ಬೊಮ್ಮಾಯಿ ನನ್ನ ಕೈ ಬಿಡಲ್ಲ ಎಂಬ ನಂಬಿಕೆ ಇದೆ: ಉಮೇಶ್‌ ಕತ್ತಿ

Jul 29, 2021, 3:23 PM IST

ನವದೆಹಲಿ(ಜು.29): ಸಚಿವ ಸ್ಥಾನ ಕೊಟ್ಟರೆ ನಿಭಾಯಿಸುತ್ತೇನೆ, ಮಂತ್ರಿ ಸ್ಥಾನ ಕೊಡದಿದ್ದರೆ ಶಾಸಕನಾಗಿಯೇ ಇರುತ್ತೇನೆ  ಎಂದು ಮಾಜಿ ಸಚಿವ ಉಮೇಶ್‌ ಕತ್ತಿ ಹೇಳಿದ್ದಾರೆ. ಇಂದು(ಗುರುವಾರ) ನವದೆಹಲಿಯಲ್ಲಿ ಮಾತನಾಡಿದ ಅವರು, ಬೊಮ್ಮಾಯಿ ನನ್ನ ಕೈ ಬಿಡಲ್ಲ ಎಂಬ ನಂಬಿಕೆ ಇದೆ, ಮಂತ್ರಿಯಾಗದಿದ್ರೂ ಶಾಸಕನಾಗಿಯೇ ಕೆಲಸ ಮಾಡುತ್ತೇನೆ. ಇನ್ನೂ 15 ವರ್ಷ ರಾಜಕಾರಣ ಮಾಡುತ್ತೇನೆ. ಅಖಂಡ ಕರ್ನಾಟಕ ಅಭಿವೃದ್ಧಿಗಾಗಿ ಶ್ರಮಿಸುವೆ ಅಂತ ಹೇಳಿದ್ದಾರೆ. 

ಶೆಟ್ಟರ್ ಹಾದಿ ಹಿಡಿದರಾ ಈಶ್ವರಪ್ಪ..? ಬೊಮ್ಮಾಯಿ ಸಂಪುಟದಿಂದ ದೂರ ಉಳಿತಾರಾ..?