ಕಾಂಗ್ರೆಸ್ ಹಿರಿಯ ನಾಯಕ ಆರ್ವಿ ದೇಶಪಾಂಡೆ ವಿರುದ್ಧ ಡಿಕೆ ಶಿವಕುಮಾರ್ ನೇರ ವಾಗ್ದಾಳಿ ನಡೆಸಿದ್ದಾರೆ. ಸಿದ್ದರಾಮಯ್ಯ ಟೀಂಗೂ ವಾರ್ನಿಂಗ್ ನೀಡಿದ್ದಾರೆ. ಇತ್ತ ಮತಾಂತರ ನಿಷೇಧ ಕಾಯ್ದೆ ಗದ್ದಲ, ತಮಿಳುನಾಡಿನಲ್ಲಿ 1,500 ವರ್ಷಗಳ ಹಳೇ ದೇವಸ್ಥಾನ ಸೇರಿ 8 ಹಳ್ಳಿಗಳನ್ನೇ ಗುಳುಂ ಮಾಡಿದ ವಕ್ಫ್ ಬೋರ್ಡ್ ಸೇರಿದಂತೆ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.
ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಭಾರತ್ ಜೋಡೋ ಯಾತ್ರೆ ಆರಂಭಿಸಿದೆ. ಇದೀಗ ಕೇರಳದಿಂದ ಯಾತ್ರೆ ಕರ್ನಾಟಕ ಪ್ರವೇಶಕ್ಕೆ ಸಜ್ಜಾಗಿದೆ. ಆದರೆ ರಾಜ್ಯ ಕಾಂಗ್ರೆಸ್ನ ಡಿಕೆ ಶಿವಕುಮಾರ್ ಬಣ ಈ ಯಾತ್ರೆ ಯಶಸ್ಸುಗೊಳಿಸಲು ಶ್ರಮಿಸುತ್ತಿದ್ದರೆ, ಮತ್ತೊಂದು ಬಣ ಯಾತ್ರೆಯಿಂದ ದೂರ ಸರಿದಿದೆ. ಇದು ಭಿನ್ನಮತದ ಕಿಡಿ ಹೊತ್ತಿಸಿದೆ. ಭಾರತ್ ಜೋಡೋ ಯಾತ್ರೆಗೆ ಯಾರು ಕೆಲಸ ಮಾಡಲ್ಲ ಅವರಿಗೆ ವಿಶ್ರಾಂತಿ ನೀಡಬೇಕಾಗುತ್ತದೆ. ಯಾತ್ರೆಗೆ ಇಬ್ಬರು ಶಾಸಕರನ್ನು ನಿಗದಿಪಡಿಸಿದ್ದೇವೆ. ಕೆಲಸ ಮಾಡದಿದ್ದರೆ ಟಿಕೆಟ್ ಸಿಗುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪರೋಕ್ಷ ಎಚ್ಚರಿಕೆ ನೀಡಿದ್ದಾರೆ. ಡಿಕೆಶಿ ವಾರ್ನಿಂಗ್ ಮಾತು ಇಲ್ಲಿದೆ