ಮಹಾರಾಷ್ಟ್ರದ ಶಿವಸೇನೆ ಮಾದರಿಯಲ್ಲಿ ಇಬ್ಭಾಗವಾಗುತ್ತಾ ಜೆಡಿಎಸ್? ಸಡ್ಡು ಹೊಡೆದ ಅಧ್ಯಕ್ಷನಿಗೆ ಗೌಡ್ರು ಏನ್ಮಾಡ್ತಾರೆ?

ಮಹಾರಾಷ್ಟ್ರದ ಶಿವಸೇನೆ ಮಾದರಿಯಲ್ಲಿ ಇಬ್ಭಾಗವಾಗುತ್ತಾ ಜೆಡಿಎಸ್? ಸಡ್ಡು ಹೊಡೆದ ಅಧ್ಯಕ್ಷನಿಗೆ ಗೌಡ್ರು ಏನ್ಮಾಡ್ತಾರೆ?

Published : Oct 18, 2023, 02:00 PM IST

ಬಿಜೆಪಿ ದೋಸ್ತಿಯಿಂದ ಜೆಡಿಎಸ್ ಪಾಳೆಯದಲ್ಲಿ ಭೂಕಂಪ ಸೃಷ್ಟಿಯಾಗಿದೆ. ಮಹಾರಾಷ್ಟ್ರದ ಶಿವಸೇನೆ ಮಾದರಿಯಲ್ಲಿ ಜೆಡಿಎಸ್‌ ಕೂಡ ಇಬ್ಭಾಗವಾಗುತ್ತಾ? ಎಂಬ ಅನುಮಾನ ಕಾಡುತ್ತಿದೆ.

ಬಿಜೆಪಿ ದೋಸ್ತಿಯಿಂದ ಜೆಡಿಎಸ್ ಪಾಳೆಯದಲ್ಲಿ ಭೂಕಂಪ.. ಜೆಡಿಎಸ್‌ನಲ್ಲಿ ಬಂಡಾಯದ ಝಂಡಾ ಹಾರಿಸಿದ್ರು ಪಕ್ಷದ ರಾಜ್ಯಾಧ್ಯಕ್ಷ..! ಕುಮಾರಸ್ವಾಮಿಯವರನ್ನೇ ಪಕ್ಷದಿಂದ ಹೊರ ಹಾಕ್ತೀನಿ ಅಂತ ಅಬ್ಬರಿಸಿದ ಅಧ್ಯಕ್ಷ..! ನಮ್ಮದು ಒರಿಜಿನಲ್ ಜೆಡಿಎಸ್ ಅಂತ ದೇವೇಗೌಡರ ಕುಟುಂಬಕ್ಕೇ ಸವಾಲ್ ಹಾಕಿದ ಜೆಡಿಎಸ್ ರಾಜ್ಯಾಧ್ಯಕ್ಷ.. ಅಷ್ಟಕ್ಕೂ ಜೆಡಿಎಸ್ ಯಾರ ಪಕ್ಷ..? ದೇವೇಗೌಡರದ್ದಾ? ಸಿ.ಎಂ ಇಬ್ರಾಹಿಂರದ್ದಾ..? ಮಹಾರಾಷ್ಟ್ರದ ಶಿವಸೇನೆ ಮಾದರಿಯಲ್ಲಿ  ಒಡೆದು ಎರಡು ಹೋಳಾಗಲಿದ್ಯಾ ಜೆಡಿಎಸ್..?

ಜೆಡಿಎಸ್ ದೇವೇಗೌಡರ ಕುಟುಂಬದ ಸ್ವತ್ತಲ್ಲ, ನಮ್ಮದು ಅಂತಿದ್ದಾರೆ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ. ಪಕ್ಷದ ನಾಯಕತ್ವಕ್ಕೇ ಸಡ್ಡು ಹೊಡೆದಿರೋ ಇಬ್ರಾಹಿಂ, ಹೊಸ ಕೋರ್ ಕಮಿಟಿ ರಚಿಸಲು ಮುಂದಾಗಿದ್ದಾರೆ. ಇದ್ರ ಮಧ್ಯೆ ಜೆಡಿಎಸ್'ನಲ್ಲಿ ಇಬ್ರಾಹಿಂ ನಾಮಕಾವಸ್ತೆ ಅಧ್ಯಕ್ಷ ಅಂದಿದ್ದಾರೊಬ್ಬ ಬಿಜೆಪಿ ನಾಯಕ. ಜನತಾ ಪರಿವಾರರದ ಅಂತರ್ಯುದ್ದದಿಂದಲೇ ಜನ್ಮ ಪಡೆದ ಜೆಡಿಎಸ್'ನಲ್ಲೀಗ ಐತಿಹಾಸಿಕ ಅಂತಯುದ್ಧ. ಪಕ್ಷದ ಪರಮೋಚ್ಛ ನಾಯಕ ಕುಮಾರಸ್ವಾಮಿ ವಿರುದ್ಧ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ ಸಮರ ಕಹಳೆ ಮೊಳಗಿಸಿದ್ದಾರೆ. ಜೆಡಿಎಸ್ ದೇವೇಗೌಡರ ಕುಟುಂಬದ ಸ್ವತ್ತಲ್ಲ, ನಮ್ಮದು ಅಂತಿದ್ದಾರೆ. ಸಮಾನ ಮನಸ್ಕರ ಸಭೆ ಕರೆದು ಕುಮಾರಸ್ವಾಮಿ ವಿರುದ್ಧ ಗುಡುಗಿದ್ದಾರೆ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ.

