ಹಾಸನ ಟಿಕೆಟ್‌ ಭವಾನಿಗೋ? ಸ್ವರೂಪ್‌ಗೋ? ದೇವೇಗೌಡ್ರ ಜೊತೆ ಎಚ್‌ಡಿಕೆ ಚರ್ಚೆ

Mar 21, 2023, 8:09 PM IST

ಬೆಂಗಳೂರು(ಮಾ.21): ನಾನೇ ಹಾಸನ ಟಿಕೆಟ್‌ ಗೊಂದಲಕ್ಕೆ ತೆರೆ ಎಳೆಯುವೆ ಅಂತ ಮಾಜಿ ಮುಖ್ಯಮಂತ್ರಿ ಹೆಚ್‌.ಡಿ. ಕುಮಾರಸ್ವಾಮಿ ಅವರು ತಿಳಿಸಿದ್ದಾರೆ. ಇಂದು(ಮಂಗಳವಾರ) ಬೆಂಗಳೂರಿನ ಪದ್ಮನಾಭನಗರದಲ್ಲಿರುವ ಹೆಚ್‌.ಡಿ. ದೇವೇಗೌಡರ ನಿವಾಸಕ್ಕೆ ಆಗಮಿಸಿ ದೊಡ್ಡಗೌಡರ ಜತೆ ಚರ್ಚಿಸಿದ್ದಾರೆ. ಸ್ವರೂಪ್‌ ಪರ ಹೆಚ್‌.ಡಿ. ಕುಮಾರಸ್ವಾಮಿ ಬ್ಯಾಟಿಂಗ್‌ ಮಾಡಿದ್ದಾರೆ. ಸ್ವರೂಪ್‌ ಬಗ್ಗೆ ಟ್ರೆಂಡ್‌ ಚೆನ್ನಾಗಿದೆ ಅಂತ ದೊಡ್ಡಗೌಡರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಸ್ವರೂಪ್‌ಗೆ ಟಿಕೆಟ್‌ ಕೊಟ್ಟರೆ ಗೆಲುವು ನಿಶ್ಚಿತ, ಕಾರ್ಯಕರ್ತರಿಗೂ ಒಳ್ಳೆಯ ಸಂದೇಶ ರವಾನೆಯಾಗುತ್ತದೆ ಅಂತ ಹೇಳಿದ್ದಾರೆ. 

ಆದಿಚುಂಚನಗಿರಿ ಶ್ರೀಗಳ ಎಚ್ಚರಿಕೆಗೂ ಮಣಿಯದ ಬಿಜೆಪಿ ನಾಯಕರು! ದಾಖಲೆ ಸಂಗ್ರಹಿಸಲು ಮುಂದಾದ ಸಿ.ಟಿ.ರವಿ!