92ರ ಇಳಿ ವಯಸ್ಸಲ್ಲೂ ದೇವೇಗೌಡರ ಸಿಂಹ ಘರ್ಜನೆ: ಮೊಮ್ಮಗನ ಕರ್ಮಕಾಂಡದ ಬಗ್ಗೆ ಗೌಡರಿಂದ ನ್ಯಾಯ!

92ರ ಇಳಿ ವಯಸ್ಸಲ್ಲೂ ದೇವೇಗೌಡರ ಸಿಂಹ ಘರ್ಜನೆ: ಮೊಮ್ಮಗನ ಕರ್ಮಕಾಂಡದ ಬಗ್ಗೆ ಗೌಡರಿಂದ ನ್ಯಾಯ!

Published : Sep 17, 2024, 07:53 PM IST

ತೊಂಬತ್ತೆರಡರ ಹರೆಯದಲ್ಲಿ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಮತ್ತೆ ರಾಜಕೀಯ ರಣಕಣಕ್ಕೆ ಮರಳಿದ್ದಾರೆ. ಯಾರ ವಿರುದ್ಧ ಈ ಹೋರಾಟ, ಯಾರಿಗೆ ಈ ಸವಾಲು ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

ದೆಹಲಿ ಕೆಂಪು ಕೋಟೆಯಲ್ಲಿ ತ್ರಿವರ್ಣ ಧ್ವಜ ಹಾರಿಸಿದ ಹೆಮ್ಮೆಯ ಕನ್ನಡಿಗ. ಹಳ್ಳಿಯಿಂದ ದಿಲ್ಲಿವರೆಗೆ ರಾಜಕಾರಣ ಮಾಡಿ ಸೈ ಎನಿಸಿಕೊಂಡ ಗಟ್ಟಿಗ. ರಾಜಕೀಯ ರಣರಂಗದಲ್ಲಿ ಶಸ್ತ್ರತ್ಯಾಗ ಮಾಡಿದ್ದ ಭೀಷ್ಮ ಈಗ ಮತ್ತೆ ಮೈಕೊಡವಿ ಎದ್ದು ನಿಂತಿದ್ದಾರೆ. 92ರ ವಯೋವೃದ್ಧ ಗೌಡರು, ಸಿಂಹ ಘರ್ಜನೆ ಮಾಡಿದ್ದಾರೆ. ರಾಜಕೀಯ ವೈರಿಗಳಿಗೆ ರಣವೀಳ್ಯ ಕೊಟ್ಟಿದ್ದಾರೆ. ಮೊಮ್ಮಗನ ಪ್ರಮಾದವನ್ನು ನೆನೆದು ನ್ಯಾಯ ಮಾತನ್ನಾಡಿದ್ದಾರೆ. ಅಷ್ಟಕ್ಕೂ ಶಾಂತ ಸಮುದ್ರದಂತೆ ಸೈಲೆಂಟಾಗಿದ್ದ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಇದ್ದಕ್ಕಿದ್ದಂತೆ ರುದ್ರ ಸಮುದ್ರದಂತೆ ಭೋರ್ಗರೆದದ್ದು ಯಾಕೆ? ಗೌಡರ ಕೋಪ ಯಾರ ಮೇಲೆ? ಎನ್ನುವುದೇ ಇವತ್ತಿನ ಸುವರ್ಣ ಸ್ಪೆಷಲ್ ಆಗಿದೆ.

ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು 92ನೇ ವಯಸ್ಸಲ್ಲಿ ನಾನು ಹೋರಾಟ ಮಾಡ್ತೇನೆ ಅಂತ ಯಾರಾದ್ರೂ ಹೇಳ್ತಾರೆ ಎನ್ನುತ್ತಿದ್ದಾರೆ. ವಯೋವೃದ್ಧ ದೇವೇಗೌಡ್ರು, ರಾಜಕೀಯ ಭೀಷ್ಮರಾಗಿದ್ದಾರೆ. ನಾನು ಮತ್ತೆ ಎದ್ದು ನಿಂತಿದ್ದೇನೆ, ಅಂತ ಗುಡುಗಿದ್ದಾರೆ. ಹಾಗಾದ್ರೆ ಗೌಡರು ರಣವೀಳ್ಯ ಕೊಟ್ಟದ್ದು ಯಾರಿಗೆ ಗೊತ್ತಾ? ದೇವೇಗೌಡರ ಜೊತೆ ಜೊತೆಗೇ ರಾಜಕಾರಣ ಮಾಡ್ತಾ ಬಂದಿದ್ದ ಮಾಜಿ ಮುಖ್ಯಮಂತ್ರಿ ಎಸ್.ಎಂ ಕೃಷ್ಣ ರಾಜಕೀಯವಾಗಿ ತೆರೆಮರೆಗೆ ಸರಿದು ವರ್ಷಗಳೇ ಕಳೆದಿವೆ. ಆದರೆ ಒಬ್ಬ ದೇವೇಗೌಡ್ರು ಮಾತ್ರ ಇವತ್ತಿಗೂ ರಾಜಕೀಯ ಪಟ್ಟುಗಳನ್ನು ಹಾಕ್ತಾನೇ ಇದ್ದಾರೆ. ಅದು ಮಣ್ಣಿನ ಮಗನ ಸ್ಪೆಷಾಲಿಟಿ.

18:13ಸಿದ್ದು ಸೇನೆಯಲ್ಲಿ ಬಿರುಕು: ಅಹಿಂದ ಅರಸೊತ್ತಿಗೆ, ಸಾಹುಕಾರ್​ಗೆ ಸಿಗುತ್ತಾ ಪ್ರಚಂಡ ಪವರ್?
19:47ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
20:50ಸಿಂಹಾಸನ ಸಂಗ್ರಾಮದಲ್ಲಿ ಡಿಕೆ ಶಿವಕುಮಾರ್ 'ಸ್ನೇಹವ್ಯೂಹ': ಸಿದ್ದು ಸಿಪಾಯಿಗಳನ್ನೇ ಸೆಳೆಯುವ ಬಂಡೆಯ ಹೊಸ ದಾಳ!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
19:26ನಾಟಿ ಕೋಳಿ ಊಟ ಹೊಟ್ಟೆಗೆ ಬೀಳ್ತಿದ್ದಂತೆ, ರಾಜಕೀಯ ಶಾಶ್ವತವಲ್ಲ ಎಂದ ಸಿದ್ದಣ್ಣ; ಆದ್ರೆ ಅಸಲಿಯತ್ತೇ ಬೇರೆ?
20:42ಕುರ್ಚಿ ಆಟದಲ್ಲಿ ಆಟಗಾರರೇ ಅಂಪೈರ್​ಗಳು; ಸಿದ್ದು ಆಟ, ಡಿಕೆ ಹಠ; ಹೈಕಮಾಂಡ್‌ಗೆ ಸಿಂಹಾಸನ ಸಂಕಟ!
23:14ಡಿ.ಕೆ.ಶಿವಕುಮಾರ್‌ಗೆ ಇದ್ಯಾ ರಾಜಯೋಗ? ನೇರಾನೇರ ಕುರ್ಚಿ ಕಾಳಗಕ್ಕೆ ಇಳಿದದ್ದು ಅದೇ ಕಾರಣಕ್ಕಾ?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
21:10ಮಹಾಕ್ರಾಂತಿ ಮಹಾ ಮುಹೂರ್ತ ಫಿಕ್ಸ್: ಪದತ್ಯಾಗನಾ? ಪಟ್ಟಾಭಿಷೇಕನಾ? ದೆಹಲಿಯಲ್ಲಿ ಕ್ಲೈಮ್ಯಾಕ್ಸ್..!
21:28ಹೊಸ ಆಟ ಆರಂಭಿಸಿದ್ರಾ ಡಿಕೆ ಬ್ರದರ್ಸ್? ಸಿಎಂ ಸಿಂಹಾಸನಕ್ಕಾಗಿ ರಾಜಕೀಯ ರಣರಂಗ!
Read more