ಇಬ್ರಾಹಿಂ ಕರೆದಿದ್ದ ಸಭೆಯಲ್ಲಿ ಬೇರೆ ಪಕ್ಷಗಳ ನಾಯಕರೂ ಇದ್ರು. ಅಷ್ಟಕ್ಕೂ ಜೆಡಿಎಸ್ ಸಭೆಯಲ್ಲಿದ್ದ ಅನ್ಯಪಕ್ಷಗಳ ಲೀಡರ್'ಗಳು ಯಾರು..? ಅವ್ರು ಅಲ್ಲಿಗೆ ಬಂದದ್ದೇಕೆ..? ಅಷ್ಟಕ್ಕೂ ಇಬ್ರಾಹಿಂ ಕರೆದಿದ್ದ ಸಭೆಯಲ್ಲಿ ಉಪಸ್ಥಿತರಿದ್ದ ಬೇರೆ ಪಕ್ಷಗಳ ನಾಯಕರು ಯಾರು..? ಹಾಗಾದ್ರೆ ಶಿವಸೇನೆಯ ರೀತಿಯಲ್ಲೇ ಜೆಡಿಎಸ್ ಇಬ್ಭಾಗವಾಗುತ್ತಾ..? ಜೆಡಿಎಸ್‌ ಅನ್ನು ಒಡೆಯುವ ಶಕ್ತಿ ಸಿ.ಎಂ ಇಬ್ರಾಹಿಂ ಅವರಿಗಿದ್ಯಾ..? ಖಂಡಿತಾ ಇಲ್ಲ ಅನ್ನೋದು ಜೆಡಿಎಸ್ ಪಾಳೆಯದಿಂದ ಸಿಗ್ತಿರೋ ರೆಡಿ ಮೇಡ್ ಉತ್ತರ.

21:334 ತಿಂಗಳು, 16 ಲೆಟರ್​; ಸಿಎಂ ಯೋಗಿ ಆದಿತ್ಯನಾಥ್ ಪತ್ರ ತಂತ್ರ ರಹಸ್ಯ
18:02ಬತ್ತಳಿಕೆಯಿಂದ ಬ್ರಹ್ಮಾಸ್ತ್ರ ತೆಗೆದ ಸಿಎಂ ಸಿದ್ದರಾಮಯ್ಯ; ಟಗರು ಗುಮ್ಮಿದ್ದು ಯಾರಿಗೆ?
19:33ರಾಜಾಹುಲಿಯ ರಣಘರ್ಜನೆ, ಸೈಕಲ್ to ಸಿಂಹಾಸನ: ಮಾಜಿ ಸಿಎಂ ಯಡಿಯೂರಪ್ಪ 50 ವರ್ಷಗಳ ರೋಚಕ ಚರಿತ್ರೆ
21:15ಸಪ್ತಸಾಗರದಾಚೆ ಸಿದ್ದು ಬಣದ 'ಅಗೋಚರ ಆಟ': ಡಿಕೆಶಿ ದಂಡು ಕಟ್ಟುವ ಮೊದಲೇ ಸೈನ್ಯ ಜಮಾಯಿಸಿದ್ರಾ ಸಿಎಂ?
20:27ಕಾಂಗ್ರೆಸ್‌ನಲ್ಲಿ ನಿಯತ್ತಿನ ಯುದ್ಧ: ಡಿಕೆ ಯಾವಾಗ ಸಿಎಂ ಆಗ್ತಾರೆ? ಡಿಸಿಎಂ ಬಂಟರ ನೀಡಿದ ಮುಹೂರ್ತ ಏನು?
46:28ತಮಿಳುನಾಡು ಚುನಾವಣಾ ಕಣದಲ್ಲಿ ಬಿರುಗಾಳಿ: ವಿಜಯ್ ಸವಾಲು, ಬಿಜೆಪಿಗೆ ಅಣ್ಣಾಮಲೈ ಶಾಕ್
18:32ಸ್ವಾಮೀಜಿಯನ್ನ ಕಾಲನೇಮಿ ರಾಕ್ಷಸನಿಗೆ ಹೋಲಿಸಿದ್ರಾ ಯೋಗಿ? ಸಂತ Vs ಸನ್ಯಾಸಿ.. ತೆರೆಯ ಹಿಂದಿನ ರೋಚಕ ರಹಸ್ಯ!
22:22ಕರ್ಮಭೂಮಿಯಲ್ಲೇ ಪ್ರಾಣ ಬಿಟ್ಟ ಬಾರಾಮತಿಯ ದಾದಾ: ಮಹಾಯುತಿ ಮೈತ್ರಿಯಲ್ಲಿ ಬಿರುಕು ತರುತ್ತಾ ಅಜಿತ್ ಪವಾರ್ ಸಾವು?
21:47ಮೋದಿ ಮೆಚ್ಚಿದ 'ಬಾಸ್' ಈಗ ಕಮಲ ಪಡೆಯ ಹೊಸ ಸಾರಥಿ! ನಿತಿನ್ ನಬೀನ್ ನನಗೂ ಬಾಸ್ ಎಂದಿದ್ದೇಕೆ ನಮೋ?
23:34‘ತಾಳ್ಮೆಗೂ ಕೊನೆಯಿದೆ..’ ಕಡೆಯ ವಾರ್ನಿಂಗ್ ಕೊಟ್ರಾ ಡಿ.ಕೆ ಸುರೇಶ್? ‘ವಚನ’ ಕದನದ ಹಿಂದಿನ ಅಸಲಿ ರಹಸ್ಯವೇನು..?
Read more