ಬೊಮ್ಮಾಯಿ ಸಂಪುಟದ ಬಿಗ್ ಎಕ್ಸ್ಲೂಸಿವ್ : ಹಳಬರಿಗೆಲ್ಲಾ ಮಂತ್ರಿಗಿರಿಯಿಂದ ಕೊಕ್

Jul 31, 2021, 1:55 PM IST

ಬೆಂಗಳೂರು (ಜು.31):  ರಾಜ್ಯ ನೂತನ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಅಧಿಕಾರ ಸ್ವೀಕರಿಸಿದ್ದಾರೆ. ಆದರೆ ಸಂಪುಟ ವಿಸ್ತರಣೆ ಮಾತ್ರ ಇನ್ನೂ ಕೂಡ ಜಿಜ್ಞಾಸೆಯಲ್ಲೇ ಮುಂದುವರಿದಿದೆ. ಹಳಬರೋ ಹೊಸಬರೋ ಎನ್ನುವ ಗೊಂದಲದಲ್ಲಿಯೇ ಮುಂದುವರಿಯುತ್ತಿದೆ. ಒಂದು ಕಡೆ ಹೊಸಬರಿಗೆ ಅವಕಾಶ ನೀಡಬೇಕೆಂಬ ಚರ್ಚೆ ನಡೆದರೆ ಇನ್ನೊಂದು ಕಡೆ ಹಳಬರಿಗೂ ಆದ್ಯತೆ ನೀಡಿದರೆ ಮುಂದಿನ ಚುನಾವಣಾ ದೃಷ್ಟಿಯಿಂದ ಅನುಕೂಲವೆನ್ನಲಾಗುತ್ತಿದೆ.

ರಾಜ್ಯ ಸಚಿವ ಸಂಪುಟ ವಿಸ್ತರಣೆ ಜಿಜ್ಞಾಸೆ : ಹೊಸಬರೋ, ಹಳಬರೋ..?

ಆದರೆ ಇದೀಗ ಬೊಮ್ಮಾಯಿ ನೂತನ ಸಂಪುಟದಲ್ಲಿ ಹಿರಿಯ ಸಚಿವರುಗಳಿಗೆ ಕೊಕ್ ನೀಡಲಾಗುತ್ತಿದೆ ಎನ್ನಲಾಗಿದೆ. ಹೊಸ ಸಂಪುಟದಲ್ಲಿ ಹೊಸಬರಿಗೆ ಅವಕಾಶ ನೀಡಲಾಗುತ್ತದೆ ಎನ್ನಲಾಗುತ್ತಿದೆ. ಯಾರಿಗೆ ಕೊಡಬೇಕು, ಯಾರಿಗೆ ಬೇಡ ಎನ್ನುವ ಚರ್ಚೆಯೂ ಒಳಗೊಳಗೆ ಜೋರಾಗಿದೆ.