ಸಂಡೂರು ಗೆಲುವಿನ ಮೇಲೆ ನಿಂತಿದ್ಯಾ ಸಿದ್ದು ಸಿಂಹಾಸನ ಭವಿಷ್ಯ: ಚನ್ನಪಟ್ಟಣ ಗೆದ್ದರೆ ಡಿಕೆಶಿ ಸಿಎಂ ಆಗ್ತಾರಾ?

ಸಂಡೂರು ಗೆಲುವಿನ ಮೇಲೆ ನಿಂತಿದ್ಯಾ ಸಿದ್ದು ಸಿಂಹಾಸನ ಭವಿಷ್ಯ: ಚನ್ನಪಟ್ಟಣ ಗೆದ್ದರೆ ಡಿಕೆಶಿ ಸಿಎಂ ಆಗ್ತಾರಾ?

Published : Nov 10, 2024, 02:25 PM IST

ತ್ರಿವಳಿ ಅಖಾಡಗಳ ಉಪಚುನಾವಣೆಯನ್ನು ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದಾರೆ. ಅದರಲ್ಲೂ ಸಂಡೂರು ಮತ್ತು ಚನ್ನಪಟ್ಟಣವನ್ನು ಗೆಲ್ಲಲೇಬೇಕು ಅನ್ನೋ ಹಠ. ಇದಕ್ಕಾಗಿ ಇಡೀ ಕಾಂಗ್ರೆಸ್ ಸೈನ್ಯವನ್ನೇ ಅಖಾಡಕ್ಕಿಳಿಸಿ ಪ್ರತಿಷ್ಠೆಯ ಯುದ್ಧ ಗೆಲ್ಲೋಕೆ ರೆಡಿಯಾಗಿದ್ದಾರೆ. 

ಬೆಂಗಳೂರು(ನ.10):  ಕೈ ಪಾಳೆಯದಲ್ಲಿ ಭುಗಿಲೆದ್ದು ನಿಂತಿತಾ ಬೂದಿ ಮುಚ್ಚಿದ್ದ ಕೆಂಡ..? ಬೈ ಎಲೆಕ್ಷನ್ ಬ್ಯಾಟಲ್'ನಲ್ಲಿ ಶುರುವಾಯ್ತು ಸಿಂಹಾಸನ ಸಂಘರ್ಷ..! ಇಂದೂ, ಮುಂದೂ ನಾನೇ ಮುಖ್ಯಮಂತ್ರಿ ಎಂದ ಸಿದ್ದರಾಮಯ್ಯ..! ಬೊಂಬೆಯಾಟದಲ್ಲಿ ಗೆದ್ದರೆ ಡಿಕೆ ಸಿಎಂ ಆಗ್ತಾರೆ ಎಂದ ಬಂಡೆ ಭಂಟರು..! ಸಿಎಂಗೆ ಸಂಡೂರು ಸವಾಲ್, ಡಿಸಿಎಂಗೆ ಪಟ್ಟಣ ಪ್ರತಿಷ್ಠೆ.. ಏನದು ಅವಳಿ ಅಖಾಡಗಳಲ್ಲಿ ಅಡಗಿರೋ ಸಿಂಹಾಸನ ಯುದ್ಧದ ಅಸಲಿ ರಹಸ್ಯ..? ಇದು ಅಂತರ್ಯುದ್ಧನಾ..? ಮಿನಿ ಕುರುಕ್ಷೇತ್ರ ಗೆಲ್ಲಲು ಭಲೇ ಜೋಡಿ ಹೆಣೆದ ವಿಜಯಮಂತ್ರನಾ..? ಸಿಎಂ ಸಂಘರ್ಷದ ಹಿಂದಿನ ಅಸಲಿಯತ್ತಿನ ಅನಾವರಣವೇ ಇವತ್ತಿನ ಸುವರ್ಣ ಸ್ಪೆಷಲ್, ಗುದ್ದಾಂ ಗುದ್ದಿ..!

