗೆ ಬಂದದ್ದೇಕೆ..? ಅಷ್ಟಕ್ಕೂ ಇಬ್ರಾಹಿಂ ಕರೆದಿದ್ದ ಸಭೆಯಲ್ಲಿ ಉಪಸ್ಥಿತರಿದ್ದ ಬೇರೆ ಪಕ್ಷಗಳ ನಾಯಕರು ಯಾರು..? ಹಾಗಾದ್ರೆ ಶಿವಸೇನೆಯ ರೀತಿಯಲ್ಲೇ ಜೆಡಿಎಸ್ ಇಬ್ಭಾಗವಾಗುತ್ತಾ..? ಜೆಡಿಎಸ್‌ ಅನ್ನು ಒಡೆಯುವ ಶಕ್ತಿ ಸಿ.ಎಂ ಇಬ್ರಾಹಿಂ ಅವರಿಗಿದ್ಯಾ..? ಖಂಡಿತಾ ಇಲ್ಲ ಅನ್ನೋದು ಜೆಡಿಎಸ್ ಪಾಳೆಯದಿಂದ ಸಿಗ್ತಿರೋ ರೆಡಿ ಮೇಡ್ ಉತ್ತರ.

27:56ಬೆಂಗಳೂರು Beat: ಗ್ರೇಟರ್ ಬೆಂಗಳೂರಿಗೆ ಈಗ ಚುನಾವಣೆ ನಡೆದ್ರೆ ಗೆಲ್ಲೋದ್ಯಾರು?
19:37ಅಕ್ರಮ ಬಾಂಗ್ಲಾ ವಲಸಿಗರ ಹುಡುಕಿ ಗಡೀಪಾರು, ಸುವೆಂದು ಶಪಥಕ್ಕೆ ಬಾಂಗ್ಲಾದೇಶ ಕಂಗಾಲು
22:24ವಿಜಯ 108 ಸಂಕಟ 118: ಚುನಾವಣೆ ಗೆದ್ದರೂ ಸುಲಭವಲ್ಲ ಸಿಎಂ ಪಟ್ಟ! ರಾಜಕೀಯ ಚಕ್ರವ್ಯೂಹದಲ್ಲಿ ಗೆದ್ದು ಸೋತರಾ ದಳಪತಿ!
22:40ಉತ್ತರ ಕನ್ನಡ ಅಭಿವೃದ್ಧಿಯ ಹರಿಕಾರ ಶಿಕಾರಿಪುರದ ಸರದಾರ; ಉಪ್ಪು ನೀರನ್ನು ಸಿಹಿಯಾಗಿಸಿದ ಆಧುನಿಕ ಭಗೀರಥ
25:18ರಾಜಾಹುಲಿ ಯಡಿಯೂರಪ್ಪ ರಾಜಕಾರಣಕ್ಕೆ 50 ವರ್ಷ, ಯುವಶಕ್ತಿಗೆ ಗಾಡ್ ಫಾದರ್ ಆಗಿದ್ದು ಹೇಗೆ?
22:39ಧಾರವಾಡದ 'ಪಾಪದ ಕೋಟೆ' ಧೂಳೀಪಟ: ರಾಜಾಹುಲಿ ಬಿಎಸ್​ವೈ ಶಪಥ ಈಡೇರಿತೇ? ಕಂಬಿ ಹಿಂದೆ ವಿನಯ್ ಕುಲಕರ್ಣಿ ಭವಿಷ್ಯ!
20:24ಮೇ 4 ಟೈಂ ಬಾಂಬ್​​; ಸಿದ್ದು ಸೇನೆಯ ಪಟ್ಟು, ಬಂಡೆ ಮೌನದ ಗುಟ್ಟು, ಮುಗಿದಿಲ್ಲ ಪಟ್ಟದ ಫೈಟ್
24:46ದಾವಣಗೆರೆಗೆ ಆ ಗಯಾ ಜಮೀರ್, ಚಲ್ ಗಯಾ ಮುನಿಸು; 'ಹುಲಿಯಾ' ಹುಕುಂಗೆ ತಣ್ಣಗಾದ ಅಂತರ್ಯುದ್ಧದ ಜ್ವಾಲೆ?
22:26ಬಂಗಾಳ ಬೆಂಕಿಯಲ್ಲಿ ಕಮಲ ಕಸರತ್ತು..ಕೇರಳ ಕಿರೀಟ.. ಸರಳ ಬಹುಮತ.. ಸಮೀಕ್ಷೆ ಸೀಕ್ರೆಟ್!
22:52ಅವಳಿ ರಣರಂಗ.. ತ್ರಿವಳಿ ಚದುರಂಗ: ಸಿದ್ದರಾಮಯ್ಯಗೆ ಸತ್ವಪರೀಕ್ಷೆ.. ಕನಕಪುರ ಬಂಡೆಗೆ ಅಗ್ನಿಪರೀಕ್ಷೆ!
Read more