ಸಿಎಂ ಸಿಂಹಾಸನದ ಗುದ್ದಾಂ ಗುದ್ದಿಯ ಹಿಂದೆ ಇಂಟ್ರೆಸ್ಟಿಂಗ್ ಲೆಕ್ಕಾಚಾರವೊಂದು ಅಡಗಿದೆ.. ಅದು ಪಕ್ಕಾ ಲೆಕ್ಕ ಹಾಕಿಯೇ ಸಿದ್ದು-ಡಿಕೆ ಜೋಡಿ ಅವಳಿ ಅಖಾಡಗಳಲ್ಲಿ ಉರುಳಿಸಿರೋ ದಾಳ.. ಅಷ್ಟಕ್ಕೂ ಏನದು ಭಲೇ ಜೋಡಿಯ ದಾಳದ ಹಿಂದಿನ ಅಸಲಿಯತ್ತು..?

ಗುರು-ಶಿಷ್ಯರ ರಣಕಾಳಗಕ್ಕೆ ಸಾಕ್ಷಿಯಾದ ಚನ್ನಪಟ್ಟಣ; ಗೌಡರ ಸೇಡು.. ಸಿದ್ದು ಜಿದ್ದು.. ಧಗಧಗಿಸಿದ ದುಷ್ಮನಿ..!

ಸಂಡೂರು ಸಮರ ಗೆದ್ರೆ ಐದು ವರ್ಷವೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿಯಂತೆ.. ಚನ್ನಪಟ್ಟಣ ಚದುರಂಗ ಗೆದ್ರೆ ಡಿಕೆ ಶಿವಕುಮಾರ್ ಸಿಎಂ ಆಗ್ತಾರಂತೆ.. ಇದು ಸಂಘರ್ಷವೋ, ಸಮರತಂತ್ರವೋ..? ಸಿಎಂ ಸಿಂಹಾಸನದ ಗುದ್ದಾಂ ಗುದ್ದಿಯ ಹಿಂದೆ ಇಂಟ್ರೆಸ್ಟಿಂಗ್ ಲೆಕ್ಕಾಚಾರವೊಂದು ಅಡಗಿದೆ.. ಅದು ಪಕ್ಕಾ ಲೆಕ್ಕ ಹಾಕಿಯೇ ಸಿದ್ದು-ಡಿಕೆ ಜೋಡಿ ಅವಳಿ ಅಖಾಡಗಳಲ್ಲಿ ಉರುಳಿಸಿರೋ ದಾಳ.. ಅಷ್ಟಕ್ಕೂ ಏನದು ಭಲೇ ಜೋಡಿಯ ದಾಳದ ಹಿಂದಿನ ಅಸಲಿಯತ್ತು..? ಇಲ್ಲಿದೆ ನೋಡಿ ಇಂಟ್ರೆಸ್ಟಿಂಗ್ ಸ್ಟೋರಿ.

ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಜೋಡಿ ಹೆಣೆದಿರೋ ಈ ಸಮರತಂತ್ರ ಬೈ ಎಲೆಕ್ಷನ್'ನಲ್ಲಿ ಕಾಂಗ್ರೆಸ್ಸನ್ನು ಗೆಲ್ಲಿಸುತ್ತಾ..? ಮಿನಿ ಕುರುಕ್ಷೇತ್ರ ಗೆಲ್ಲೋದಕ್ಕೆ ಭಲೇ ಜೋಡಿ ಹೆಣೆದಿರೋ ರಣತಂತ್ರ ಹೇಗಿದೆ ಅನ್ನೋದನ್ನು ತೋರಿಸ್ತೀವಿ.
ತ್ರಿವಳಿ ಅಖಾಡಗಳ ಉಪಚುನಾವಣೆಯನ್ನು ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದಾರೆ. ಅದರಲ್ಲೂ ಸಂಡೂರು ಮತ್ತು ಚನ್ನಪಟ್ಟಣವನ್ನು ಗೆಲ್ಲಲೇಬೇಕು ಅನ್ನೋ ಹಠ. ಇದಕ್ಕಾಗಿ ಇಡೀ ಕಾಂಗ್ರೆಸ್ ಸೈನ್ಯವನ್ನೇ ಅಖಾಡಕ್ಕಿಳಿಸಿ ಪ್ರತಿಷ್ಠೆಯ ಯುದ್ಧ ಗೆಲ್ಲೋಕೆ ರೆಡಿಯಾಗಿದ್ದಾರೆ. ಅಷ್ಟಕ್ಕೂ ಹೇಗಿದೆ ಗೊತ್ತಾ ಸಿಎಂ-ಡಿಸಿಎಂ ಹೆಣೆದಿರೋ ಯುದ್ಧವ್ಯೂಹ..?

ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಜಂಟಿಯಾಗಿ ಹೆಣೆದಿರೋ ಸಿಎಂ ಸಮರತಂತ್ರ, ಬೈ ಎಲೆಕ್ಷನ್'ನಲ್ಲಿ ಕಾಂಗ್ರೆಸ್ಸನ್ನು ಗೆಲ್ಲಿಸುತ್ತಾ..? ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೈ ಪಾಳೆಯಕ್ಕೆ ಸಂಜೀವಿನಿಯಾಗಿದ್ದ ಯುದ್ಧತಂತ್ರ ಈ ಬಾರಿಯೂ ಕಾಂಗ್ರೆಸ್ ಕೈ ಹಿಡಿಯುತ್ತಾ..? ಕಾದು ನೋಡೋಣ. 

24:31ಮಡದಿ.. ಸಹೋದರ ಸಮೇತ ಸಿದ್ದು ಮನೆಗೆ ಡಿಕೆ! ಮೊದಲ ಹೆಜ್ಜೆಗಳಲ್ಲೇ ಮಹಾ ಗುರಿಯ ಸುಳಿವು ಕೊಟ್ಟಾಗಿದೆ ಡಿಕೆ!
24:17ಕಾಸು..ಕರೆಂಟು..ಲಕ್ಷ್ಮೀ..ಜ್ಯೋತಿ..ಡಬಲ್ ಆಪರೇಷನ್! ಎಪಿಕ್ ಕಾರ್ಡ್​ ನಂಬರ್ ಸೀಕ್ರೆಟ್​..ಏನಿದು ಮಾಸ್ಟರ್​ ಸ್ಟ್ರೋಕ್?
21:09ಇದು ದಳಪತಿ ಕೋಟೆ ಕಣೋ! ವಿಜಯ್ ಶಪಥಕ್ಕೆ ನಡುಗಿದ್ದೇಕೆ ದ್ರಾವಿಡ ನೆಲದ ರಾಜಕಾರಣ?
23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!
23:38ಬಿಡದಿ ಟೌನ್‌ಶಿಪ್ ರಣರಂಗದಲ್ಲಿ ಪತ್ರಕ್ಕೆ ಪತ್ರ, ಸವಾಲ್‌ಗೆ ಸವಾಲ್, ಜಿದ್ದಿಗೆ ಜಿದ್ದು!
06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
24:49Karnataka Congress: ಹರಿಪ್ರಸಾದ್‌ಗೆ ಕೆಪಿಸಿಸಿ ಗದ್ದುಗೆ: ಡಿಕೆ-ಬಿಕೆ ಜೋಡಿಯಿಂದ ಹೊಸ ಮ್ಯಾಜಿಕ್ ಸಾಧ್ಯನಾ?
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
19:09ಕನಕಾಧಿಪತಿ ಚದುರಂಗ.. BJP ಪಡೆ ಕೋಲಾಹಲ: ಹಸ್ತಕೋಟೆಗೇ ಗೊತ್ತಿರಲಿಲ್ಲ.. ಡಿಕೆ ಹೂಡಿದ ಚಕ್ರವ್ಯೂಹ!
18:09362 ನಂಬರ್‌ಗಾಗಿ ಬಿಜೆಪಿ ಆಟ, ಕಂಪನಕ್ಕೆ ಬಂಗಾಳದಿಂದ ಯುಪಿ ವರೆಗೂ ಉರುಳುತ್ತಿದೆ ವಿಕೆಟ್
Read more